ಶಿರ್ಲಾಲು ಸೂಡಿ ಬಸದಿಯ ಪುನಃ ನಿರ್ಮಾಣ ಸಂಕಲ್ಪ


Team Udayavani, Jul 9, 2018, 6:00 AM IST

0807ajke01.jpg

ಅಜೆಕಾರು:ಪಶ್ಚಿಮ ಘಟ್ಟ ತಪ್ಪಲಿನ ಕಾನನದ ನಡುವೆ ಇರುವ ಪುಟ್ಟ ಗ್ರಾಮ ಶಿರ್ಲಾಲು ಸೂಡಿ. ಇಲ್ಲಿನ ತಾಣದ ಬೆಟ್ಟು ಎಂಬಲ್ಲಿ ಸುಮಾರು ಎರಡು ಶತಮಾನಗಳಿಂದ ಯಾವುದೇ ಪೂಜೆ ಕಾರ್ಯಕ್ರಮ ನಡೆಯದೇ ಜನರ ಮನದಿಂದ ಕಣ್ಮರೆಯಾಗಿದ್ದ ಬಸದಿಯೊಂದು ಗೋಚರಕ್ಕೆ ಬಂದಿದ್ದು ಇದರ  ಪುನರ್‌ ನಿರ್ಮಾಣದ ಸಂಕಲ್ಪವನ್ನು ಸ್ಥಳೀಯರು ಮಾಡಿದ್ದಾರೆ.

ಸುಮಾರು 300 ವರ್ಷಗಳ ಹಿಂದೆ ನಿರ್ಮಾಣಗೊಂಡು ಸ್ಥಳೀಯರ ಆರಾಧ್ಯ ಆರಾಧನ ಕೇಂದ್ರವಾಗಿ ವೈಭವದಿಂದ ಧಾರ್ಮಿಕ ಚಟುವಟಿಕೆ ನಡೆಯುತ್ತಿದ್ದ ಈ ಬಸದಿಯಲ್ಲಿ 200 ವರ್ಷಗಳಿಂದ ಯಾವುದೇ ಧಾರ್ಮಿಕ ಕಾರ್ಯ ನಡೆದಿಲ್ಲ. ಅನಂತರದ ದಿನಗಳಲ್ಲಿ ಬಸದಿ ಶಿಥಿಲಗೊಂಡು ಸಂಪೂರ್ಣವಾಗಿ ಕುಸಿದು ಬಿದ್ದು ಗಿಡ ,ಮರ, ಪೊದೆಗಳಿಂದ ಆವೃತವಾಗಿ ಕಣ್ಮರೆಯಾಗಿತ್ತು.

ಬಸದಿಯ ಗರ್ಭಗುಡಿ ಕುಸಿದು ಬಿದ್ದು ಕೇವಲ ಗೋಡೆಯ ಮುರಕಲ್ಲುಗಳು ಅವಶೇಷವಾಗಿ ಕಂಡುಬಂದರೆ, ಬಸದಿಯ ಹೊರಭಾಗದಲ್ಲಿ ಕಲ್ಕುಡ ದೈವದ ಕಲ್ಲು ಪಾಳುಬಿದ್ದ ಸ್ಥಿತಿಯಲ್ಲಿದೆ.ಬಸದಿಗೆ ಸಂಬಂಧಪಟ್ಟಂತೆ ಸುಮಾರು 20 ಅಡಿ ಆಳದ ತೀರ್ಥಬಾವಿ ಪಾಳುಬಿದ್ದಿದೆ.ಇದರ ಸುತ್ತಲೂ ಗಡಿ ಕಲ್ಲುಗಳಿದ್ದು ಹಿಂದೆ ವೈಭವದಿಂದ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಕುರುಹು ಗೋಚರಿಸುತ್ತಿವೆ.

ಸೂಡಿ ಮನೆತನದ ಆಡಳಿತಕ್ಕೊಳಪಟ್ಟ ಈ ಬಸದಿಯಲ್ಲಿ ಭಗವಾನ್‌ ಶ್ರೀ ಆದಿನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ದೇವಿ ಆರಾಧಿಸಿಕೊಂಡು ಬರಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸೂಡಿ ಮನೆತನ, ಸ್ಥಳೀಯ ಗಾಮಸ್ಥರಿಗೆ ಸಂಕಷ್ಟ ಎದುರಾದಾಗ ದೈವಜ್ಞರ ಆರೂಢ ಪಶ್ನೆಯಲ್ಲಿ ಕಂಡುಕೊಂಡಂತೆ ಬಸದಿ ಪುನರ್‌ ನಿರ್ಮಾಣದ ಸಂಕಲ್ಪ ಮಾಡಲಾಗಿದೆ.

