ಡೀಸಿಯಾಗಿ ಮತ್ತೆ ರೋಹಿಣಿ ಸಿಂಧೂರಿ ನೇಮಿಸಲು ಸಹಿ ಸಂಗ್ರಹ ಅಭಿಯಾನ
Team Udayavani, Jun 13, 2021, 6:46 PM IST
ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆಮೈಸೂರಿನಲ್ಲಿ ಡೀಸಿ ಯಾಗಿ ನೇಮಿಸುವಂತೆ ಒತ್ತಾಯಿಸಿ ಆನ್ಲೈನ್ಅಭಿಯಾನ ಪ್ರಾರಂಭ ವಾಗಿದ್ದು, 65 ಸಾವಿರಕ್ಕೂ ಹೆಚ್ಚು ಮಂದಿ ಸಹಿಮಾಡಿದ್ದಾರೆ.
ಮೈಸೂರಿನಲ್ಲಿ ಈ ಹಿಂದೆ ಜಿಲ್ಲಾ ಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವೆ ಜಟಾಪಟಿ ನಡೆದು,ಇಬ್ಬರೂ ಭಾರತೀಯ ನಾಗರಿಕ ಸೇವಾನಿಯಮ ಉಲ್ಲಂ ಸಿದ ಹಿನ್ನೆಲೆ ಇಬ್ಬರನ್ನೂಸರ್ಕಾರ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೆನನ್ನ ವರ್ಗಾವಣೆಗೆ ಭೂ ಮಾಫಿಯವೇ ಕಾರಣಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದರು.ತಮ್ಮ ಅವಧಿ ಯಲ್ಲಿ ಭೂ ಹಗರಣದ ಕುರಿತು ತನಿಖೆ ಆರಂಭಿಸಿದೆ.
ಶಾಸಕ ಸಾ.ರಾ.ಮಹೇಶ್ಕೂಡ ಭೂ ಹಗರಣದಲ್ಲಿದ್ದು, ಅವರ ಕುಟುಂ ಬದ ಒಡೆ ತನದಲ್ಲಿರುವಸಾರಾ ಕನ್ವೆನÒನ್ ಹಾಲ್ ರಾಜ ಕಾಲುವೆ ಹಾಗೂ ಗೋಮಾಳಾದ ಮೇಲೆಕಟ್ಟ ಲಾ ಗಿದೆ. ಅದು ವಸತಿ ಉದ್ದೇಶಕ್ಕೆ ಭೂ ಪರಿ ವರ್ತನೆ ಯಾಗಿದ್ದರೂವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಇದು ಸೇರಿ ದಂತೆ ಇನ್ನಿತರಪ್ರದೇಶಗಳಲ್ಲಿ ಅವರ ಸಂಬಂಧಿಕರಿಗೆ ಸೇರಿದ ಆಸ್ತಿಯ ಪರಿವರ್ತನೆಹಾಗೂ ಒತ್ತು ವರಿ ಕುರಿ ತಂತೆ ತನಿಖೆ ನಡೆ ಸಲು ಮುಂದಾಗಿದೆ.
ಈ ಹಿನ್ನೆಲೆ ಯಲ್ಲಿ ಪಿತೂರಿ ನಡೆಸಿ ನನ್ನ ವರ್ಗಾ ವಣೆ ಮಾಡ ಲಾಗಿದೆ ಎಂದುರೋಹಿಣಿ ಸಿಂಧೂರಿ ಹೇಳಿ ದ್ದರು. ಬಳಿಕ ರೋಹಿಣಿ ಸಿಂಧೂರಿ ಪರಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾ ದವು. ಇದರಜೊತೆಗೆ ಮತ್ತೆ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿಗೆ ಮತ್ತೆ ನೇಮಿಸಿಭೂ ಹಗರಣದ ತನಿಖೆಗೆ ಅವಕಾಶ ಮಾಡಿ ಕೊಡಬೇಕು ಎಂದು ಆನ್ಲೈನ್ನಲ್ಲಿ ಅಭಿ ಯಾನ ಆರಂಭವಾಗಿದ್ದು, ಈಗಾಗಲೇ 65 ಸಾವಿರಮಂದಿ ಸಹಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು
Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ
Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ
Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ
Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