ಕೊಳೆಗೇರಿ ಕುಟುಂಬಗಳಿಗೆ ಐನೂರು ಮನೆ ನಿರ್ಮಾಣ


Team Udayavani, Mar 18, 2018, 7:20 AM IST

Prime-Minister-Awas-Project.jpg

ಉಡುಪಿ: ಕೊಳಗೇರಿ ಜನರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಉಡುಪಿ ನಗರದ ಕೊಳೆಗೇರಿಯಲ್ಲಿ 500 ಮನೆಗಳ ನಿರ್ಮಾಣಕ್ಕೆ ಫ‌ಲಾನುಭವಿಗಳನ್ನು ಗುರುತಿಸುವ ಕಾರ್ಯ ಮಾಡಲಾಗಿದೆ.  ಕೊಳಗೇರಿ ಅಭಿವೃದ್ಧಿ ಮಂಡಳಿಯ “ಎಲ್ಲರಿಗೂ ಸೂರು’ ಯೋಜನೆ ಮೂಲಕ ಈ ಯೋಜನೆ ಜಾರಿಯಾಗಲಿದೆ.  

ಯೋಜನೆ ಸ್ಥಳ ಎಲ್ಲಿ? 
ಉಡುಪಿ ನಗರಸಭೆ ವ್ಯಾಪ್ತಿಯ ಘೋಷಿತ ನಾಲ್ಕು ಕೊಳಗೇರಿ ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಮನೆಗಳು ನಿರ್ಮಾಣವಾಗಲಿದೆ. 500 ಫ‌ಲಾನುಭವಿಗಳ ಪಟ್ಟಿಯನ್ನು ಶಿವಮೊಗ್ಗ ಉಪವಿಭಾಗದ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಸರ್ವೇ ಕಾರ್ಯ ನಡೆಸಿ ತಯಾರಿಸಿದ್ದಾರೆ.

ಕಾಮಗಾರಿ ಟೆಂಡರ್‌ ಮೂರ್‍ನಾಲ್ಕು ದಿನದ ಹಿಂದೆ ಆಗಿದ್ದು, ಇಲಾಖೆಯಿಂದ ವರ್ಕ್‌ ಆರ್ಡರ್‌ ಬಂದ ಕೂಡಲೇ ಮನೆ ನಿರ್ಮಾಣ ಕಾಮಗಾರಿಯು ಶುರುವಾಗಲಿದೆ. ಒಂದೂವರೆ ವರ್ಷದಲ್ಲಿ ಪೂರ್ಣ 18 ತಿಂಗಳೊಳಗೆ ಗುತ್ತಿಗೆದಾರರು ಮನೆ ನಿರ್ಮಿಸಿ ಕೊಡಬೇಕಿದೆ. ಮನೆಗಳ ನಿರ್ಮಾಣದ ಬಳಿಕ ನಗರಾಭಿವೃದ್ಧಿ ಅಥವಾ ಇತರ ಇಲಾಖೆ ಮೂಲಕ ಅನುದಾನ ಪಡೆದುಕೊಂಡು ಕುಡಿಯುವ ನೀರು, ರಸ್ತೆ, ಒಳಚರಂಡಿ ಮೊದಲಾದ ಮೂಲಸೌಕರ್ಯ ಕಲ್ಪಿಸುವ ಯೋಜನೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

