ಕೆಸರು ಗದ್ದೆಯಾಗಿರುವ ತಾಲೂಕು ಕ್ರೀಡಾಂಗಣ


Team Udayavani, Apr 11, 2017, 1:15 PM IST

mys7.jpg

ಎಚ್‌.ಡಿ.ಕೋಟೆ: ಒಂದು ಕಡೆ ನಾಟಿ ಮಾಡಲು ಸಿದ್ಧ ಪಡಿಸಿದ ಕೆಸರು ಗದ್ದೆಯಂತಿರುವ ಮೈದಾನ, ಮತ್ತೂಂದು ಕಡೆ ಬರಗಾಲದ ಬೇಸಿಗೆಯಲ್ಲೂ ಬತ್ತ ದಂತಿರುವ ಕೆರೆಯ ಮಾದರಿಯ ನೀರು ಶೇಖರಣೆ, ಇದು ತಾಲೂಕು ಕೇಂದ್ರ ಸ್ಥಾನದ ಕ್ರೀಡಾಂಗಣದ ಅವ್ಯವಸ್ಥೆ. ತಾಲೂಕು ಕೇಂದ್ರ ಸ್ಥಾನದಲ್ಲಿ ವಿಶಾಲವಾದ ಕ್ರೀಡಾಂಗಣ ಇದೆಯಾದರೂ ನಿರ್ವಹಣೆ ಇಲ್ಲದ  ಕಾರಣ ಹದಗೆಟ್ಟು ಕತ್ತಲಾಗುತ್ತಿದ್ದಂತೆಯೇ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಕ್ರೀಡಾಂಗಣದಲ್ಲಿ ವಿದ್ಯುತ್‌ ದೀಪಗಳ ವ್ಯವಸ್ಥೆ, ಕುಡಿಯುವ ನೀರು, ರಸ್ತೆ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯ ಗಳಿಲ್ಲದೇ ಇಡೀ ಸ್ಟೇಡಿಯಂ ಆವರಣದಲ್ಲಿ ಸ್ಮಶಾನ ಮೌನ ಆವರಿಸಿದೆ. ತಾಲೂಕು ಕೇಂದ್ರ ಸ್ಥಾನದ ಕ್ರೀಡಾಂಗಣ ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆ ಪಡುವಂತಾಗಿದೆಯಾದರೂ ತಾಲೂಕು ಆಡಳಿವತ ವಾಗಲಿ, ಜನ ಪ್ರತಿನಿಧಿಗಳಾಗಲೇ ಕ್ರೀಡಾಂಗಣದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಮುಂದಾಗಿಲ್ಲ.

ಮಳೆಗೆ ಬಂದ್ರೆ ಕೆರೆಯಂತಾಗುವ ಆವರಣ: ಕಳೆದ ಸಾಲಿನಲ್ಲಿ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗದೆ ರಾಜ್ಯ ಭೀಕರ ಬರಗಾಲದಿಂದ ತತ್ತರಿಸುತ್ತಿದೆ. ಕುಡಿಯುವ ಹನಿ ನೀರಿಗಾಗಿ ಜನ ಜಾನುವಾರುಗಳು ಪರಿತಪಿಸುತ್ತಿವೆ. ಹೀಗಿರುವಾಗ ಕಳೆದ 2 ದಿನಗಳ ಹಿಂದಷ್ಟೇ ಬಿದ್ದ ಮಳೆಗೆ ತಾಲೂಕಿನ ಕ್ರೀಡಾಂಗಣದ ತುಂಬೆಲ್ಲಾ ನೀರು ತುಂಬಿಕೊಂಡು ಕೆರೆಯನ್ನು ನಾಚಿಸುವಂತಹ ಸ್ಥಿತಿ ನಿರ್ಮಾಣಗೊಂಡರೆ, ಇನ್ನೊಂದು ಕಡೆಯ ಸ್ಟೇಡಿಯಂ ಆವರಣದ ತುಂಬೆಲ್ಲಾ ಕೆಸರು ತುಂಬಿಕೊಂಡು ನಾಟಿ ಮಾಡಲು ಸಿದ್ಧಪಡಿಸಿದ ಕೆಸರು ಗದ್ದೆಯಂತಾಗಿದೆ. ಇದರಿಂದ ದಿನದ ಯಾವುದೋ ಒಂದು ಸಮಯವನ್ನು ಸ್ಟೇಡಿಯಂನಲ್ಲಿ ಕಾಲ ಹರಣ ಮಾಡುತ್ತಿದ್ದ  ಕ್ರೀಡಾಳುಗಳು ಸ್ಟೇಡಿಯಂ ನತ್ತ ಮುಖ ಮಾಡಲು ಹಿಂದೇಟು ಹಾಕುವಂತಾಗಿದೆ.

