![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
29 ದಿನದಲ್ಲೇ ಜಿಲ್ಲಾಧಿಕಾರಿ ಶರತ್ ವರ್ಗಾಯಿಸಿದ್ದೇಕೆ?
ವರ್ಗಾವಣೆ ಹಿಂದೆ ಆಂಧ್ರ ಸಿಎಂಕೈವಾಡ ,ರಾಜ್ಯ ಸರ್ಕಾರದಿಂದ ಕನ್ನಡಿಗ ಅಧಿಕಾರಿಗೆ ಅಪಮಾನ
Team Udayavani, Sep 30, 2020, 1:55 PM IST
![MYSURU-TDY-2](https://www.udayavani.com/wp-content/uploads/2020/09/MYSURU-TDY-2-13-620x372.jpg)
ಮೈಸೂರು: ಕನ್ನಡದ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ರಾಜ್ಯ ಸರ್ಕಾರ ಕೇವಲ 29 ದಿನಗಳಲ್ಲೇ ವರ್ಗಾಯಿಸಿದ್ದು, ಇದರ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ರೆಡ್ಡಿ ಕೈವಾಡ ಇದೆ ಎಂದು ಶಾಸಕ ಸಾ.ರಾ. ಮಹೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಶರತ್ ಅವರು ಮೈಸೂರು ಡೀಸಿಯಾಗಿ ಬಂದು ಹೆಚ್ಚಿನ ದಿನಗಳಾಗಿರಲಿಲ್ಲ. , ದಸರಾ ಸಂದರ್ಭದಲ್ಲಿ ¨ದಸರಾ ವಿಶೇಷ ಅಧಿಕಾರಿಯಾಗಿದ್ದ ಅವರನ್ನು ಸ್ಥಳ ತೋರಿಸದೆ ವರ್ಗಾವಣೆಮಾಡಿರುವುದು ಸರಿಯಲ್ಲ. ಸರ್ಕಾದ ಈ ನಡೆಯ
ಹಿಂದೆ ಹಣ ಲಾಬಿ, ವರ್ಗಾವಣೆ ದಂಧೆ ಕೆಲಸ ಮಾಡಿದೆ.ರಾಜ್ಯದಲ್ಲಿ ಆಂಧ್ರದವರ ದರ್ಬಾರ್ ನಡೆಯುತ್ತಿದೆ. ಇಲ್ಲಿ ಬಿ.ಎಸ್ .ಯಡಿಯೂರಪ್ಪ ಆಡಳಿತ ನಡೆಸುತ್ತಿಲ್ಲ. ಹೊರಗಿನವರುಅಧಿಕಾರನಡೆಸುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಎಂದರು. ಈ ರೀತಿ ಅನಗತ್ಯ ವರ್ಗಾವಣೆ ಮಾಡಿದ್ದೆ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಬಿ.ಶರತ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದರ ಹಿಂದಿನ ಉದ್ದೇಶವೇನು? ಕನ್ನಡಿಗರು ಡೀಸಿ ಆಗುವುದು ಅಪರೂಪ. ಹೀಗಿರುವಾಗ ಅಂತಹವರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಹೀಗೆ ಮಾಡುವುದಿದ್ದರೆ ಶರತ್ ಅವರನ್ನು ಮೈಸೂರಿಗೆ ನಿಯುಕ್ತಿಗೊಳಿಸಬಾರದಿತ್ತು. ಇದು ಅವರಿಗ ಅವಮಾನ ಎಂದು ಕಿಡಿಕಾರಿದರು. ಇದು ಶರತ್ ಅವರಿಗೆ ಆದ ಅನ್ಯಾಯವಷ್ಟೇ ಅಲ್ಲ, ಕನ್ನಡ ಐಎಎಸ್ ಅಧಿಕಾರಿಗಳಿಗೆ ಆದ ಅಪಮಾನ. ಹೀಗಾಗಿ, ಯಾದೇ ಒತ್ತಡಕ್ಕೆ ಮಣಿಯದೇ ಸರ್ಕಾರದ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ನ್ಯಾಯಾಂಗದ ಮೊರೆ ಹೋಗಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ತಮ್ಮ ವರ್ಗಾವಣೆಯಿಂದ ಅನ್ಯಾಯವಾಗಿದೆಂದು ಕೋರ್ಟ್ಗೆ ಹೋಗಿದ್ದೀರಿ. ಇದೀಗ ಬಿ.ಶರತ್ ಅವರಿಗೂ ಅನ್ಯಾಯವಾಗಿದೆ. ಈಗ ನಿಮ್ಮ ಮನಸ್ಸಸಾಕ್ಷಿಗೆ ಏನುಆಗಲಿಲ್ಲವೇ? ಎಂದು ರೋಹಿಣಿ ಸಿಂಧೂರಿ ಅವರನ್ನು ಪ್ರಶ್ನಿಸಿದರು. ಕೋವಿಡ್ ದಿಂದ ಜನರು ಸಾಯುತ್ತಿದ್ದಾರೆ. ವೆಂಟಿಲೇಟರ್, ಆಕ್ಸಿಜನ್, ಹಾಸಿಗೆ ಸಿಗದೆ ರೋಗಿಗಳು ಗೋಳಾಡುತ್ತಿದ್ದು, ವರ್ಗಾವಣೆ ದಂಧೆಯನ್ನು ಬಿಟ್ಟು ರಾಜ್ಯ ಸರ್ಕಾರ ಇತ್ತ ಗಮನ ನೀಡಬೇಕು. ವರ್ಗಾವಣೆ ವಿಷಯದಲ್ಲಿ ಜೂಜಾಟ ಆಡಬಾರದು ಎಂದರು.
