ಹೊಯ್ಸಳರ ಕಾಲದ ವೀರಗಲ್ಲು ಪತ್ತೆ


Team Udayavani, Dec 31, 2019, 1:13 PM IST

sm-tdy-1

ಶಿವಮೊಗ್ಗ: ತಾಲೂಕಿನ ತೇವರ ಚಟ್ನಹಳ್ಳಿಯಲ್ಲಿ ಹೊಯ್ಸಳರ ಕಾಲದ ಶಾಸನಭರಿತ ಮೂರು ಇತರೆ ಎರಡು ವೀರಗಲ್ಲುಗಳು ಪತ್ತೆಯಾಗಿವೆ. ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಕಾಲದ ಶಾಸನಭರಿತ ಮೂರು ವೀರಗಲ್ಲುಗಳು ಇಂತಿವೆ. ಹೊಯ್ಸಳರ ಕಾಲದ ಶಾಸನವಿರುವ

ಒಂದನೇ ವೀರಗಲ್ಲು: ಇದು ಶಾಸನವಿರುವ ವೀರಗಲ್ಲಾಗಿದ್ದು, ಮೂರು ಪಟ್ಟಿಕೆಗಳಿಂದ ಕೂಡಿದೆ. ಇದು 1 ಮೀಟರ್‌ 88 ಸೆಂಮೀ ಉದ್ದ ಹಾಗೂ 64 ಸೆಂಮೀ ಆಗಲವಾಗಿದೆ. ಇದು- 18ನೇ ಶತಮಾನದಲ್ಲಿ ಹಾಳಾಗಿರುವ ಸಂಭವವಿದ್ದು ಮೂರುಪಟ್ಟಿಕೆಗಳಲ್ಲಿ ಕುಳಿಗಳನ್ನು ಮಾಡಿರುವುದರಿಂದ ಶಾಸನವು ಹಾಳಾಗಿರುವುದು ಕಂಡುಬರುತ್ತದೆ.

ಶಿಲ್ಪದ ವಿವರ-ಕೆಳಗಿನ ಪಟ್ಟಿಕೆ: ವೀರನು ಕುದುರೆಯ ಮೇಲೆ ಕುಳಿತು ಕತ್ತಿಯನ್ನು ಹಿಡಿದು ಹೋರಾಡುತ್ತಿರುವುದು. ಮೇಲ್ಭಾಗದಲ್ಲಿ ಛತ್ರಿಯಿರುವುದು ಎದುರುಗಡೆ ಇಬ್ಬರು ವೀರರು ಕತ್ತಿ ಗುರಾಣಿಯನ್ನು ಹಿಡಿದು ಹೋರಾಡುತಿರುವುದು ಒಬ್ಬ ವೀರ ಕೆಳಗಡೆ ಬಿದ್ದಿರುವುದನ್ನು ಕಾಣಬಹುದು.

ಎರಡನೇ ಪಟ್ಟಿಕೆ: ಈ ಪಟ್ಟಿಕೆಗೆ ಮಂಟಪವನ್ನು ಮಾಡಿದ್ದು ವೀರನನ್ನು ಅಪ್ಸರೆಯರು ತಮ್ಮ ತೋಳುಗಳ ಮೂಲಕ ಸ್ವರ್ಗಕ್ಕೆ ಕರೆದುಕೊಂಡು ಹೋಗುವ ದೃಶ್ಯ ಕಂಡುಬರುತ್ತದೆ.

ಮೂರನೇ ಪಟ್ಟಿಕೆ: ಇಲ್ಲಿ ವೀರನು ಕುಳಿತಿದ್ದು ಶಿವಲಿಂಗವಿದ್ದು ಇದರ ಎದುರಿಗೆ ನಂದಿ ಮೇಲ್ಭಾಗದಲ್ಲಿ ಎರಡು ಚಾಮರಗಳು ಚಂದ್ರವು ಹಾಳಾಗಿದ್ದು ಸೂರ್ಯನನ್ನು ಕಾಣಬಹುದು.

ಹೊಯ್ಸಳರ ಕಾಲದ ಎರಡನೇ ಶಾಸನವಿರುವ ವೀರಗಲ್ಲು: ಈ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು ಹಳೆಗನ್ನಡ ಶಾಸನವಿದ್ದು ತೃಟಿತವಾಗಿದೆ. ಇದು 1 ಮೀಟರ್‌ 39 ಸೆ.ಮೀ ಉದ್ದ 62 ಸೆ.ಮೀ ಆಗಲವಾಗಿದೆ.

