![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಗ್ಯಾಸ್ ಸೋರಿಕೆ: 3 ವರ್ಷಗಳಲ್ಲಿ 7 ಲಕ್ಷ ನಷ್ಟ
Team Udayavani, Sep 9, 2020, 12:24 PM IST
![ಗ್ಯಾಸ್ ಸೋರಿಕೆ: 3 ವರ್ಷಗಳಲ್ಲಿ 7 ಲಕ್ಷ ನಷ್ಟ](https://www.udayavani.com/wp-content/uploads/2020/09/Hasan-tdy-1-4-620x372.jpg)
ಸಾಂದರ್ಭಿಕ ಚಿತ್ರ
ಚಿಕ್ಕನಾಯಕನಹಳ್ಳಿ: ಇತ್ತೀಚಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ಗ್ಯಾಸ್ ಸ್ಟೌವ್ಗಳು ಬಳಕೆಯಾಗುತ್ತಿದ್ದು, ಅವುಗಳ ಅನುಕೂಲದ ಜೊತೆಗೆ ಅಪಾಯವು ಜೊತೆಯಲ್ಲಿಯೇ ಇದ್ದು, ಗ್ರಾಹಕರಿಗೆ ಮಾರ್ಗದರ್ಶನದ ಅವಶ್ಯಕತೆ ಅವಶ್ಯಕವಾಗಿದ್ದು, ಸಂಬಂಧಪಟ್ಟ ಇಲಾಖೆ, ಗ್ಯಾಸ್ ಏಜನ್ಸಿಗಳು ಜಾಗೃತಿ ಮೂಡಿಸಬೇಕಿದೆ.
ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸುಮಾರು 7 ಲಕ್ಷ ರೂ. ನಷ್ಟವಾಗಿದೆ. 9 ಪ್ರಕರಣ ದಾಖಲಾಗಿದ್ದು ಇದರಲ್ಲಿ ಒಬ್ಬರು ಸಾವನಪ್ಪಿದ್ದಾರೆ. 2018 ರಲ್ಲಿ ಕಂದಿಕೆರೆ ಹೋಬಳಿಯಲ್ಲಿನ ಮದನಮಡು ಗ್ರಾಮ, ಕಿಬ್ಬನಹಳ್ಳಿಯ ಹಿಂಡಿಸ್ಕೆರೆ, ಹುಳಿಯಾರ್ ಹೋಬಳಿಯ ಕೊರಗೆರೆ, ಶೆಟ್ಟಿಕೆರೆ ಹೋಬಳಿಯ ಮಾಕುಹಳ್ಳಿ ಗ್ರಾಮಗಳಲ್ಲಿ ಗ್ಯಾಸ್ ಸೋರಿಕೆಯಿಂದ ಅನಾವುತ ಸಂಭವಿಸಿವೆ.
2019ರಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಚಿಕ್ಕನಾಯಕನಹಳ್ಳಿ ಪಟ್ಟಣದ ಬ್ರಾಹ್ಮಣ ಬೀದಿ, ಹುಳಿಯಾರ್ ಹೋಬಳಿಯ ಕಾರೇಹಳ್ಳಿ ಹಾಗೂ ದಾಸೂಡಿ ಗ್ರಾಮಗಳಲ್ಲಿ ಅನಾವುತ ಸಂಭವಿಸಿದೆ. 2020ರಲ್ಲಿ ಇದುವರೆಗೆ 2ಪ್ರಕರಣ ದಾಖಲಾಗಿದ್ದು ಬುಳ್ಳೆನಹಳ್ಳಿ ಹಾಗೂ ದೊಡ್ಡಬಿದರೆಯಲ್ಲಿ ಗ್ಯಾಸ್ ಸೋರಿಕೆಯಿಂದ ನಷ್ಟ ಉಂಟಾಗಿದೆ.ಗ್ಯಾಸ್ ಸೋರಿಕೆಯಿಂದಲೇ ಅನಾಹುತ: 3 ವರ್ಷಗಳಲ್ಲಿ ಸುಮಾರು 7 ಲಕ್ಷ ಗ್ಯಾಸ್ ಸೋರಿಕೆಯಿಂದ ನಷ್ಟ ಉಂಟಾಗಿದೆ ಹಾಗೂ ಆಗ್ನಿ ಶಾಮಕ ದಳದವರ ಸಮಯ ಪ್ರಜ್ಞೆಯಿಂದ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ತಪ್ಪಿದ್ದಂತಾಗಿದೆ. ಗುಣಮಟ್ಟದ ಪೈಪ್ ಹಾಗೂ ರೆಗ್ಯುಲೇಟರ್ಗಳ ಬಗ್ಗೆ ಗ್ರಾಹಕರಿಗೆ ಗ್ಯಾಸ್ ಏಜೆನ್ಸಿಗಳು ಮಾಹಿತಿ ನೀಡಬೇಕಾಗಿದೆ.
