ಮುಖ್ಯಮಂತ್ರಿಗಳಿಗೆ ಶ್ರೀನಿವಾಸ್‌ಪ್ರಸಾದ್‌ ನೇರ ಸವಾಲು


Team Udayavani, Feb 15, 2017, 12:34 PM IST

mys3.jpg

ನಂಜನಗೂಡು: “ನನ್ನನ್ನು ಸೋಲಿಸುವುದೇ ತಮ್ಮ ಹಾಗೂ ಸರ್ಕಾರದ ಗುರಿ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದಿಲ್ಲಿ ಶ್ರೀನಿವಾಸ್‌ ಪ್ರಸಾದ ಪ್ರತಿ ಸವಾಲು ಹಾಕಿ ಪಂಥಾಹ್ವಾನ ನೀಡಿದರು.

ಸಿಂಧುವಳ್ಳಿಯ ಸಂತಾನ ಗಣಪತಿ ಕಲ್ಯಾಣ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಸಾದ್‌ ಬೆಂಬಲಿಗರ ಬಿಜೆಪಿ ಸೇರ್ಪಡೆ (ಸಮ್ಮಿಲನ) ಸಮಾರಂಭದಲ್ಲಿ ಮಾತನಾಡಿ, ಉಪ ಚುನಾವಣೆಯಲ್ಲಿ ತಾವು ಹಾಗೂ ತಮ್ಮ ಸರ್ಕಾರ ಪ್ರಸಾದರನ್ನು ಸೋಲಿಸಲು ಇಲ್ಲಿಯೇ ಠಿಕಾಣಿ ಹೂಡುತ್ತೇವೆ.

ಅವರನ್ನು ಸೋಲಿಸುವುದೇ ನಮ್ಮೆಲ್ಲರ ಗುರಿ ಎಂದಿದ್ದನ್ನು ಪ್ರಸ್ತಾಪಿಸಿದ ಪ್ರಸಾದ್‌, ಉಪ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಸೋಲಿಸಿದರೆ ತಕ್ಷಣ ತಾವು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಲು ಸಿದ್ಧ. ಸಿದ್ದರಾಮಯ್ಯನವರ ಕಾಂಗ್ರೆಸ್‌ ಸೋತರೆ ತಕ್ಷಣ ರಾಜೀನಾಮೆ ನೀಡಲು ನೀವು ಸಿದ್ಧರಿದ್ದಿರಾ? ಎಂದು ಮುಖ್ಯಮಂತ್ರಿಗಳಿಗೆ ಅವರು ನೇರವಾಗಿ ಸವಾಲೆಸೆದರು.

ಮಿತ್ರ ದ್ರೋಹಿ: ರಾಜ್ಯದ ರಾಜಕಾರಣದಲ್ಲಿ ಮಿತ್ರ ದ್ರೋಹಿ ಹಾಗೂ ಪಿತೂರಿ ರಾಜಕಾರಣಿ ಸಿದ್ದರಾಮಯ್ಯ. ಉಪಚುನಾವಣೆಗೆ ನಿಮ್ಮ ಪಿತೂರಿ ರಾಜಕಾರಣದ ಮಿತ್ರದ್ರೋಹವೇ ಕಾರಣ. ಯಾವ ಮಂತ್ರಿಗಳನ್ನು ಕರೆ ತರುತ್ತೀರಿ ಮುಖ್ಯ ಮಂತ್ರಿಗಳೇ? ಮೇಟಿನಾ, ಜಾರಕಿ ಹೊಳಿನಾ ಅಥವಾ ಬ್ಲೂಫಿಲಂ ಖ್ಯಾತಿಯ ಸೇs…, ಯಾರನ್ನಾದರೂ ಕರೆತನ್ನಿ, ತನಗೇನು ಭಯವಿಲ್ಲ ಎಂದು ಮುಖ್ಯಮಂತ್ರಿಗಳನ್ನು ಕಾಲೆಳೆದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪಡಿತರ ಆಹಾರ ಸಾಮಗ್ರಿಗೆ ಪ್ರತಿ ತಿಂಗಳೂ ಕೇಂದ್ರ 400 ಕೋಟಿ ರೂ. ನೀಡುತ್ತಿಲ್ಲವೆ ಸಿದ್ದರಾಮಯ್ಯನವರೇ. ಅನ್ನಭಾಗ್ಯ ನಿಮ್ಮದೇ ಹೇಗಾದೀತು? ಶಾದಿ ಭಾಗ್ಯದ ಫ‌ಲ ಎಷ್ಟು ಜನ ಬಡವರಿಗೆ ಸಂದಿದೆ. ಯಾವುದೇ ಭಾಗ್ಯವೂ ನಿಮ್ಮಂದಾಗಿ ಅಶಕ್ತರಿಗೆ ದೊರೆಯದಂತಾಗಿದೆ. ಪ್ರಸಾದ್‌ ಅಂತಹವರು ಕಾಂಗ್ರೆಸ್‌ ತ್ಯಜಿಸಿದ ಮೇಲೆ ಆ ಪಕ್ಷಕ್ಕೆ ಶನಿ ಕಾಟ ಪ್ರಾರಂಭವಾಗಿದೆ. ಇದನ್ನೇ ಪೂಜಾರಿಯವರು ಹೇಳುತ್ತಿರುವುದು. 15ರಿಂದ 20 ಹಿರಿಯ ಕಾಂಗ್ರೆಸ್‌ ನಾಯಕರು ಈಗಾಗಲೆ ಬಿಜೆಪಿ ಸಂಪರ್ಕದಲ್ಲಿದ್ದಾರೆ. ಪ್ರಾಮಾಣಿಕ ರಾಜಕಾರಣಿಯಾದ ಪ್ರಸಾದರೇ ಹಳೆ ಮೈಸೂರಿನಲ್ಲಿ ನಮಗೆಲ್ಲರಿಗೂ ನಾಯಕರು ಎಂದು ತಿಳಿಸಿದರು.