28.6 ಕೋ.ರೂ. ಯೋಜನೆ
500 ಮನೆಗಳ ನಿರ್ಮಾಣಕ್ಕೆ ಒಟ್ಟು 28.6 ಕೋ.ರೂ. ಮೊತ್ತ ಮೀಸಲಿರಿಸಲಾಗಿದೆ. ಒಂದು ಮನೆಗೆ ತಲಾ 5,15,364 ರೂ. ವ್ಯಯವಾಗಲಿದೆ. ಸಾಮಾನ್ಯ ವರ್ಗದ ಫ‌ಲಾನುಭವಿಗಳು ಮನೆ ನಿರ್ಮಾಣ ಮೊತ್ತದ ಶೇ. 15ರಷ್ಟು ಅಂದರೆ 77,305 ರೂ. ಹಾಗೂ ಪರಿಶಿಷ್ಟ ಜಾತಿ/ಪಂಗಡದವರು 51,536 ರೂ. ಹಣವನ್ನು ಫ‌ಲಾನುಭವಿಗಳು ಕಡ್ಡಾಯವಾಗಿ ಡಿಡಿಯಲ್ಲಿ ಪಾವತಿ ಮಾಡಬೇಕು. ಕೇಂದ್ರ, ರಾಜ್ಯದ ಅನುದಾನಗಳನ್ನು ಹೊರತುಪಡಿಸಿ ಬ್ಯಾಂಕ್‌ ಸಾಲ ಮಾಡಬೇಕಾಗುತ್ತದೆ. ಅದನ್ನು  ಫ‌ಲಾನುಭವಿಗಳೇ ಕಟ್ಟಬೇಕು. 

      ಎಲ್ಲೆಲ್ಲಿ ?               ಎಷ್ಟೆಷ್ಟು ?
-  ನ್ಯೂ ಕಾಲನಿ                158
-  ಬಲರಾಮ ನಗರ           130
-  ವಿಷ್ಣುಮೂರ್ತಿ ನಗರ       120
-  ಕೊಡವೂರು ಪಾಳೆಕಟ್ಟೆ      92

ಮನೆಯಲ್ಲಿ ಏನೇನಿರುತ್ತೆ? 
353 ಚ.ಅಡಿಯ ಆರ್‌ಸಿಸಿ ಮನೆ ನಿರ್ಮಾಣವಾಗಲಿದೆ. 1 ಹಾಲ್‌, 1 ಬೆಡ್‌ರೂಮ್‌, 1 ಬಾತ್‌ರೂಮ್‌, ಕಿಚನ್‌ ಹೊಂದಿರಲಿದೆ.  

ಫ‌ಲಾನುಭವಿಗಳಿಗೆ ಮಾನದಂಡ
ಫ‌ಲಾನುಭವಿಗಳು ಕೊಳಗೇರಿ ನಿವಾಸಿಗಳೇ ಆಗಿರಬೇಕು. ಹಕ್ಕುಪತ್ರ ಇರಬೇಕು. ಬಿಪಿಎಲ್‌ ಕಾರ್ಡ್‌ ಹೊಂದಿರಬೇಕು. ತೆರಿಗೆ ಪಾವತಿ ಮಾಡುವವರಾಗಿರಬೇಕು. ಆಧಾರ್‌ ಕಾರ್ಡ್‌ ಇರಬೇಕು. ಇಷ್ಟು ದಾಖಲೆಗಳಿದ್ದರೆ ಅವರು ಫ‌ಲಾನುಭವಿಗಳಾಗಬಹುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಉಡುಪಿ ವಿಭಾಗಾಧಿಕಾರಿ ಕೃಷ್ಣ ಅವರು ತಿಳಿಸಿದ್ದಾರೆ.

ಅನುದಾನ           ಸಾಮಾನ್ಯ ವರ್ಗಕ್ಕೆ       ಪ.ಜಾತಿ/ಪಂಗಡಕ್ಕೆ
 ಕೇಂದ್ರ ಸರಕಾರ     1,50,000 ರೂ.     1,50,000 ರೂ. 
 ರಾಜ್ಯ ಸರಕಾರ      1,20,000 ರೂ.      1,80,000 ರೂ.
 ಬ್ಯಾಂಕ್‌ ಸಾಲ       1,68,059 ರೂ.       1,33,828 ರೂ.
 ಫ‌ಲಾನುಭವಿ ಕಟ್ಟಲು 77,305 ರೂ.         51,536 ರೂ.
  ಒಟ್ಟು                   5,15,364 ರೂ.    5,15,364 ರೂ.

– ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

BJP 2

UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.