ಅಸಹಾಯಕಉಸ್ತುವಾರಿ ಸಚಿವರು : ಎಸ್.ಟಿ.ಸೋಮಶೇಖರ್ ಅಸಹಾಯಕ (ಹೆಲ್ಪ್ಲೆಸ್) ಜಿಲ್ಲಾ ಉಸ್ತುವಾರಿ ಸಚಿವರು. ಹಿಂದಿನ ದಿನ ಡೀಸಿ ಅವರೊಂದಿಗೆ ಸಭೆ ನಡೆಸಿರುವ ನಿಮಗೆ ಈ ವರ್ಗಾವಣೆ ವಿಷಯವೇ ಗೊತ್ತಿರಲಿಲ್ಲವೇ? ನಿಮ್ಮನ್ನು ಕೇಳದೇ ಇದು ನಡೆದಿದೆಯೇ? ರೋಹಿಣಿ ಹಠಕ್ಕೆ ಬಿದ್ದಿದ್ದಾರೆ. ನಾನು ಡೀಸಿ ಆಗಿಯೇ ಇರಬೇಕು ಎಂದುಕೊಂಡಿದ್ದಾರೆ. ಹೀಗಾಗಿಯೇ ಮೈಸೂರಿಗೆ ಬಂದಿದ್ದಾರೆ. ಈ ರೀತಿಯ ಅಧಿಕಾರ ದಾಹ ಇರುವ ಇವರಿಂದ ಹೇಗೆಕೆಲಸ ಮಾಡಿಸುತ್ತೀರಿ ಎಂದರು.
ರೋಹಿಣಿ ಅಧಿಕಾರದಾಹ ಉಳ್ಳವರು : ರೋಹಿಣಿ ಸಿಂಧೂರಿ ಅಧಿಕಾರ ದಾಹ ಉಳ್ಳವರು. ಹಾಸನ ಜಿಲ್ಲಾಧಿಕಾರಿಯಾಗಿದ್ದ ಇವರನ್ನು ಮೂರು ಸಲ ವರ್ಗಾಯಿಸಲಾಗಿತ್ತು. ಆಗ ಮೂರು ಸಲವೂ ಸರ್ಕಾರದ ಆದೇಶ ವಿರುದ್ಧ ಕೋರ್ಟ್ನ ಮೂಲಕ ತಡೆಯಾಜ್ಞೆ ತಂದು ಅಲ್ಲೇ ಉಳಿದುಕೊಂಡಿದ್ದರು.ಇವರಚರಿತ್ರೆಯೂಸರಿಯಲ್ಲ.ಇವರ ಅಧಿಕಾರಾವಧಿಯಲ್ಲಿ ನಡೆದಿದ್ದ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ ಮಹೋತ್ಸವದ175ಕೋಟಿ ರೂ.ಅನುದಾನದ ಬಳಕೆ ಕುರಿತು ತನಿಖೆ ಆಗಬೇಕು. ಆಗ ಅಕ್ರಮ ಬಯಲಿಗೆ ಬರಲಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Suraj Revanna ಸತ್ಯ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ](https://www.udayavani.com/wp-content/uploads/2024/07/Suraj-Revanna-150x90.jpg)
Suraj Revanna ಸತ್ಯ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ
![Untitled-1](https://www.udayavani.com/wp-content/uploads/2024/07/Untitled-1-21-150x90.jpg)
BJP-JDS 19 ಸಂಸದರಿದ್ರೂ ಬಜೆಟ್ನಲ್ಲಿ ರಾಜ್ಯಕ್ಕೆ ನಾಮ: ಎಂ.ಲಕ್ಷ್ಮಣ್
![Army Air Defence: ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೈಸೂರು ಮಹಿಳೆ](https://www.udayavani.com/wp-content/uploads/2024/07/Mysore1-150x84.jpg)
Army Air Defence: ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೈಸೂರು ಮಹಿಳೆ
![Mysore: ಕೆಆರ್ ಎಸ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ, ಅಧಿಕಾರಿಗಳ ಜತೆ ಸಮಾಲೋಚನೆ](https://www.udayavani.com/wp-content/uploads/2024/07/DKS1-150x84.jpg)
Mysore: ಕೆಆರ್ ಎಸ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ, ಅಧಿಕಾರಿಗಳ ಜತೆ ಸಮಾಲೋಚನೆ
![Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್ ಜಖಂ](https://www.udayavani.com/wp-content/uploads/2024/07/mane-10-150x80.jpg)
Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್ ಜಖಂ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.