![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಚರಂಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹ
Team Udayavani, May 11, 2019, 12:28 PM IST
![t-4](https://www.udayavani.com/wp-content/uploads/2019/05/t-4-620x460.png)
ತುಮಕೂರು: ನಗರ 35ನೇ ವಾರ್ಡ್ನ ಸಿದ್ದರಾಮೇಶ್ವರ ಬಡಾವಣೆಯ ಸಂಕ್ರಾತಿ ಸ್ಟೋರ್ ಬಳಿ ಉಂಟಾಗಿರುವ ಚರಂಡಿ ಸಮಸ್ಯೆಯನ್ನು ತುಮಕೂರು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸ್ಥಳೀಯ ನಾಗರಿಕ ರೊಂದಿಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಸ್ಥಳೀಯ ನಾಗರಿಕರು, ತುಮಕೂರು ತಾಲೂಕು ಕಸಬ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ಸರ್ವೆ.ನಂ. 66,69 ಹಾಗೂ 74ರಲ್ಲಿ ಕಂದಾಯ ದಾಖಲೆ ಮತ್ತು ಸರ್ವೆ ದಾಖಲೆಗಳಲ್ಲಿ ಸರ್ಕಾರಿ ಖರಾಬು ಇದೆ. ನೈಸರ್ಗಿಕ ಹಳ್ಳ ಬಹಳ ವರ್ಷ ಗಳಿಂದಲೂ ಹರಿದು ಶೆಟ್ಟಿಹಳ್ಳಿ ಕೆರೆಯನ್ನು ಸೇರುತ್ತಿತ್ತು. ತುಮಕೂರು ನಗರ ಬೆಳೆದಂತೆ ಈ ಸುತ್ತಮುತ್ತಲ್ಲಿನ ಪ್ರದೇಶ ವಸತಿ ಪ್ರದೇಶ ವಾಗಿ ಮಾರ್ಪಡಾಗಿದೆ ಎಂದು ತಿಳಿಸಿದರು.
ಹಳ್ಳ ಒತ್ತುವರಿ: ಪ್ರಸ್ತುತ ತುಮಕೂರು ನಗರದ ಬಟವಾಡಿಯ ಸೆಂಟ್ ಮೇರಿಸ್ ಶಾಲೆ ಪ್ರದೇಶ, ಮಹಾಲಕ್ಷ್ಮೀ ಬಡಾವಣೆ, ಸಿದ್ದರಾಮೇಶ್ವರ ಬಡಾವಣೆ, ಬಡ್ಡಿಹಳ್ಳಿ, ಮಂಜುನಾಥ ನಗರ ಪ್ರದೇಶದ ವಾಸದ ಮನೆಯ ಚರಂಡಿ ನೀರು ಹಾಗೂ ಮಳೆ ನೀರು ನೈಸರ್ಗಿಕ ಹಳ್ಳದ ಮುಖಾಂತರ ಶೆಟ್ಟಿ ಹಳ್ಳಿ ಕೆರೆಯನ್ನು ಸೇರುತ್ತಿತ್ತು. ಆದರೆ, ಸರ್ವೆ ನಂಬರ್ 66,69, 74 ಮತ್ತು ಇದ್ದ ಹಳ್ಳವನ್ನು ಒತ್ತುವರಿ ಮಾಡಿ ಮುಚ್ಚಿ ಒಂದೂವರೆ ಮೀಟರ್ ಆಗಲದ ಮಳೆ ನೀರಿನ ಚರಂಡಿ ನೀರನ್ನು ಪೈಪ್ ಕಲ್ವರ್ಟ್ ಮುಖಾಂತರ ನೀರಿನ ಹರಿವನ್ನು ತಿರುಗಿಸಿ, ಕೇವಲ ಒಂದೂವರೆ ಆಡಿ ಚರಂಡಿಯಲ್ಲಿ ಹರಿಯು ವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕೊಳಚೆ ನೀರಿನಿಂದ ತೊಂದರೆ: ಇದ್ದರಿಂದಾಗಿ ತ್ಯಾಜ್ಯ ವಸ್ತುಗಳಿಂದ ಚರಂಡಿ ಕಟ್ಟಿಕೊಂಡು ಚರಂಡಿ ನೀರು ರಸ್ತೆಯ ಮೇಲೆ ಹರಿಯು ತ್ತಿದೆ. ಅಲ್ಪ ಪ್ರಮಾಣದ ಮಳೆಯಾದರೂ ಸಹ ಈ ಪ್ರದೇಶವು ಜಲವೃತ್ತವಾಗಿ ಸಾರ್ವ ಜನಿಕರಿಗೆ ಒಡಾಟಕ್ಕೆ ತೊಂದರೆಯಾಗುತ್ತಿದೆ. ಸದಾಕಾಲ ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಂಕ್ರಾಮಿಕ ಖಾಯಿಲೆಗಳಿಗೆ ಕಾರಣವಾಗಿರುತ್ತದೆ. ಈಗ ಮಳೆಗಾಲ ಪ್ರಾರಂಭವಾಗುವುದರಿಂದ ಈ ಸಮಸ್ಯೆಯು ಪುನಾರವರ್ತನೆಗೊಂಡು ಸಾರ್ವಜನಿಕರಿಗೆ ಪದೇ ಪದೆ ತೊಂದರೆ ಯಾಗುವ ಸಂಭವವಿದೆ ಎಂದು ಹೇಳಿದರು.
