ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಘಟನೆಗಳ ಪ್ರತಿಭಟನೆ
Team Udayavani, Oct 2, 2020, 12:59 PM IST
ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರಿನ ಎಲ್ಲಾ ಪಿಂಚಣಿದಾರರು, ನಿವೃತ್ತ ಸಂಘಟನೆಗಳು ಜತೆಯಾಗಿ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದವು.
ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟಕ್ಕೆ ಸಂಯೋಜಿತವಾಗಿರುವ ಪಿಂಚಣಿದಾರರ, ನಿವೃತ್ತರ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಶೋಷಣೆ ವಿರುದ್ಧ ಹೋರಾಡುತ್ತಿರುವ ಜನತೆಗೆ ಸೌಹಾರ್ದ ಸೂಚಿಸಲು ಮತ್ತು ಹಿರಿಯ ನಾಗರಿಕರಿಗೆ ಘನತೆ ಬದುಕಿನಜವಾಬ್ದಾರಿಯನ್ನುಸಮಾಜನಿರ್ವಹಿಸಲು ಒತ್ತಾಯಿಸಿದರು.
ಇಂದು ಜಗತ್ತಿನಾದ್ಯಂತ 100 ರಾಷ್ಟ್ರಗಳ ಪಿಂಚಣಿದಾರರ ನಿವೃತ್ತದಾರರ ಸಂಘಟನೆಗಳ ಜತೆಗೂಡಿ ಜಾಗತಿಕ ದಿನವನ್ನಾಗಿ ಆಚರಿಸಲು ಕರೆ ನೀಡಲಾಗಿದ್ದು, ಮೈಸೂರಿನಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು. ಬಂಡವಾಳಶಾಹಿ ದೇಶಗಳುಈಸೈದ್ಧಾಂತಿಕ ಭೀತಿಯಿಂದ ಮುಕ್ತವಾಗಿದ್ದು ಮೇಲಿನ ಕ್ರಮ ಕೈ ಬಿಡುತ್ತಿವೆ.ಈದೇಶಗಳಲ್ಲಿ ಹಿರಿಯ ನಾಗರಿಕರ ಜೀವನ ಕಷ್ಟಕರವಾಗಿದೆ. ಜಾಗತೀಕರಣ, ಮುಕ್ತ ಮಾರುಕಟ್ಟೆ,ಕಾರ್ಪೊರೇಟ್ ಪ್ರಭುತ್ವ ವಿಧಾನ ಮತ್ತು ಅತಿಯಾದ ಲಾಭ ದಾಹ ಎಲ್ಲವೂ ಮಾನವೀಯ ಮೌಲ್ಯಗಳನ್ನು ಸಮಾಜದಿಂದ ವ್ಯತಿರಿಕಗೊ¤ ಳಿಸುತ್ತಿದೆ ಎಂದು ಆರೋಪಿಸಿದರು.
ಮುಂದಿನ ತಲೆಮಾರಿನ ನಿವೃತ್ತಿದಾರರು, ನೌಕರರು, ಅನಿಶ್ಚಿತತೆ, ಅಭದ್ರತೆ ಬದುಕು ಎದುರಿಸಬೇಕಾಗುತ್ತದೆ. ಭವಿಷ್ಯದ ಭರವಸೆಗೆಂದು ಉಳಿಸಲ್ಪಟ್ಟ ಹಣಕಾರ್ಪೋರೇಟರ್ಗಳ ಅತಿಯಾದ ಹಣದಾಸೆಗೆ ಬಲಿಯಾಗಲಿದೆ. ಇದು ಪ್ರಭುತ್ವಗಳ ಸಹಾಯದೊಂದಿಗೆ ಅನುಷ್ಠಾನಗೊಳ್ಳಲಿದೆ ಎನ್ನುವುದೇ ದುರಂತ ಎಂದರು. ವೃದ್ಧರ, ಹಿರಿಯ ನಾಗರಿಕರ ಸಂಧ್ಯಾ ಕಾಲದ
ಸಂತೃಪ್ತ ಬದುಕಿಗೆ ಘನತೆಯ ಬದುಕನ್ನು ಖಾತ್ರಿಪಡಿಸುವಂತೆ ಕಾನೂನು ನಿರ್ಮಿಸುವಂತೆ ಸರ್ಕಾರದ ಗಮನ ಸೆಳೆದರು. ಸ್ವಾವಲಂಬಿ ಬದುಕಿನ ನಿರ್ವಹಣೆಗೆ ತಕ್ಕಪಿಂಚಣಿನೀಡಲೇಬೇಕು.ಪಿಂಚಣಿ ನಿಧಿ ಖಾಸಗೀಕರಣ ಬೇಡವೇ ಬೇಡ, ಕಾರ್ಮಿಕ ವಿರೋಧಿಸಂಹಿತೆವಾಪಸ್ಸಾಗಲಿ,ಎಲ್ಲರಿಗೂಪಿಂಚಣಿ ದೊರೆಯಲೇಬೇಕು ಎಂಬಿತ್ಯಾದಿ ಫಲಕ ಪ್ರದರ್ಶಿಸಿದರು.