ಶಿಲ್ಪದ ವಿವರ: ಕೆಳಗಿನ ಪಟ್ಟಿಕೆ: ಇಬ್ಬರು ವೀರರು ಕತ್ತಿ ಗುರಾಣಿ ಹಿಡಿದು ಹೋರಾಡುತ್ತಿರುವುದು, ಇನ್ನೊಬ್ಬ ವೀರನು ಕತ್ತಿಯನ್ನು ಹಿಡಿದು ಕುದುರೆಯ ಮೇಲೆ ಕುಳಿತು ಹೋರಾಡುತ್ತಿರುವುದು ಕಂಡುಬರುತ್ತದೆ.

ಎರಡನೇ ಪಟ್ಟಿಕೆ: ಇಲ್ಲಿ ಮಂಟಪವನ್ನು ನಿರ್ಮಾಣ ಮಾಡಿದ್ದು ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತದೆ.

ಮೂರನೇ ಪಟ್ಟಿಕೆ: ಇಲ್ಲಿ ವೀರನು ಸ್ವರ್ಗದಲ್ಲಿ ಕುಳಿತಿರುವುದು ಲಿಂಗವಿದ್ದು ಎದುರುಗಡೆ ನಂದಿ ಮೇಲ್ಭಾಗದಲ್ಲಿ ಸೂರ್ಯಚಂದ್ರರನ್ನು ಕಾಣಬಹುದು. ಹೊಯ್ಸಳರ ಕಾಲದ ಮೂರನೇ ಶಾಸನವಿರುವ

ವೀರಗಲ್ಲು: ಈ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು, ಎರಡು ಪಟ್ಟಿಕೆಗಳಲ್ಲಿ ತೃಟಿತವಾದ ಆರು ಸಾಲುಗಳ ಹಳೆಗನ್ನಡದ ಶಾಸನವು ಕಂಡು ಬರುತ್ತದೆ. ಇದು 85 ಸೆಂಮೀ ಉದ್ದ 45 ಸೆಂಮೀ ಅಗಲವಾಗಿದ್ದು ಈ ವೀರಗಲ್ಲಿನ ಕೆಳಭಾಗ ತುಂಡಾಗಿರುವುದನ್ನು ಕಾಣಬಹುದು.

ಶಿಲ್ಪದ ವಿವರ-ಕೆಳಗಿನ ಪಟ್ಟಿಕೆ: ಈ ಪಟ್ಟಿಕೆಯಲ್ಲಿ ಇಬ್ಬರು ಯೋಧರು ಕತ್ತಿ ಗುರಾಣಿಯನ್ನು ಹಿಡಿದು ಹೋರಾಡುತ್ತಿರುವುದು ಕಂಡು ಬರುತ್ತದೆ. ಇಲ್ಲಿ ಕೆಳ ಭಾಗ ತುಂಡಾಗಿರುವುದನ್ನು ಕಾಣಬಹುದು.

ಎರಡನೇ ಪಟ್ಟಿಕೆ: ಇಲ್ಲಿ ವೀರನನ್ನು ಅಪ್ಸರೆಯರು ಚಾಮರ ಹಿಡಿದು ಸ್ವರ್ಗಕ್ಕೆ ಕರೆದುಕೊಂಡು ಹೋಗುವ ದೃಶ್ಯ ಕಾಣಬಹುದು.

ಮೂರನೇ ಪಟ್ಟಿಕೆ: ವೀರನು ಸ್ವರ್ಗದಲ್ಲಿ ಕುಳಿತಿರುವುದು ಇಲ್ಲಿ ಶಿವಲಿಂಗವಿದ್ದು ಲಿಂಗದ ಎದುರು ನಂದಿಯಿದ್ದು ಮೇಲ್ಭಾಗದಲ್ಲಿ ಸೂರ್ಯಚಂದ್ರರಿರುವುದನ್ನು ಕಾಣಬಹುದು.

ಶಾಸನದ ಪಾಠ: ಶಾಸನವು ಆರು ಸಾಲುಗಳಿಂದ ಕೂಡಿದ್ದು ಮೇಲ್ಭಾಗದ ಮೂರು ಸಾಲುಗಳು ತೃಟಿತವಾಗಿದ್ದು, ಎರಡನೇ ಪಟ್ಟಿಕೆಯ ಮೂರು ಸಾಲುಗಳನ್ನು ಓದಲಾಗಿದೆ. ಮೊದಲ ಪಟ್ಟಿಕೆ ಲಿಪಿಯು ತೃಟಿತವಾಗಿದೆ.