ಶಾಶತ್ವ ಪರಿಹಾರಕ್ಕೆ ಕ್ರಮ: ಚರಂಡಿ ಸಮಸ್ಯೆ ಯನ್ನು ಶಾಶತ್ವವಾಗಿ ಬಗೆಹರಿಸಲು ಒತ್ತುವರಿ ಯಾಗಿರುವ ಹಳ್ಳದ ಪ್ರದೇಶವನ್ನು ಭೂ ಮಾಪನ ಇಲಾಖೆಯಿಂದ ಆಳತೆ ಕಾರ್ಯ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಿ, ಈ ಪ್ರದೇಶಗಳ ನೀರು ಸಾರಗವಾಗಿ ಹರಿ ಯುವಂತೆ ಮಾಡಲಾಗುವುದು. ಮಳೆ ನೀರಿನ ಚರಂಡಿ, ಸೆಡಿಮೆಂಟೆಷನ್ ಟ್ಯಾಂಕ್ನ್ನು ನಿರ್ಮಿಸಿ ಶುದ್ಧ ನೀರು ಶೆಟ್ಟಿಹಳ್ಳಿ ಕೆರೆಗೆ ಹರಿಯುವಂತೆ ಮಾಡಲು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shobha-Kharandlaje](https://www.udayavani.com/wp-content/uploads/2024/07/Shobha-Kharandlaje-150x90.jpg)
Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್ ಸರ್ಕಾರ: ಕೇಂದ್ರ ಸಚಿವೆ ಶೋಭಾ
![5-tumkur](https://www.udayavani.com/wp-content/uploads/2024/07/5-tumkur-150x90.jpg)
Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ
![4-koratagere](https://www.udayavani.com/wp-content/uploads/2024/07/4-koratagere-150x90.jpg)
Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ
![1-ewewqe](https://www.udayavani.com/wp-content/uploads/2024/07/1-ewewqe-150x85.jpg)
Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು
![Naxal chandru- Naxal Chandru arrested after 19 years; What is the case?](https://www.udayavani.com/wp-content/uploads/2024/07/Naxal-150x86.jpg)
Naxal chandru-19 ವರ್ಷದ ಬಳಿಕ ನಕ್ಸಲ್ ಚಂದ್ರು ಸೆರೆ; ಏನಿದು ಪ್ರಕರಣ?
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.