ಸಮನ್ವಯ ಸಮಿತಿ ಸಂಚಾಲಕ ಲ.ಜಗನ್ನಾಥ್, ಸಮಿತಿ ಸದಸ್ಯರಾದ ಜಿ.ಜಯರಾಂ, ವಿಜಯ ಕುಮಾರ್ ಎನ್, ಜಿ.ರಾಜೇಂದ್ರ ಮತ್ತಿತರರಿದ್ದರು.
ಅಂಬೇಡ್ಕರ್ ಭವನ ಪೂರ್ಣಗೊಳಿಸಿ :
ಮೈಸೂರು: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜೈ ಭೀಮ್ ದಲಿತ ಆದಿ ದ್ರಾವಿಡ ಯುವಕರ ಅಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಭವನದ ಬಳಿ ಪ್ರತಿಭಟನೆ ನಡೆಯಿತು.
ನಗರದ ರೋಟರಿ ಶಾಲೆ ರಸ್ತೆಯಲ್ಲಿರುವ ನಲ್ಲಪ್ಪ ಸಂಚಾರ ಠಾಣೆ ಪಕ್ಕದಲ್ಲಿ ನಿರ್ಮಾಣ ಹಂತದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸುಮಾರು 10 ವರ್ಷಗಳಮೊದಲೇಪೂರ್ಣಗೊಳ್ಳಬೇಕಾಗಿತ್ತು. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ಪೂರ್ಣಗೊಳ್ಳದೇ
ನಿಂತಿದೆ. ಇದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ಗೆ ಮಾಡುತ್ತಿ ರುವ ಅವಮಾನ ಎಂದು ಆರೋಪಿಸಿದರು. ತಕ್ಷಣ ಈ ಭವನವನ್ನು ಪೂರ್ಣಗೊಳಿಸಿ ಅಗತ್ಯ ಕ್ರಮಗಳಿಗೆ ಉಪಯೋಗಿಸಲು ಯೋಗ್ಯವಾಗುವಂತೆ ಸೂಕ್ತ ನಿರ್ವಹಣೆಯೊಂದಿಗೆ ಅಂಬೇಡ್ಕರ್ ಅವರ 130ನೇ ಜನ್ಮದಿನದ ಒಳಗಾಗಿ ಲೋಕಾರ್ಪಣೆ ಮಾಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಸಂಘಟನೆ ಸಲಹೆ ಗಾರ ಹರೀಶ್, ಅಧ್ಯಕ್ಷ ಪ್ರವೀಣ್ ಕುಮಾರ್ ಎಸ್. ಆರ್, ಉಪಾಧ್ಯಕ್ಷ ಕುಮಾರ್ ಎಸ್, ವರದರಾಜು ಕೆ, ರವಿ ಶಂಕರ್, ಗಜೇಂದ್ರ, ಮಣಿ ಎಂ, ಅರುಣ್ ಜಿ.ಎಂ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