ಮಧುಗಿರಿಗೆ ಹರಿಯಲಿದ್ದಾಳೆ ಹೇಮೆ
Team Udayavani, May 23, 2020, 5:38 AM IST
ಮಧುಗಿರಿ: ಬರಗಾಲದಲ್ಲಿಯೂ ಮಧುಗಿರಿಗೆ ಹೇಮಾ ವತಿ ನೀರು ಹರಿಯಲಿದ್ದು, ಸರ್ಕಾರ ನೀರು ಬಿಡಲು ಒಪ್ಪಿದ್ದು, ಸಿದ್ದಾಪುರ ಕೆರೆಗೆ ಹೇಮಾವತಿ ಹರಿಯಲಿದೆ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಹೇಳಿದರು. ಪಟ್ಟಣದ ತಾಪಂನಲ್ಲಿ ಪಿಡಿಒಗಳ ಸಭೆ ಯಲ್ಲಿ ಮಾತನಾಡಿ, ಎರಡನೇ ಬಾರಿಗೆ ಮಧುಗಿರಿಗೆ ಹೇಮೆ ಹರಿಯಲಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ದೂರಾಗಲಿದೆ.
ಗ್ರಾಮೀಣ ಭಾಗದಲ್ಲಿ 50 ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಜನರಿಗೆ ನೀಡುತ್ತಿದ್ದು, ತಹಶೀಲ್ದಾರ್ ಹಣ ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ಆಕ್ರೋಶಗೊಂಡ ಶಾಸಕರು ಕಷ್ಟದಲ್ಲಿ ಹಣ ಸಿಗಲಿದೆ ಎಂಬ ಕಾರಣಕ್ಕೆ ರೈತರು ನೀರು ಕೊಡುತ್ತಾರೆ. ನೀವು ಹಣ ಬಿಡು ಗಡೆ ಮಾಡದಿದ್ದರೆ ಪಿಡಿಒಗಳು ಏನು ಮಾಡಬೇಕು. ಇದರಿಂದ ಸರ್ಕಾರಕ್ಕೂ ನಮಗೂ ಕೆಟ್ಟ ಹೆಸರು ಬರಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸಭೆಯಲ್ಲೇ ಶೀಘ್ರವಾಗಿ ಹಣ ಬಿಡು ಗಡೆಗೆ ಜಿಲ್ಲಾಧಿ ಕಾರಿ ಗಳೊಂದಿಗೆ ದೂರವಾಣಿಯಲ್ಲೇ ಮಾತ ನಾಡಿ ಹಣ ಬಿಡುಗಡೆಗೆ ಒಪ್ಪಿಗೆ ಪಡೆದು ತಹಶೀಲ್ದಾರ್ಗೆ ಸೂಚಿಸಿದರು. ನರೇಗಾದಲ್ಲಿ ಮಧುಗಿರಿ ಪ್ರಥಮ ಸ್ಥಾನದಲ್ಲಿದ್ದು ಕೂಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗ 40 ಸಾವಿರ ಹಣ ಬಿಡುಗಡೆಯಾಗಿದ್ದು ಪಿಡಿಒಗಳು ಕಷ್ಟದಲ್ಲಿರುವ ರೈತ, ಬಡವರಿಗೆ ಇದರಿಂದ ನೆರವಾಗಬೇಕು.
ನಿಮ್ಮ ಯಾವುದೇ ಸಮಸ್ಯೆಗಳಿಗೆ ನಾನು ಜೊತೆಗಿರಲಿದ್ದು, ಯಾರೊಂ ದಿಗೂ ರಾಜಕೀಯ ಮಾಡಬೇಡಿ ಎಂದರು. 45 ಹಳ್ಳಿಯಲ್ಲಿ ಕೊಳವೆಬಾವಿ ವಿಫಲವಾಗಿದ್ದು, ಟ್ಯಾಂಕರ್ ಮೂಲಕ ನೀರು ನೀಡುತ್ತಿದ್ದೇವೆ. ಮತ್ತಷ್ಟು ಅನುಮತಿ ಪಡೆದು ಕೆಲಸ ಮಾಡುವು ದಾಗಿ ತಾಪಂ ಇಒ ದೊಡ್ಡಸಿದ್ದಯ್ಯ ತಿಳಿಸಿದರು. ತಹಶೀಲ್ದಾರ್ ಡಾ.ವಿಶ್ವ ನಾಥ್, ಬೆಸ್ಕಾಂ ಎಇಇ ಕೃಷ್ಣಮೂರ್ತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