![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಸಸಿ ನೆಟ್ಟು ಪೋಷಣೆ ಮಾಡದ ಅರಣ್ಯ ಇಲಾಖೆ
ಒಣಗಲು ಶುರುವಾದ ನೂರಾರು ಸಸಿಗಳು ರಸ್ತೆ ಬದಿಯಲ್ಲಿ ನೆಟ್ಟ ಸಸಿಗಳಿಗೆ ನೀರೇ ಇಲ್ಲ
Team Udayavani, May 4, 2019, 4:30 PM IST
![tumkur-6-tdy..](https://www.udayavani.com/wp-content/uploads/2019/05/tumkur-6-tdy..-620x219.jpg)
ಹುಳಿಯಾರು ಯಳನಾಡು ರಸ್ತೆಯಲ್ಲಿ ನಿರ್ಮಿಸಿರುವ ನೆಡುತೋಪು ಒಣಗಿರುವುದು
ಹುಳಿಯಾರು: ರಸ್ತೆ ಬದಿ ನೆಟ್ಟಿರುವ ಸಸಿಗಳನ್ನು ಅರಣ್ಯ ಇಲಾಖೆ ಸಂಪೂರ್ಣವಾಗಿ ಮರೆತಿದೆ. ಇಲ್ಲಿನ ಯಳನಾಡು ರಸ್ತೆಯ ಎರಡು ಬದಿಯ ಇಕ್ಕೆಲಗಳಲ್ಲಿ ವಿವಿಧ ಬಗೆಯ ಸಸಿಗಳು ಇನ್ನೂ ಬೆಳವಣಿಗೆ ಹಂತದ್ದು ನಿಷ್ಕಾಳಜಿಯ ಕಾರಣ ಬಿಸಿಲು ಮತ್ತು ದನಕರುಗಳ ದಾಳಿಗೆ ಒಳಗಾಗಿವೆ. ಹಸಿರೀಕರಣ ಯೋಜನೆ ಅರಣ್ಯ ಇಲಾಖೆಯ ಮಹತ್ವಾ ಕಾಂಕ್ಷಿ ಕಾರ್ಯಕ್ರಮ. ಈ ಯೋಜನೆಗೆ ಪೂರಕವಾಗಿ ಹುಳಿಯಾರಿನಿಂದ ಯಳನಾಡು ಗ್ರಾಮದವರೆಗೂ ನೆಡುತೋಪು ನಿರ್ಮಿಸಿತ್ತು. ಆದರೆ, ನಿರ್ವಹಣೆ ಇಲ್ಲದೇ ಹಾಕಿರುವ ಸಸಿಗಳು ಒಣಗುತ್ತಿದ್ದು, ಖರ್ಚು ಮಾಡಿರುವ ಹಣ ವ್ಯರ್ಥವಾಗಿದೆ.
ನಿರ್ಲಕ್ಷ್ಯ: ರಸ್ತೆ ಬದಿ ಸಸಿಗಳನ್ನು ನೆಟ್ಟು ಪೋಷಿಸಲು ಸರ್ಕಾರ ಉದ್ದೇಶಿಸಿ ನೌಕರರನ್ನು ನಿಯೋಜಿಸಿತ್ತು. ದಿನಗೂಲಿ ಸಿಬ್ಬಂದಿ, ಅಧಿಕಾರಿಗಳು ನಿಯೋಜಿಸಿ ರುವ ಜಾಗಗಳಲ್ಲಿ ಸಸಿ ನೆಟ್ಟು ಪೋಷಣೆ ಮಾಡ ಬೇಕು. ಆದರೆ ಈ ಕೆಲಸಕ್ಕೆ ನಿರ್ಲಕ್ಷ್ಯ ವಹಿಸಿದ್ದು ಯೋಜನೆ ಹಳ್ಳ ಹಿಡಿದಿದೆ.
