ಲಕ್ಷ್ಮೀಪುರ ಗ್ರಂಥಾಲಯಕ್ಕಿಲ್ಲ ಸ್ವಂತ  ಕಟ್ಟಡ

ನಿರ್ವಹಣೆ ಕೊರತೆಕಿರಿದಾದ ಕೋಣೆಯಲ್ಲಿ ಓದು ಅಸಾಧ್ಯದಿನಪತ್ರಿಕೆ ಓದಲು ಬಯಲೇ ಆಸರೆ

Team Udayavani, Oct 30, 2019, 1:22 PM IST

30-October-12

ಸುರಪುರ: ಸರಕಾರದ ನಿರ್ಲಕ್ಷé ಹಾಗೂ ಅಧಿಕಾರಿಗಳ ಬೇಜವಾಬ್ದಾರಿ, ನಿರ್ವಹಣೆ ಕೊರತೆಯಿಂದ ಲಕ್ಷ್ಮೀಪುರ-ಕೃಷ್ಣಾಪುರ ಗ್ರಂಥಾಲಯಗಳು ಸೌಲಭ್ಯದಿಂದ ವಂಚಿತವಾಗಿವೆ. ಲಕ್ಷ್ಮೀಪುರ ಗ್ರಾಮದಲ್ಲಿ ಸಾಕಷ್ಟು ವಿದ್ಯಾವಂತ ಓದುಗರಿದ್ದಾರೆ. ಗ್ರಾಮದ ಯುವ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ 1996-97ರಲ್ಲಿ ಗ್ರಂಥಾಲಯ ಮಂಜೂರು ಮಾಡಿತ್ತು.

ನಂತರ ಗ್ರಂಥಾಲಯ ಸಹಾಯಕರುಹಾಗೂ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಒದಗಿಸುವುದನ್ನೇ ಮರೆತು ಬಿಟ್ಟಿತು. ಆರಂಭದಿಂದಲೂ ಗ್ರಂಥಾಲಯ ಸಹಾಯಕರಿಲ್ಲದೆ ಗ್ರಾಪಂ ಸಿಬ್ಬಂದಿಗಳೇ ನಿರ್ವಹಿಸುತ್ತಿದ್ದರು. ಓದುಗರ ಮನವಿ ಮೇರೆಗೆ 2006-07ರಲ್ಲಿ ಗ್ರಂಥಾಲಯ ಸಹಾಯಕರನ್ನು ನೇಮಿಸಲಾಯಿತು.

ಸ್ವಂತ ಕಟ್ಟಡವಿಲ್ಲ: ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಗ್ರಾಪಂಗೆ ಒಳಪಡುವ ಹಳೆ ಕೊಠಡಿಯಲ್ಲಿ ಗ್ರಂಥಾಲಯ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಕೊಠಡಿ ನಿರ್ಮಾಣ ಆದಾಗಿನಿಂದಲೂ ಇಲ್ಲವರೆಗೆ ಸುಣ್ಣ ಬಣ್ಣ ಕೂಡ ಕಂಡಿಲ್ಲ. ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿ ಮಾಡಿಸಬೇಕಾದ ಅನಿವಾರ್ಯತೆ ಇದೆ.

ನೆಲವೇ ಪುಸ್ತಕದ ಅಲಮಾರಿ:ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳಿವೆ. ಕೊಠಡಿ ಚಿಕ್ಕದಾಗಿದ್ದು, ಪುಸ್ತಕಗಳನ್ನು ಸಾಲಾಗಿ ಹೊಂದಿಸಿಡಲು ರ್ಯಾಕ್‌ಗಳಿಲ್ಲ. ಹೀಗಾಗಿ ಪುಸ್ತಕಗಳನ್ನು ನೆಲೆದ ಮೇಲೆ ಇಡಲಾಗಿದೆ. ಮಳೆ ಬಂದರೆ ಪುಸ್ತಕ ನೆನೆದು ಹೋಗುವ ಸಾಧ್ಯತೆಯಿದೆ. ಗ್ರಂಥಾಲಯ ಸಹಾಯಕರು ಪುಸ್ತಕಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಸದ್ಯಕ್ಕೆ ಸಂರಕ್ಷಿಸಿಟ್ಟಿದ್ದಾರೆ.