ಪ್ರಸಾದ ಬಿಜೆಪಿಗೆ ಸೇರಿರುವುದು ಯೋಗಾಯೋಗ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ, 2018ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಸುಯೋಗದ ಮೊದಲ ಮೆಟ್ಟಲು ನಿರ್ಮಿಸುವ ಸೌಭಾಗ್ಯ ನಂಜುಂಡೇಶ್ವರನ ಸನ್ನಿಧಿಗೆ ಸಿಕ್ಕಿದೆ. ಈ ಅವಕಾಶ ಉಪಯೋಗಿಸಿಕೊಂಡು ಪ್ರಸಾದರನ್ನು ಅಭೂತಪೂರ್ವ ಮತಗಳಿಂದ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ. ಸಂಸದರಾದ ಪ್ರತಾಪ ಸಿಂಹ ಹಾಗೂ ಕೆ.ಆರ್‌.ಮೋಹನ್‌ ಕುಮಾರ್‌, ಮಾಜಿ ಸಚಿವರಾದ ರಾಮದಾಸ್‌, ಮುಡಾ ಅಧ್ಯಕ್ಷರಾದ ಬಸವೇಗೌಡ, ನಾಗೇಂದ್ರ, ಪಕ್ಷದ ನಾಯಕರಾದ ಫ‌ಣೀಶ್‌, ಮಹದೇವು ಅಳಿಯ ಜಯದೇವ್‌, ಅಶೋಕ್‌, ರಾಮಸ್ವಾಮಿ, ಕಾಪು ಸಿದ್ದಲಿಂಗ ಸ್ವಾಮಿ, ಇಲಿಯಾಸ್‌ ಅಹ್ಮದ್‌, ಹರ್ಷವರ್ದನ, ಜಿಪಂ ಸದಸ್ಯರಾದ ದಯಾನಂದ್‌,

ಸದಾನಂದ್‌, ಮಂಗಳಾ ಸೋಮಶೇಖರ್‌, ಮಾಜಿ ಸದಸ್ಯರಾದ ಡಾ.ಶಿವರಾಂ ಸಿದ್ದವೀರಪ್ಪ, ಕೆಂಪಣ್ಣ, ಚಿಕ್ಕರಂಗ ನಾಯಕ, ಡಾ.ಶ್ಯೆಲಾ ಬಾಲರಾಜು, ನಗರಸಭಾ ಉಪಾಧ್ಯಕ್ಷ ಪ್ರದೀಪ್‌ ಸದಸ್ಯರಾದ ಆನಂದ ಮಹದೇವಸ್ವಾಮಿ, ಸುಧಾ ಮಹೇಶ, ಗಜ ಇತರರಿದ್ದರು. ರೈತ ಮೋರ್ಚಾ ನಾಯಕ ಎನ್‌.ಆರ್‌.ಕೃಷ್ಣಪ್ಪ ಗೌಡ ಸ್ವಾಗತಿಸಿದ ಸಮಾರಂಭವನ್ನು ವಿನಯಕುಮಾರ್‌ ನಿರೂಪಿಸಿದರು. ಕುಂಬರಳ್ಳಿ ಸುಬ್ಬಣ್ಣ ಸೇರ್ಪಡೆಯ ಮುಖಂಡರ ಯಾದಿ ಓದಿದರು.

ಒರಿಜನಲ್‌ ಸೀಡಿ ನಮ್ಮಲ್ಲಿದೆ. ಕಾಂಗ್ರೆಸ್‌ ನಲ್ಲಿರುವುದು ತಿರುಚ ಲಾದ ಸೀಡಿ. ನೀವು ಅದನ್ನು ಹಾಕಿ ನಾವು ಒರಿಜನಲ್‌ ಸೀಡಿಯನ್ನು ಜನತೆಯ ಮುಂದಿಡುತ್ತೇವೆ.
-ಅರವಿಂದ ನಿಂಬಾವಳಿ, ಶಾಸಕ

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಸತ್ಯ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ

Suraj Revanna ಸತ್ಯ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ

Untitled-1

BJP-JDS 19 ಸಂಸದರಿದ್ರೂ ಬಜೆಟ್‌ನಲ್ಲಿ ರಾಜ್ಯಕ್ಕೆ ನಾಮ: ಎಂ.ಲಕ್ಷ್ಮಣ್‌

Army Air Defence: ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೈಸೂರು ಮಹಿಳೆ

Army Air Defence: ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೈಸೂರು ಮಹಿಳೆ

Mysore: ಕೆಆರ್‌ ಎಸ್‌ ಗೆ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ, ಅಧಿಕಾರಿಗಳ ಜತೆ ಸಮಾಲೋಚನೆ

Mysore: ಕೆಆರ್‌ ಎಸ್‌ ಗೆ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ, ಅಧಿಕಾರಿಗಳ ಜತೆ ಸಮಾಲೋಚನೆ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.