ಎರಡನೇ ಪಟ್ಟಿಕೆ : ಹಡೆವಳ ಬೀರಂ ಸುರಲೋಕ 6, ಪ್ರಾಪ್ತನಾದ ಹೊಯ್ಸಳರ ಮಹಾಮಂಡಳೇಶ್ವರನ ಅಧಿಕಾರಿಯಾದ ನನ್ನಿಯ ಗಂಗ ಎಂಬ ಅಧಿಕಾರಿಯ ಆಳ್ವಿಕೆಯಲ್ಲಿ ಕೆಸಲಿನಲಕೊಪ್ಪಯ ಕಾಳಗದಲ್ಲಿ- ಈ ಕೆಸಲಿನಕೊಪ್ಪ ಇಂದೂ ಬೆಚಾರಕ್‌ ಗ್ರಾಮವಾಗಿರಬಹುದು. ಈ ಗ್ರಾಮದ ಕಾಳಗದಲ್ಲಿ ಬೀರ ಎಂಬ ತುಕಡಿಯ (ಗುಂಪಿನ)ನಾಯಕ ಹೋರಾಡಿ ಮರಣ ಹೊಂದಿ ಸುರಲೋಕ ಪ್ರಾಪ್ತನಾದನು ಎಂದು ತಿಳಿಸುತ್ತದೆ.

ಬಲಿದಾನದ ಸ್ಮಾರಕ: ಇಲ್ಲಿ ಇಬ್ಬರು ಭಕ್ತರು ಕೈ ಮುಗಿದು ನಿಂತಿದ್ದು ಇವರ ಮೇಲ್ಭಾಗದಲ್ಲಿ ಪದ್ಮಗಳಿದ್ದು- ಇದರ ಮೇಲ್ಭಾಗದಲ್ಲಿ ಮೂಕೊಡೆ ರೀತಿಯಿದ್ದು ಇದನ್ನು ಜೈನ ಪರಂಪರೆಯ ಸ್ಮಾರಕವಿರಬಹುದು ಎನ್ನಬಹುದು. ಮೇಲಿನ ಎಲ್ಲಾ ವೀರಗಲ್ಲುಗಳನ್ನು ಬಲಿದಾನದ ಸ್ಮಾರಕಗಳನ್ನು ಲಿಪಿ ಹಾಗೂ ಶಿಲ್ಪಗಳ ಆಧಾರಗಳ ಮೇಲೆ ಹೊಯ್ಸಳರ ಕಾಲದ ಕ್ರಿ.ಶ. 12-13ನೇ ಶತಮಾನಗಳ ವೀರಗಲ್ಲು ಶಾಸನಗಳು ಎನ್ನಬಹುದು.

ಉಪಸಂಹಾರ: ತೇವರಚಟ್ಟಹಳ್ಳಿಯು ರಾಷ್ಟ್ರಕೂಟರ ಕಾಲದಿಂದ ಅಂದರೆ ಕ್ರಿ.ಶ. 9-10ನೇ ಶತಮಾನದಿಂದ ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಆಡಳಿತದವರೆಗೂ ಇದ್ದಂತಹ ಗ್ರಾಮವಾಗಿದೆ ಎನ್ನಬಹುದು ಎಂದು ಶಿವಪ್ಪ ನಾಯಕ ಅರಮನೆ ಸಹಾಯಕ ನಿರ್ದೇಶಕ ಆರ್‌. ಶೇಜೇಶ್ವರ ತಿಳಿಸಿದ್ದಾರೆ.

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-sasdas

ಮುನ್ನೂರಿಗೆ ಹೋಗುವ ರಸ್ತೆಯ ಧರೆ ಕುಸಿತ: ಸಂಪರ್ಕ ಕಡಿತಗೊಳ್ಳುವ ಆತಂಕ…!

1-sffdsfsd

Arasalu; ರೈಲು ಹಳಿ ಮೇಲೆ ಮರ ಬಿದ್ದು ರೈಲು ಸಂಚಾರ ಸ್ಥಗಿತ

rain

ನಿರಂತರ ಬಿರುಗಾಳಿ ಮಳೆ: ತೀರ್ಥಹಳ್ಳಿ,ಸಾಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

1-tir-a

NH 169A ತೀರ್ಥಹಳ್ಳಿ; ಬೈಪಾಸ್ ರಸ್ತೆಯಲ್ಲಿ ಮಣ್ಣು ಜರಿತ: ವಾಹನ ಸಂಚಾರ ಬಂದ್!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.