ಒಲಿಂಪಿಕ್ಸ್‌ ಪದಕ ಗುರಿ: ಜಿಲ್ಲಾಡಳಿತದ ಗೌರವ ಸ್ವೀಕರಿಸಿ ಗುರುರಾಜ್‌


Team Udayavani, Apr 20, 2018, 10:23 AM IST

Gururaj–Weightlifter-600.jpg

ಉಡುಪಿ: ಒಲಿಂಪಿಕ್ಸ್‌ ಪದಕ ನನ್ನ ಗುರಿ ಎಂದು ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ವೇಟ್‌ ಲಿಫ್ಟಿಂಗ್‌ ಬೆಳ್ಳಿ ಪದಕ ಗೆದ್ದಿರುವ ಕುಂದಾಪುರದ ಗುರುರಾಜ್‌ ಹೇಳಿದ್ದಾರೆ. ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾನು ಹುಟ್ಟೂರಿಗೆ ಬಂದ ಸಂದರ್ಭ ಭವ್ಯ ಸ್ವಾಗತ ದೊರೆತಿದೆ. ಇತರ ಕ್ರೀಡಾಪಟುಗಳಿಗೂ ಇದೇ ಮಾದರಿಯ ಪ್ರೋತ್ಸಾಹ ದೊರೆಯಲಿ. ಆಗ ಮಾತ್ರ ಹ‌ಳ್ಳಿಯ ಕ್ರೀಡಾಪಟುಗಳು ಕೂಡ ಸಾಧನೆ ಮಾಡಲು ಸಾಧ್ಯ ಎಂದರು. 2015ರಿಂದ ಪಂಜಾಬ್‌ನ ಪಟಿಯಾಲಾದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 2 ತಾಸು, ಸಂಜೆ 3 ತಾಸು ನಿರಂತರ ಅಭ್ಯಾಸ ಮಾಡುತ್ತಿದ್ದೇನೆ. ಸೆಪ್ಟಂಬರ್‌ನಲ್ಲಿ ನಡೆಯುವ ಏಷ್ಯನ್‌ ಗೇಮ್ಸ್‌ಗೆ ಸಿದ್ಧನಾಗುತ್ತಿದ್ದೇನೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ಇದೆ. ಕಾಮನ್ವೆಲ್ತ್‌ನಲ್ಲಿ ಎತ್ತಿರುವ ಭಾರಕ್ಕಿಂತ 20ರಿಂದ 30 ಕೆಜಿ ಜಾಸ್ತಿ ಎತ್ತಿದರೆ ಒಲಿಂಪಿಕ್ಸ್‌ ಪದಕ ಗೆಲ್ಲಬಹುದಾಗಿದೆ ಎಂದರು.

ಪ್ರೋತ್ಸಾಹ ಸಾಲದು
ನಾಲ್ಕು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಒಟ್ಟು 2 ಚಿನ್ನ, ತಲಾ 1 ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದ್ದೇನೆ. ಏಕಲವ್ಯ ಪ್ರಶಸ್ತಿ ದೊರೆತಿದೆ. ಉಳಿದಂತೆ ಸರಕಾರಗಳ ಪ್ರೋತ್ಸಾಹ ಅಷ್ಟಾಗಿ ಸಿಕ್ಕಿಲ್ಲ. ಎ. 20ರಂದು ರಕ್ಷಣಾ ಇಲಾಖೆಯಿಂದ ಸಮ್ಮಾನವಿದೆ ಎಂದು ಹೇಳಿದರು.

ಜಿಲ್ಲೆಗೆ ಹೆಮ್ಮೆ
ಸಮ್ಮಾನ ನಡೆಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು, ಗುರುರಾಜ್‌ ಅವರು ಉಡುಪಿ ಜಿಲ್ಲೆಯವರಾಗಿರುವುದು ನಮಗೆ ಹೆಮ್ಮೆ ಮತ್ತು ಸಂತೋಷವನ್ನುಂಟು ಮಾಡಿದೆ. ಇವರು ಇತರರಿಗೂ ಸ್ಫೂರ್ತಿಯಾಗಿ ಮತ್ತಷ್ಟು ಮಂದಿ ಕ್ರೀಡೆಯಲ್ಲಿ ಸಾಧನೆ ಮಾಡುವಂತಾಗಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ, ಗುರುರಾಜ್‌ ಹುಟ್ಟೂರಿಗೆ ಆಗಮಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾಡಳಿತವೇ ವಿಮಾನ ನಿಲ್ದಾಣದಿಂದ ಅವರ ಮನೆಯವರೆಗೆ ವಾಹನ ವ್ಯವಸ್ಥೆ ಮಾಡಿದೆ. ಎ. 20ರಂದು ಅವರು ದಿಲ್ಲಿಗೆ ತೆರಳಲಿದ್ದಾರೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧಾ, ಸಿಇಒ ಶಿವಾನಂದ ಕಾಪಶಿ, ಗುರುರಾಜ್‌ ತಂದೆ ಮಹಾಬಲ ಪೂಜಾರಿ ಉಪಸ್ಥಿತರಿದ್ದರು.