ಮೂಲಭೂತ ಸೌಕರ್ಯ ಕೊರತೆ: ತಾಲೂಕು ಕ್ರೀಡಾಂಗಣ ಅಂದ ಮೇಲೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಚರಂಡಿ, ವಿದ್ಯುತ್‌ ದೀಪಗಳು ಇರಬೇಕು. ಆದರೆ ಇಲ್ಲಿ ಯಾವ ಸೌಲಭ್ಯಗಳು ಕಾಣ ಸಿಗದು. ಇದರಿಂದ ಕೊಂಚ ಮಳೆಯಾದರೂ ತಾಲೂಕಿನ ವಿವಿಧ ಬಡಾವಣೆಗಳ ಚರಂಡಿ ನೀರು ಇಳಿಜಾರು ಪ್ರದೇಶದಲ್ಲಿರುವ ಕ್ರೀಡಾಂಗಣದ ಆವರಣದಲ್ಲಿ ಶೇಖರಣೆಯಾಗುತ್ತಿದೆ.

ಕಲುಷಿತ ನೀರು ಸ್ಟೇಡಿಯಂ ಸೇರದಂತೆ ಸಂಬಂಧ ಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಕ್ರೀಡಾಂಗಣದಲ್ಲಿ ಕ್ರೀಡಾ ವೀಕ್ಷಕರಿಗೆ ನಿರ್ಮಾಣ ಮಾಡಿರುವ ವೀಕ್ಷಣೆ ಸ್ಥಳದ ಮೆಟ್ಟಿಲುಗಳ ಕೆಳಗೆ ಬಟ್ಟೆ ಬದಲಾಸಿಕೊಳ್ಳಲು 4 ಕೊಠಡಿಗಳನ್ನು ನಿರ್ಮಿಸಲಾಗಿದೆಯಾದರೂ ನಿರ್ವಹಣೆ ಇಲ್ಲದೆ ದಿನದ 24ಗಂಟೆ ಬಾಗಿಲು ತೆರೆದಿರುವ ಕೊಠಡಿಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿವೆ. 