ಬಸದಿಗೆ ಸಂಬಂಧಪಟ್ಟು ಹಿಂದೆ ಸುಮಾರು 400 ಎಕರೆ ಜಾಗ ಇದ್ದರೆ ಈಗ 25 ಸೆಂಟ್ಸ್‌ ಜಾಗ ಇದ್ದು ಅದರಲ್ಲಿ ಬಸದಿ ನಿರ್ಮಾಣ ಕಾರ್ಯ ನಡೆಯಲಿದೆ. 

40 ಲ.ರೂ. ವೆಚ್ಚದಲ್ಲಿ ಪುನರ್‌ ನಿರ್ಮಾಣ
ಪುನರ್‌ ನಿರ್ಮಾಣದ ಪೂರ್ವಭಾವಿಯಾಗಿ ನಡೆಯಬೇಕಾದ ಎಲ್ಲ ಧಾರ್ಮಿಕ ಕಾರ್ಯ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಹಿಂದೆ ಬಸದಿ ಇದ್ದ ಜಾಗದಲ್ಲಿಯೇ ಆಯಾ ಅಳತೆಗೆ ಅನುಗುಣವಾಗಿ ಬಸದಿ ನಿರ್ಮಿಸುವ ಸಲುವಾಗಿ ಸಮಿತಿ , ಟ್ರಸ್ಟ್‌ ರಚಿಸಲಾಗಿದೆ. ಜು. 15ರಂದು ಪೂಜೆಯೊಂದಿಗೆ ಉತVನನ ಕಾರ್ಯ ಆರಂಭವಾಗಲಿದ್ದು  ಅನಂತರ ಸುಮಾರು 40 ಲ.ರೂ. ವೆಚ್ಚದಲ್ಲಿ ವಾಸ್ತು ಪ್ರಕಾರವಾಗಿ ಬಸದಿ ನಿಮಾರ್ಣಗೊಳ್ಳಲಿದೆ .

ಟಾಪ್ ನ್ಯೂಸ್

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Karthik’s advice helped me when i was struggling without rhythm: Virat Kohli

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

Mysore; ಒಂದು ವರ್ಷದಿಂದ ಕಟ್ಟಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

Mysore; ಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

King Cobra: ಅಡುಗೆ ಕೋಣೆಯಲ್ಲಿ ಅವಿತು ಕುಳಿತ ದೈತ್ಯ ಕಾಳಿಂಗ ಸರ್ಪ, ಬೆಚ್ಚಿಬಿದ್ದ ಮನೆ ಮಂದಿ

King Cobra: ಅಡುಗೆ ಕೋಣೆಯಲ್ಲಿ ಅವಿತು ಕುಳಿತ ದೈತ್ಯ ಕಾಳಿಂಗ ಸರ್ಪ, ಬೆಚ್ಚಿಬಿದ್ದ ಮನೆ ಮಂದಿ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Google Map Follow ಮಾಡಿ ಹಳ್ಳಕ್ಕೆ ದುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Channagiri; ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಚನ್ನಗಿರಿಯಲ್ಲಿ ಬಿಗಿ ಬಂದೋಬಸ್ತ್

Channagiri; ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಚನ್ನಗಿರಿಯಲ್ಲಿ ಬಿಗಿ ಬಂದೋಬಸ್ತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Udupi: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

Udupi: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

ಎಂಒ4 ಬದಲು ಸಹ್ಯಾದ್ರಿ ಕೆಂಪುಮುಖ್ತಿಗೆ ಆದ್ಯತೆ

ಎಂಒ4 ಬದಲು ಸಹ್ಯಾದ್ರಿ ಕೆಂಪುಮುಖ್ತಿಗೆ ಆದ್ಯತೆ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Manipal ಪ್ರತ್ಯೇಕ ಪ್ರಕರಣ; ಗಾಂಜಾ ಸೇವನೆ: ಏಳು ಮಂದಿ ವಶ

Manipal ಪ್ರತ್ಯೇಕ ಪ್ರಕರಣ; ಗಾಂಜಾ ಸೇವನೆ: ಏಳು ಮಂದಿ ವಶ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

5-

ಗಾಂಜಾ ಸಾಗಾಟ; ತೀರ್ಥಹಳ್ಳಿಯಲ್ಲಿ ಇಬ್ಬರ ಬಂಧನ; 2 ಕೆಜಿ ಗಾಂಜಾ ವಶ

Karthik’s advice helped me when i was struggling without rhythm: Virat Kohli

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

4-

UV Fusion: ಬದುಕು ಬಂಗಾರವಾಗಲಿ

Mysore; ಒಂದು ವರ್ಷದಿಂದ ಕಟ್ಟಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

Mysore; ಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.