ಮಠದಲ್ಲಿ ಪೇಜಾವರ ಶ್ರೀ: ವಿಷ್ಣು ಸಹಸ್ರನಾಮ ಪಾರಾಯಣ ಆರಂಭ
Team Udayavani, Dec 29, 2019, 9:08 AM IST
ಉಡುಪಿ: ಉಡುಪಿ ಅಷ್ಟಮಠಗಳ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳನ್ನು ಮಣಿಪಾಲ ಆಸ್ಪತ್ರೆಯಿಂದ ಪೇಜಾವರ ಮಠಕ್ಕೆ ಕರೆದುಕೊಂಡು ಬರಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಠದಲ್ಲಿ ವಿಶೇಷ ಕೊಠಡಿಯಲ್ಲಿ ಸಕಲ ವ್ಯವಸ್ಥೆ ಮಾಡಿ ಪೇಜಾವರ ಯತಿಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದ್ದು, ಮಣಿಪಾಲ ಆಸ್ಪತ್ರೆಯ ನುರಿತ ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆ.
ವಿಷ್ಣು ಸಹಸ್ರನಾಮ ಪಾರಾಯಣ: ಪೇಜಾವರ ಮಠದಲ್ಲಿ ಅಷ್ಠಮಠದ ಇತರ ಮಠಾಧೀಶರಿಂದ ವಿಷ್ಣು ಸಹಸ್ರ ನಾಮ ಆರಂಭವಾಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮೊಕ್ಕಾಂ ಹೂಡಿದ್ದು, ಉಮಾಭಾರತಿ, ಶೋಭಾ ಕರಂದ್ಲಾಜೆ, ಡಿ ವಿ ಸದಾನಂದ ಗೌಡ, ರಘುಪತಿ ಭಟ್, ರಾಮದಾಸ್ ಮುಂತಾದವರು ಮಠದ ಆವರಣದಲ್ಲಿದ್ದು, ಪ್ರತಿಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.