ಬಯಲಲ್ಲೇ ಓದು: ಪ್ರಸಕ್ತ ಇರುವ ಗ್ರಂಥಾಲಯ ಏಕೈಕ ಕೊಠಡಿ ಹೊಂದಿದ್ದು, ಕಿರಿದಾಗಿದೆ. ಕುಳಿತು ಓದಲು ಸ್ಥಳ ಇಲ್ಲ. ಇರುವ ಒಂದಿಷ್ಟು ಜಾಗದಲ್ಲಿ ಗ್ರಂಥಾಲಯ ಸಹಾಯಕರು ಕೂರಲು ಕುರ್ಚಿ, ಟೇಬಲ್‌ ಹಾಕಲಾಗಿದೆ. ಹೀಗಾಗಿ ಓದುಗರು ಕುಳಿತು ಓದಲು ಸ್ಥಳವೇ ಇಲ್ಲ. ದಿನಪತ್ರಿಕೆಗಳನ್ನು ಓದುವವರು ಬಯಲನ್ನೇ ಆಶ್ರಯಿಸಬೇಕಿದೆ.

ಸುತ್ತಮುತ್ತ ಬೆಳೆದ ಜಾಲಿಕಂಟಿ: ಗ್ರಂಥಾಲಯ ಸುತ್ತಮುತ್ತ ಜಾಲಿಗಿಡ ಹಾಗೂ ಇತರೆ ಮುಳ್ಳುಕಂಟಿಗಳು ಆವರಿಸಿವೆ. ರಸ್ತೆಯಿಂದ ನಿಂತು ನೋಡಿದರೆ ಜಾಲಿಗಿಡ-ಮುಳ್ಳು ಕಂಟಿಗಳು ಕಾಣಿಸುತ್ತಿವೆ ಹೊರತು ಗ್ರಂಥಾಲಯ ಕಾಣಿಸಲ್ಲ. ಹೊಸದಾಗಿ ಬರುವ ಓದುಗರು ಗ್ರಂಥಾಲಯ ಎಲ್ಲಿದೆ ಎಂದು ಹುಡುಕಾಡುವಂತಹ ಸ್ಥಿತಿ ಇದೆ.

ಸೋರುತ್ತಿದೆ ಮಾಳಿಗೆ: ಕಟ್ಟಡ ತುಂಬ ಹಳೆದಾಗಿರುವುದರಿಂದ ದುರಸ್ತಿ ಕಾರ್ಯ ನಡೆದಿಲ್ಲ. ಕಟ್ಟಡದ ಆಯಸ್ಸು ಮುಗಿದಿರುವುದರಿಂದ ಛಾವಣಿ ಸಿಮೆಂಟ್‌ ಬೀಳುತ್ತಿದೆ. ಕಬ್ಬಿಣದ ರಾಡ್‌ ಗೋಚರಿಸುತ್ತಿವೆ. ಮಳೆ ಬಂದರೆ ಛಾವಣಿ ಸೋರುತ್ತಿದ್ದು, ಪುಸ್ತಕಗಳು ನೆನೆದು ಹೋಗುತ್ತಿವೆ.

3 ಸಾವಿರಕ್ಕೂ ಹೆಚ್ಚು ಪುಸ್ತಕ: 2500 ಸದಸ್ಯರಿದ್ದು, 3000ಕ್ಕೂ ಮೇಲ್ಪಟ್ಟು ಪುಸ್ತಕಗಳಿವೆ. ವಿವಿಧ ಪತ್ರಿಕೆಗಳನ್ನು ತರಿಸಲಾಗುತ್ತಿದೆ. ದಿನಕ್ಕೆ 10ರಿಂದ 15 ಜನ ಮಾತ್ರ ಪುಸ್ತಕ ಎರವಲು ತೆಗೆದುಕೊಂಡು ಹೋಗುತ್ತಾರೆ. ತಿಂಗಳಿಗೆ 400 ರೂ.ಗಳನ್ನು ಪತ್ರಿಕೆ ಅನುದಾನ ನೀಡುತ್ತಾರೆ. ಹೆಚ್ಚಿನ ಪತ್ರಿಕೆಗಳನ್ನು ತರಿಸಲು ಆಗುತ್ತಿಲ್ಲ.

ಟಾಪ್ ನ್ಯೂಸ್

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

22

Udupi: ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.