ಮಲ್ಪೆ: ಬಂಡೆಗೆ ಬಡಿದ ಮೀನುಗಾರಿಕಾ ಬೋಟ್… ಐವರು ಮೀನುಗಾರರ ರಕ್ಷಣೆ
Team Udayavani, Jan 5, 2023, 11:25 PM IST
ಮಲ್ಪೆ: ಮೀನುಗಾರಿಕೆ ದೋಣಿಯೊಂದು ಸಮುದ್ರ ಮಧ್ಯೆ ಬಂಡೆಗೆ ಬಡಿದು ಹಾನಿಗೀಡಾದ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ಎಲ್ಲ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಬಡಾನಿಡಿಯೂರಿನ ಭಾಸ್ಕರ್ ಎಂ. ಪುತ್ರನ್ ಅವರ ಸ್ವರ್ಣಗೌರಿ ದೋಣಿ ಡಿ. 30ರಂದು ರಾತ್ರಿ ಮಲ್ಪೆಯಿಂದ ತೆರಳಿತ್ತು. ಜ. 3ರಂದು ಮುಂಜಾನೆ ಕಾಪುವಿನಿಂದ ನೇರ 8 ನಾಟಿಕಲ್ ಮೈಲು ಆಳದೂರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಬಂಡೆಗೆ ಬಡಿದ ಪರಿಣಾಮ ಹಲಗೆ ಒಡೆದು ನೀರು ನುಗ್ಗಲಾರಂಭಿಸಿತು.
ಸ್ವರ್ಣಗೌರಿ ದೋಣಿಯ ತಂಡೆಲರು ಸಮೀಪದಲ್ಲೇ ಇದ್ದ ವರುಣ ದೋಣಿಗೆ ಮಾಹಿತಿ ರವಾನಿಸಿ ರಕ್ಷಣೆ ಕೋರಿದರು. ತತ್ಕ್ಷಣ ಧಾವಿಸಿ ಬಂದ ಅವರು ಮುಳುಗುತ್ತಿದ್ದ ದೋಣಿಯಲ್ಲಿದ್ದ ಎಲ್ಲ ಐವರನ್ನು ರಕ್ಷಿಸಿದರು. ಬಂಡೆಗೆ ಬಡಿದ ದೋಣಿಯ ರಕ್ಷಣೆ ಸಾಧ್ಯವಾಗಲಿಲ್ಲ. 6 ಸೆಟ್ ಬಲೆ, ರೋಪು, ಡ್ರಮ್ವಿಂಚ್, ಎಂಜಿನ್, 2 ಸಾವಿರ ಲೀ. ಡೀಸೆಲ್ ಸಮುದ್ರಪಾಲಾಗಿದೆ. ಸುಮಾರು 30 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ
Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್ಪಾರ್ಕ್ ಸುರಕ್ಷಿತ
Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ
Udupi; ಬ್ಯಾಂಕ್ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ
Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್ ಆಗುವ ಭೀತಿ
MUST WATCH
ಹೊಸ ಸೇರ್ಪಡೆ
ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ
Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್ ಮಾಡಿದ್ರಾ ಸಮಂತಾ?: ಟ್ರೆಂಡ್ ಆದ ಸ್ಯಾಮ್
Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!