ತಡೆಗಟ್ಟುವ ವಿಧಾನ: ಎರಡು ವರ್ಷಗಳಿಗೊಮ್ಮೆ ರೆಗ್ಯೂಲೆಟರ್ ಹಾಗೂ ಲೈಪ್ ಬದಲಾಯಿಸಬೇಕು, ಗ್ಯಾಸ್ ಉಪಯೋಗಿ ಸುವಾಗ ಪಾಲಿಸ್ಟರ್, ಲೈಲಾನ್ ಬಟ್ಟೆಗಳನ್ನು ಬಳಸಬಾ ರದು, ಗ್ಯಾಸ್ ಲೀಕ್ ಆದ ವೇಳೆ ವಿದ್ಯುತ್ ಲೈಟ್ ಆಫ್-ಆನ್ ಮಾಡ ಬಾರದು. ಯತಾಸ್ಥಿತಿ ಕಾಯ್ದುಕೊಳ್ಳಬೇಕು, ಎಲ್ಪಿಜಿ ಗ್ಯಾಸ್ ಗಾಳಿ ಗಿಂತ ಭಾರ ಹಾಗೂ ನೀರಿಗಿಂತ ಹಗುರ ವಾಗಿ ರುವುದರಿಂದ ಲೀಕ್ ಆದ ಗ್ಯಾಸ್ ನೆಲಭಾಗದಲ್ಲಿ ಇರುತ್ತದೆ. ಕಿಟಕಿ ಬಾಗಿಲುಗಳನ್ನು ತೆಗೆಯಬೇಕು, ಅಡಿಗೆ ಮುಗಿದ ನಂತರ ರೆಗ್ಯುಲೇಟರ್ ಆಫ್ ಮಾಡಬೇಕು, ಗ್ಯಾಸ್ ಸೋರಿಕೆ ಯಾದ ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಬೇಕು (08133-267305) ಎಂದುಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ದಳ ಠಾಣಾಧಿಕಾರಿ ಹನುಮಂತರಾಜ್ ತಿಳಿಸಿದ್ದಾರೆ.
– ಚೇತನ್
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shobha-Kharandlaje](https://www.udayavani.com/wp-content/uploads/2024/07/Shobha-Kharandlaje-150x90.jpg)
Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್ ಸರ್ಕಾರ: ಕೇಂದ್ರ ಸಚಿವೆ ಶೋಭಾ
![5-tumkur](https://www.udayavani.com/wp-content/uploads/2024/07/5-tumkur-150x90.jpg)
Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ
![4-koratagere](https://www.udayavani.com/wp-content/uploads/2024/07/4-koratagere-150x90.jpg)
Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ
![1-ewewqe](https://www.udayavani.com/wp-content/uploads/2024/07/1-ewewqe-150x85.jpg)
Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು
![Naxal chandru- Naxal Chandru arrested after 19 years; What is the case?](https://www.udayavani.com/wp-content/uploads/2024/07/Naxal-150x86.jpg)
Naxal chandru-19 ವರ್ಷದ ಬಳಿಕ ನಕ್ಸಲ್ ಚಂದ್ರು ಸೆರೆ; ಏನಿದು ಪ್ರಕರಣ?
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.