![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ನದಿ ದಡದಲ್ಲಿದ್ದರೂ ಕುಡಿವ ನೀರಿಲ್ಲ
ಮಹದೇವಪುರ, ಜಕ್ಕನಹಳ್ಳಿ, ಹಾಲಗೂಡುಗಳಲ್ಲಿ ನೀರಿನ ಸಮಸ್ಯೆ
Team Udayavani, May 1, 2019, 2:44 PM IST
![mandya-2-tdy..](https://www.udayavani.com/wp-content/uploads/2019/05/mandya-2-tdy..-620x398.jpg)
ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದಲ್ಲಿ ನೀರಿಗಾಗಿ ಮಹಿಳೆಯರು ಬಿಂದಿಗೆ ಹಿಡಿದು ನಿಂತಿರುವುದು.
ಶ್ರೀರಂಗಪಟ್ಟಣ: ಕಾವೇರಿ ನದಿ ಸಮೀಪವಿದ್ದರೂ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಬಿಸಿಲಿನ ತಾಪಕ್ಕೆ ದಿನೇದಿನೆ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಮಹದೇವಪುರ ಗ್ರಾಪಂ ಸದಸ್ಯ ಎಂ.ವಿ.ಕೃಷ್ಣ ಆಗ್ರಹಿಸಿದ್ದಾರೆ.
ಗ್ರಾಮದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಯುತ್ತಿದೆ. ಹಳ್ಳ, ಕೊಳ್ಳಗಳು ಬತ್ತಿಹೋಗಿವೆ. ದನ, ಕರುಗಳಿಗೆ ಕುಡಿಯಲು ನೀರಿಲ್ಲ. ಬಟ್ಟೆ ತೊಳೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕುಡಿಯುವ ನೀರಿಗಾಗಿ ರೈತರು ತಮ್ಮ ಜಮೀನಿನಲ್ಲಿ ಕೊರೆಸಿರುವ ಕೊಳವೇ ಭಾಗಗಳನ್ನೇ ಜನರು ಆಶ್ರಯಿಸಿದ್ದಾರೆ. ತಾಲೂಕಿನಲ್ಲಿರುವ ಬಹುತೇಕ ಕೆರೆಗಳು ಬತ್ತಿಹೋಗಿವೆ. ಮಹದೇವಪುರ ಗ್ರಾಮ ಅಲ್ಲದೆ ಜಕ್ಕನಹಳ್ಳಿ, ಹಾಲಗೂಡು ಕೆರೆಗಳಲ್ಲಿ ನೀರಿಲ್ಲ. ಇದರಿಂದ ರೈತರು ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ರೈತರು ಜಮೀನಿನ ನೀರನ್ನೇ ಆಶ್ರಯಿಸುವಂತಾಗಿದೆ.
ಕಲುಷಿತ ನೀರು ಪೂರೈಕೆ: ಕಾವೇರಿ ನದಿಯಿಂದ ಕಚ್ಚಾ ನೀರನ್ನು ಈ ಟ್ಯಾಂಕ್ಗಳಿಗೆ ತುಂಬಿಸಿ ನಲ್ಲಿಗಳ ಮೂಲಕ ಪೂರೈಸಲಾಗುತ್ತಿದೆ. ಸ್ನಾನ ಮಾಡಲಿಕ್ಕೂ ಯೋಗ್ಯವಲ್ಲದ ನೀರನ್ನು ನಲ್ಲಿಗಳ ಮೂಲಕ ಬಿಡುತ್ತಿದ್ದಾರೆ. ಈ ನೀರಲ್ಲಿ ಸ್ನಾನ ಮಾಡಿದರೆ ಚಮರ್ವ್ಯಾದಿಗಳು ಕಾಣಿಸಿಕೊಳ್ಳುತ್ತಿವೆ. 11 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಸದ್ಯ ಒಂದೇ ಒಂದು ಶುದ್ಧ ಕುಡಿಯುವ ಘಟಕದಿಂದ ಜನರು ಸಾಲಿನಲ್ಲಿ ನಿಂತು ಕುಡಿಯುವ ನೀರು ಹಿಡಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಶೀಘ್ರ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಪೂರ್ವ ಸಿದ್ಧತೆ ನಡೆಸಬೇಕು ಎಂದು ಗ್ರಾಮದ ಎಂ.ಕೃಷ್ಣ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ](https://www.udayavani.com/wp-content/uploads/2024/07/KRS-150x84.jpg)
KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ
KRS Dam: ಶೀಘ್ರ ಕೆಆರ್ಎಸ್ ಡ್ಯಾಂ ಭರ್ತಿ 92 ಗ್ರಾಮಗಳಲ್ಲಿ ಪ್ರವಾಹ ಭೀತಿ
![Cheluvaraya-swamy](https://www.udayavani.com/wp-content/uploads/2024/07/Cheluvaraya-swamy-150x90.jpg)
Cauvery Water: ಎಚ್ಡಿಕೆ ಕಾವೇರಿ ಸಮಸ್ಯೆ ಬಗೆಹರಿಸಿದ್ರೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ
![HDK](https://www.udayavani.com/wp-content/uploads/2024/07/HDK-3-150x90.jpg)
Cauvery Water Problem; ಸಾಯುವುದರೊಳಗೆ ಕಾವೇರಿ ಸಮಸ್ಯೆಗೆ ಮುಕ್ತಿ: ಎಚ್ಡಿಕೆ
![1-eee](https://www.udayavani.com/wp-content/uploads/2024/07/1-eee-150x82.jpg)
Mandya; ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.