ಬೇಬಿ ಬೆಟ್ಟದ ಸದಾಶಿವ ಶ್ರೀ ವಿಧಿವಶ
Team Udayavani, Jul 5, 2018, 7:00 AM IST
ಪಾಂಡವಪುರ(ಮಂಡ್ಯ): ತಾಲೂಕಿನ ಬೇಬಿ ಬೆಟ್ಟದ ಸದಾಶಿವ ಸ್ವಾಮೀಜಿ ಹೃದಯಾಘಾತದಿಂದ ಬೆಂಗಳೂರಿನ ಭಕ್ತರ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಸದಾಶಿವ ಸ್ವಾಮೀಜಿ ಕುಟುಂಬಸ್ಥರ ವಿವಾಹಕ್ಕೆಂದು ತೆರಳಿದ್ದರು. ಮಂಗಳವಾರ ರಾತ್ರಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ ಭಕ್ತರ ಮನೆಯಲ್ಲಿ ಮಲಗಿದ್ದರು. ಬೆಳಗ್ಗೆ 5 ಗಂಟೆ ವೇಳೆಗೆ ಪೂಜೆಗೆಂದು ಎಬ್ಬಿಸಿದಾಗ ಅವರು ಸಾವನ್ನಪ್ಪಿರುವುದು ಗೊತ್ತಾಯಿತು. ಸದಾಶಿವ ಸ್ವಾಮೀಜಿ ಪಾರ್ಥಿವ ಶರೀರವನ್ನು ಬುಧವಾರ ಸಂಜೆ 4 ಗಂಟೆಗೆ ಶ್ರೀಮಠಕ್ಕೆ ತರಲಾಯಿತು.
ಮದ್ದೂರು, ಮಂಡ್ಯ, ಪಾಂಡವಪುರ ಪಟ್ಟಣ, ಚಾಗಶೆಟ್ಟಹಳ್ಳಿ, ಬೇಬಿ, ಚಿನಕುರಳಿ ಗ್ರಾಮದಲ್ಲಿ ಭಕ್ತರು
ಅಂತಿಮ ದರ್ಶನ ಪಡೆದರು. ಸದಾ ಶಿವ ಸ್ವಾಮೀಜಿ ಹಾಸನ ಜಿಲ್ಲೆಯ ಸತ್ತಿಗರಹಳ್ಳಿ ಗ್ರಾಮದವರು, ಬಾಲ್ಯದಿಂದಲೂ ಸಿದ್ಧಗಂಗಾಮಠದಲ್ಲಿಯೇ ಇದ್ದು ಶಿವಕುಮಾರ ಶ್ರೀಗಳಿಂದ ಶಿವದೀಕ್ಷೆ ಪಡೆದರು. ನಂತರ ಬೇಬಿಬೆಟ್ಟದ ಮರೀದೇವರು ಸ್ವಾಮೀಜಿ ಶಿಷ್ಯರಾದರು. ನಂತರ 1979-80ರಲ್ಲಿ ಬೇಬಿ
ಬೆಟ್ಟದ ಶ್ರೀರಾಮಯೋಗಿ ಮಠದ ಪೀಠಾಧ್ಯಕ್ಷರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್