ಅಭಿವೃದ್ಧಿಪಡಿಸಿ: ಬರದ ಬೇಸಿಗೆ ಕಾಲದಲ್ಲಿ ಬಿದ್ದ ಮೊದಲ ಮಳೆಗೆ ಕ್ರೀಡಾಂಗಣದ ಸ್ಥಿತಿ ಹೀಗಾದ ಮೇಲೆ ಇನ್ನು ಮುಂಗಾರು ಮಳೆ ಆರಂಭ ಗೊಳ್ಳುತ್ತಿ ದ್ದಂತೆಯೇ ಸ್ಟೇಡಿಯಂ ಸ್ಥಿತಿ ಹೇಗಿರುವುದಿಲ್ಲ ಅನ್ನುವು ದನ್ನು ಮನಗಂಡು ಇನ್ನಾದರೂ ಅವ್ಯವಸ್ಥೆಗಳ ಅಗರವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತ ವಾಗಿರುವ ಕ್ರೀಡಾಂಗಣವನ್ನು ತಾಲೂಕು ಆಡಳಿತ ಇಲ್ಲವೆ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕ್ರೀಡಾಂ ಗಣದ ಅಭಿವೃದ್ಧಿ ಪಡಿಸುವಂತೆ ತಾಲೂಕಿನ ಜನತೆ ಹಾಗೂ ಕ್ರೀಡಾ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಆಶ್ರಯ ನಿವೇಶನಗಳ ಮಂಜೂರಾತಿ ಸಂದರ್ಭದಲ್ಲಿ ಎಚ್‌.ಡಿ.ಕೋಟೆ ತಾಲೂಕು ಕ್ರೀಡಾಂಗಣ ಮಂಜೂ ರಾಗಿದೆ. ಸ್ಟೇಡಿಯಂ ಬಡಾವಣೆಯಲ್ಲಿ ಮನೆಗಳ ನಿರ್ಮಾಣ ತಡವಾಗಿ ಆರಂಭಗೊಂಡ ಹಿನ್ನೆಲೆ ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚು ಆದತ್ಯೆ ನೀಡಿರಲಿಲ್ಲ. ಇತ್ತೀಚೆಗಷ್ಟೇ ಶಾಸಕ ಎಸ್‌. ಚಿಕ್ಕಮಾದು ಅವರೊಡಗೂಡಿ ಸ್ಟೇಡಿಯಂ ಸ್ಥಳ ಪರಿಶೀಲನೆ ನಡೆಸಿದ್ದು ಮುಖ್ಯಮಂತ್ರಿಗಳ ವಿಶೇಷ ಅನುದಾನ ಅಡಿಯಲ್ಲಿ ರಸ್ತೆ ಚರಂಡಿ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಂತಹಂತವಾಗಿ ತ್ವರಿತಗತಿಯಲ್ಲಿ ಕ್ರಮ ವಹಿಸಲಾಗುವುದು.
-ವಿಜಯಕುಮಾರ್‌, ಮುಖ್ಯಾಧಿಕಾರಿಗಳು, ಪ.ಪಂಚಾಯಿತಿ

ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದ ಕೀಡಾಂಗಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಕ್ರೀಡಾಭಿಮಾನಿಗಳಲ್ಲಿ ನೋವುಂಟು ಮಾಡಿದೆ. ವಿಶಾಲವಾದ ಕ್ರೀಡಾಂಗಣ ಇದೆಯಾದರೂ ಸರಿಯಾದ ನಿರ್ವಹಣೆ ಇಲ್ಲದೆ ರಾತ್ರಿ ಯಾಗುತ್ತಿದ್ದಂತೆಯೇ ಅನೈತಿಕ ಚಟು ವಟಿಕೆಯ ತಾಣವಾಗಿದ್ದು ಸಂಬಂಧಪಟ್ಟ ಪುರಸಭೆ ಹಾಗೂ ಚುನಾಯಿತ ಪ್ರತಿನಿಧಿಗಳು ಕ್ರೀಡಾಂಗ ಣಕ್ಕೆ ಮೂಲ ಸೌಲಭ್ಯ ಒದಗಿಸುವುದರ ಜೊತೆಗೆ ಕಾವಲುಗಾರರನ್ನು ನಿಯೋಜನೆಗೊಳಿಸಿ ಅವ್ಯವಹಾರ ತಡೆಗಟ್ಟಬೇಕು.
-ಉಮೇಶ್‌. ಬಿ. ನೂರಲಕುಪ್ಪೆ, ಕ್ರೀಡಾಭಿಮಾನಿ

* ಬಸವರಾಜು ಎಚ್‌.ಬಿ

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಸತ್ಯ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ

Suraj Revanna ಸತ್ಯ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ

Untitled-1

BJP-JDS 19 ಸಂಸದರಿದ್ರೂ ಬಜೆಟ್‌ನಲ್ಲಿ ರಾಜ್ಯಕ್ಕೆ ನಾಮ: ಎಂ.ಲಕ್ಷ್ಮಣ್‌

Army Air Defence: ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೈಸೂರು ಮಹಿಳೆ

Army Air Defence: ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೈಸೂರು ಮಹಿಳೆ

Mysore: ಕೆಆರ್‌ ಎಸ್‌ ಗೆ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ, ಅಧಿಕಾರಿಗಳ ಜತೆ ಸಮಾಲೋಚನೆ

Mysore: ಕೆಆರ್‌ ಎಸ್‌ ಗೆ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ, ಅಧಿಕಾರಿಗಳ ಜತೆ ಸಮಾಲೋಚನೆ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.