ಜಿಲ್ಲೆಯ ಮತ ಜಾಗೃತಿ ಐಕಾನ್‌
ಮತದಾನ ಜಾಗೃತಿಗಾಗಿ ಗುರುರಾಜ ಅವರನ್ನು ಉಡುಪಿ ಜಿಲ್ಲೆಯ ಐಕಾನ್‌ ಆಗಿ ಜಿಲ್ಲಾಡಳಿತ ನಿಯೋಜಿಸುತ್ತಿದೆ ಎಂದು ಜಿಲ್ಲಾಧಿಕಾರಿ ಘೋಷಿಸಿದರು. ‘ಎಲ್ಲರೂ ತಪ್ಪದೇ ಮತದಾನ ಮಾಡಿ’ ಎಂಬ ಸಂದೇಶವನ್ನು ಒಳಗೊಂಡ ಗುರುರಾಜ್‌ ಅವರ ಧ್ವನಿಚಿತ್ರವನ್ನು ಮುದ್ರಿಸಿಕೊಳ್ಳಲಾಯಿತು.

ಟಾಪ್ ನ್ಯೂಸ್

Laos: ವಿಶ್ವದ ಮೊದಲ ದೇಶ- ಅಯೋಧ್ಯೆ ರಾಮಲಲ್ಲಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಲಾವೋಸ್…

Laos: ವಿಶ್ವದ ಮೊದಲ ದೇಶ- ಅಯೋಧ್ಯೆ ರಾಮಲಲ್ಲಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಲಾವೋಸ್…

Gautam Gambhir started a new experiment while becoming the coach of Team India

Team India ಕೋಚ್ ಆಗುತ್ತಲೇ ಹೊಸ ಪ್ರಯೋಗಕ್ಕೆ ಮುಂದಾದ ಗೌತಮ್ ಗಂಭೀರ್

10-uv-fusion

Future: ಮುಗಿಯದ ಮುಂದೇನು ಪ್ರಶ್ನೆ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

1-aasa

Paris Olympics ; ಮೊದಲ ಎರಡು ಚಿನ್ನದ ಪದಕ ಗೆದ್ದ ಚೀನಾ!

Hostelನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ.. ನದಿ ದಂಡೆಯಲ್ಲಿ ಬ್ಯಾಗ್, ಮೊಬೈಲ್ ಪತ್ತೆ

Hostelನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ.. ನದಿ ದಂಡೆಯಲ್ಲಿ ಬ್ಯಾಗ್, ಮೊಬೈಲ್ ಪತ್ತೆ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

Screenshot (3) copy

Kundapura: ಮಕ್ಕಳನ್ನು ಹೊತ್ಕೊಂಡೇ ಹೊಳೆ ದಾಟಿಸಬೇಕು!ಅಮಾಸೆಬೈಲಿನ ಕುಡಿಸಾಲು ಪರಿಸರದ ಸಮಸ್ಯೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

MUST WATCH

udayavani youtube

ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

ಹೊಸ ಸೇರ್ಪಡೆ

Laos: ವಿಶ್ವದ ಮೊದಲ ದೇಶ- ಅಯೋಧ್ಯೆ ರಾಮಲಲ್ಲಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಲಾವೋಸ್…

Laos: ವಿಶ್ವದ ಮೊದಲ ದೇಶ- ಅಯೋಧ್ಯೆ ರಾಮಲಲ್ಲಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಲಾವೋಸ್…

Gautam Gambhir started a new experiment while becoming the coach of Team India

Team India ಕೋಚ್ ಆಗುತ್ತಲೇ ಹೊಸ ಪ್ರಯೋಗಕ್ಕೆ ಮುಂದಾದ ಗೌತಮ್ ಗಂಭೀರ್

10-uv-fusion

Future: ಮುಗಿಯದ ಮುಂದೇನು ಪ್ರಶ್ನೆ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

1-aasa

Paris Olympics ; ಮೊದಲ ಎರಡು ಚಿನ್ನದ ಪದಕ ಗೆದ್ದ ಚೀನಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.