ಟ್ಯಾಂಕರ್ ಮೂಲಕ ಸಸಿಗಳಿಗೆ ನೀರು ಹಾಕದೆ ನಿರ್ಲಕ್ಷ್ಯಿಸಿರುವುದರಿಂದ ಬೇಸಿಗೆ ಬಿಸಿಲಿನ ಝಳಕ್ಕೆ ಹಲವು ಸಸಿಗಳು ಸಂಪೂರ್ಣ ಒಣಗಿ ನಿಂತಿವೆ. ತಡೆಬೇಲಿ ಕಿತ್ತುಹೋಗಿವೆ. ಕೆಲ ಕಡೆ ಬೀಡಾಡಿ ದನಗಳಿಂದ ಸಸಿಗಳು ಅರ್ಧಕ್ಕೆ ಮುರಿದಿವೆ. ಅತ್ತ ದಾರಿ ಹೋಕರಿಗೆ ನೆರಳಿನ ಕೊಡೆಯಂತಿ ರುತ್ತಿದ್ದ ರಸ್ತೆ ಬದಿ ಸಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿ ಸುತ್ತಿದೆ. ಇತ್ತ ಮರ ಸಸಿಗಳ ರಕ್ಷಣೆ ಮತ್ತು ಪೋಷಣೆ ಹೊಣೆ ಹೊತ್ತ ಅರಣ್ಯ ಇಲಾಖೆ ಮಾತ್ರ ನೆಟ್ಟ ಸಸಿಗಳ ಬಗ್ಗೆ ಮುತುವರ್ಜಿ ವಹಿಸದೆ ಒಣಗಲು ಬಿಟ್ಟು ಪರಿಸರ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಯೋಜನೆ ತಲುಪಿಸಿ: ಅರಣ್ಯ ಇಲಾಖೆ ಜವಾಬ್ದಾರಿ ಯುತವಾಗಿ ಕೆಲಸ ಮಾಡಲು ಮುಂದಾಗಬೇಕಿದೆ. ನೆಡು ತೋಪು ನಿರ್ವಹಣೆ ಹೊಣೆ ಹೊತ್ತ ಸಿಬ್ಬಂದಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಹಾಕುವಂ ತೆಯೂ, ಕಿತ್ತು ಹೋಗಿರುವ ಬೇಲಿ ಸರಿಪಡಿಸು ವಂತೆಯೂ ನಿರ್ದೇಶನ ನೀಡಬೇಕಿದೆ. ಹುಳಿಯಾರಿನ ಪರಿಸರ ಪ್ರೇಮಿ ರಾಜುಬಡಗಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ನೆಪದಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆದಿದೆ. ಕಳೆದ 2-3 ತಿಂಗಳ ಹಿಂದಷ್ಟೇ ಹುಳಿಯಾರು ಪಟ್ಟಣದ ನೂರಾರು ವರ್ಷ ಹಳೆಯ ಹೆಮ್ಮರಗಳನ್ನು ಧರೆಗುರುಳಿಸಿದ್ದರು. ಆದರೆ ಬೆಳಸುವ ಕಾರ್ಯ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ. ಸಸಿ ಬೆಳೆಸ ಲೆಂದೇ ಸರ್ಕಾರ ಹಣ ಕೊಟ್ಟರೂ ಪ್ರಯೋಜನ ವಾಗುತ್ತಿಲ್ಲ. ಹಾಗಾಗಿಯೇ ಈ ಭಾಗ ನಿರಂತರ ಬರಲಾಗಕ್ಕೆ ತುತ್ತಾಗುತ್ತಿದೆ ಎಂದು ತಿಳಿಸಿದ್ದಾರೆ.
.ಎಚ್.ಬಿ.ಕಿರಣ್ ಕುಮಾರ್
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shobha-Kharandlaje](https://www.udayavani.com/wp-content/uploads/2024/07/Shobha-Kharandlaje-150x90.jpg)
Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್ ಸರ್ಕಾರ: ಕೇಂದ್ರ ಸಚಿವೆ ಶೋಭಾ
![5-tumkur](https://www.udayavani.com/wp-content/uploads/2024/07/5-tumkur-150x90.jpg)
Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ
![4-koratagere](https://www.udayavani.com/wp-content/uploads/2024/07/4-koratagere-150x90.jpg)
Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ
![1-ewewqe](https://www.udayavani.com/wp-content/uploads/2024/07/1-ewewqe-150x85.jpg)
Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು
![Naxal chandru- Naxal Chandru arrested after 19 years; What is the case?](https://www.udayavani.com/wp-content/uploads/2024/07/Naxal-150x86.jpg)
Naxal chandru-19 ವರ್ಷದ ಬಳಿಕ ನಕ್ಸಲ್ ಚಂದ್ರು ಸೆರೆ; ಏನಿದು ಪ್ರಕರಣ?
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.