13 ಗ್ರಾಪಂ ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆಗೆ ಯೋಜನೆ
Team Udayavani, Sep 25, 2020, 3:57 PM IST
ಪಿರಿಯಾಪಟ್ಟಣ: ತಾಲೂಕಿನ ಮುತ್ತಿನ ಮುಳಸೋಗೆ ಹಾಗೂ ಹಾಡ್ಯದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕ ಆರ್.ಟಿ. ಸತೀಶ್ ನೇತೃತ್ವದ ತಂಡವು ಭೇಟಿ ನೀಡಿ ಸರ್ವೆ ನಡೆಸಿತು.
ಈ ವೇಳೆ ಮಾತನಾಡಿದ ಮಂಡಳಿ ನಿರ್ದೇಶಕ ಆರ್ .ಟಿ.ಸತೀಶ್, ಪಿರಿಯಾಪಟ್ಟಣ ಟೌನ್ ಸೇರಿದಂತೆ ತಾಲೂಕಿನ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನತೆಗೆ ಕಾವೇರಿ ನೀರನ್ನು ಒದಗಿಸುವ ಉದ್ದೇಶದಿಂದ ತಾಲೂಕಿನ ಮತ್ತಿನ ಮುಳುಸೋಗೆ ಹಾಗೂ ಕೆ.ಆರ್.ನಗರದ ಹಾಡ್ಯ ಗ್ರಾಮದ ಕಾವೇರಿ ನದಿ ಬಳಿ ಸರ್ವೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುತ್ತಿನಮುಳುಸೋಗೆ ಬಳಿ ಕಾವೇರಿ ನದಿಯಿಂದ ಬೆಟ್ಟದಪುರ, ಹಲಗನಹಳ್ಳಿ ಹಾಗೂ ಹಿಟ್ನೆ ಹೆಬ್ಟಾಗಿಲು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಜನತೆಗೆ ಕಾವೇರಿ ನೀರನ್ನು ಒದಗಿಸಲಾಗುವುದು. ಅದೇ ರೀತಿ ಕೆ.ಆರ್.ನಗರದ ಹಾಡ್ಯ ಗ್ರಾಮದ ಬಳಿ ಕಾವೇರಿ ನದಿಯಿಂದ ಕಿತ್ತೂರು, ರಾವಂದೂರು, ಹಂಡಿತವಳ್ಳಿ ಕಂಪಲಾಪುರ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆಕುಡಿಯುವ ನೀರನ್ನು ಒದಗಿಸಲು ಸರ್ವೆ ನಡೆಸಿ ಕ್ರಿಯಾಯೋಜನೆ ರೂಪಿಸಲಾಗುತ್ತಿದ್ದು, ಬೇಸಿಗೆ ಪ್ರಾರಂಭಕ್ಕೂ ಮುನ್ನ ಕಾಮಗಾರಿ ಆರಂಭಿಸಲಾಗುವುದು ಎಂದರು.
ಮಂಡಳಿಯ ಮುಖ್ಯ ಅಭಿಯಂತರ ಸಿದ್ದನಾಯ್ಕ ಮಾತನಾಡಿ, ಪಿರಿಯಾಪಟ್ಟಣ ತಾಲೂಕಿನ ಗಿರಗೂರಿನ ಬಳಿ ಈಗಾಗಲೇ2.7.ಎಂಎಲ್ಡಿನೀರನ್ನುಸರಬರಾಜು ಮಾಡಲಾಗುತ್ತಿದ್ದು, ಇದು ಸರಿಯಾದ ಪ್ರಮಾಣದಲ್ಲಿ ಇಲ್ಲದಿರುವುದರಿಂದ7.5ಎಂಎಲ್ಡಿನೀರುಬೇಕೆಂದು ಬೇಡಿಕೆ ಇರುವಕಾರಣಹಾಗೂ ತಾಲೂಕಿನ13 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಪರವಾಗಿ ಕುಡಿಯುವ ನೀರಿನ ಸಂಪರ್ಕದ ಬಗ್ಗೆ ಬೇಡಿಕೆ ಬಂದಿದೆ. ಇದನ್ನು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ಪೂರೈಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭಾ ಎಂಜಿನಿಯರ್ ಸಮಂತ್ ಕುಮಾರ್, ಕಾರ್ಯಪಾಲಕ ಅಭಿಯಂತರ ರಾಜಗೋಪಾಲ್, ಒಳಚಂಡಿ ಮಂಡಳಿ ಎಇಇ ಮಹದೇವ ಪ್ರಭು, ಸಹಾಯಕ ಅಭಿಯಂತರ ಅಭಿಷೇಕ್, ಮುಖಂಡರಾದ ಶಿವರಾಮೇಗೌಡ, ದೊಡ್ಡೇಗೌಡ, ಅರುಣ್ಕುಮಾರ್ ಇತರರಿದ್ದರು.