ಪಾರಂಪಳ್ಳಿಯಲ್ಲಿ ಮಾರಿ ಓಡಿಸುವಂತಿಲ್ಲ


Team Udayavani, Apr 20, 2018, 7:35 AM IST

Maripooja-19-4.jpg

ಕುಂದಾಪುರ: ತುಳುನಾಡಿನಲ್ಲಿ ಗೋಂದೋಲು (ಗೋಂದಲ) ಪೂಜೆ ನಡೆಯುತ್ತದೆ. ಅದರಲ್ಲಿ ಮಾರಿ ಓಡಿಸುವ ಆಚರಣೆಯೂ ಇದೆ. ಆದರೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಗೋಂದೋಲು ಪೂಜೆ ವಿಶಿಷ್ಟವಾದದ್ದು.

ಗೋಂದೋಲು ಪೂಜೆ
ಮರಾಠಿ ನಾಯ್ಕ ಜನಾಂಗದ ಸಂಸ್ಕೃತಿ ಪರಂಪರೆಯ ಮುಖ್ಯ ಧಾರ್ಮಿಕ ವಿಧಿ. ಶಕ್ತಿ ಸ್ವರೂಪಿಣಿ ದೇವಿಗೆ ಗೀತ ನೃತ್ಯಗಳ ಪೂಜೆಯೇ ಗೋಂದೋಲು. ತುಳುನಾಡಿನಲ್ಲಿ ಇದನ್ನು ವರ್ಷಾನುಗಟ್ಟಲೆಯಿಂದ ಆಚರಿಸಲಾಗುತ್ತಿದೆ. ಕಾಲಭೈರವನ ಪೂಜೆಗಾಗಿಯೂ ಈ ಆರಾಧನಾ ವಿಧಾನವನ್ನು ಅನುಸರಿಸಲಾಗುತ್ತದೆ. ಮಲೆನಾಡು ಮತ್ತು ಮಹಾರಾಷ್ಟ್ರ ಭಾಗದಲ್ಲಿ ಈ ಆಚರಣೆಯನ್ನು ಧಾರ್ಮಿಕ ಕೇಂದ್ರಗಳಲ್ಲಿ ನಡೆಸುವುದು ವಾಡಿಕೆ. ಆದರೆ ತುಳುನಾಡಿನಲ್ಲಿ ಮನೆಗಳಲ್ಲೇ ಶುಭ ಕಾರ್ಯದ ಹರಕೆ ರೂಪದಲ್ಲಿ ನಡೆಸುತ್ತಾರೆ. ಪೂಜಾ ವಿಧಾನಗಳನ್ನು ನಡೆಸಲು ಮರಾಠಿ ಜನಾಂಗದವರೇ ಆಗಬೇಕೆಂಬ ನಂಬಿಕೆ ಇದೆ.

ಹೀಗಿದೆ ಆಚರಣೆ
ಗುಂಪುಗೂಡಿದ ಭಕ್ತರು ಗೀತ ನೃತ್ಯಗಳ ಮೂಲಕ ಪಂಚ ದೀವಟಿಗೆ ಹಿಡಿದು ಭಜನೆಗಳನ್ನು ಜಪಿಸಿಕೊಂಡು ದೇವಿಯ ಸ್ಮರಣೆ ಮಾಡುತ್ತಾರೆ. ದೇವಿ ಪಾತ್ರಿಗೆ ದೇವಿಯ ಆವಾಹನೆಯಾಗಿ ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಪೂಜೆ ಕೊನೆಗೊಳುತ್ತದೆ. ಹರಕೆಯ ರೂಪದಲ್ಲಿ ಕುರಿ, ಕೋಳಿ ಒಪ್ಪಿಸುತ್ತಾರೆ.

ಪಾರಂಪಳ್ಳಿಯ ಗೋಂದೋಲು
ಬ್ರಹ್ಮಾವರದ ಪೇತ್ರಿವರೆಗೆ ತುಳುನಾಡಿನ ಗೋಂದೋಲು ನಡೆಯುತ್ತಿದೆ. ಆದರೆ ಅನಂತರ ಕುಂದಾಪುರ, ಬೈಂದೂರುವರೆಗೂ ಗೋಂದೋಲು ಪೂಜೆ ಇಲ್ಲ ಪಾರಂಪಳ್ಳಿಯಲ್ಲಿ ಮಾತ್ರ ನೂರಾರು ವರ್ಷಗಳಿಂದ ಹರಕೆ ರೂಪದಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಗುಂಡು ಪೂಜಾರಿ ಮೇಸ್ತ್ರಿ. ಈ ಭಾಗದಲ್ಲಿ ಹೆಚ್ಚಾಗಿರುವ ದೇವಾಡಿಗ, ಮೊಗವೀರ, ಪೂಜಾರಿ ಹಾಗೂ ಇತರ ಸಮುದಾಯದವರು ಜತೆಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಗ್ರಾಮದ ಸುಮಾರು 600 ಮನೆಯವರು ಸಭೆ ಸೇರಿ ಮಾರ್ಚ್‌-ಎಪ್ರಿಲ್‌ನ ಮಂಗಳವಾರ/ ಶುಕ್ರವಾರದ ದಿನ ಪೂಜೆ ನಡೆಸುತ್ತೇವೆ ಎನ್ನುತ್ತಾರೆ ಅಧ್ಯಾಪಕ ಕೃಷ್ಣಪ್ಪ ಪೂಜಾರಿ. 

ನೀಲಾವರದವರು
ಈ ಪ್ರಾಂತ್ಯದಲ್ಲಿ ಗೋಂದೋಲು ಪೂಜೆ ನಡೆಸುವುದು ನೀಲಾವರದ ತಂಡದವರು ಮಾತ್ರ. ಊರವರು ಪೂಜೆ ನಡೆಸಿಕೊಡಬೇಕೆಂದು ನೀಲಾವರ ಮಟಪಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ತಂಡದ ಬಳಿ ವೀಳ್ಯ ಕೊಡುತ್ತಾರೆ. ಅಂತೆಯೇ ತಂಡದ ಎಂಟತ್ತು ಮಂದಿ ಬಂದು ಪೂಜೆ ನಡೆಸುತ್ತಾರೆ. ಕೊನೆಗೆ ದರ್ಶನ ಪಾತ್ರಿಯಿಂದ ದರ್ಶನ, ಭಕ್ತರ ಪ್ರಶ್ನೆಗಳಿಗೆ ಪರಿಹಾರ ದೊರೆಯುತ್ತದೆ. ದೊಂದಿ ಸೇವೆ, ಕುರಿ, ಕೋಳಿ ನೈವೇದ್ಯ ಮೂಲಕ ಪೂಜೆ ಮುಕ್ತಾಯವಾಗುತ್ತದೆ.

ಪಾರಂಪಳ್ಳಿಯಲ್ಲಿ ಯಾಕೆ ವಿಶೇಷ?
ಈ ಪ್ರಾಂತ್ಯದಲ್ಲಿ ಮಾರಿ ಓಡಿಸುವ ಆಚರಣೆ ಇಲ್ಲ. ಇದಕ್ಕೆ ಕಾರಣ ಸಾಲಿಗ್ರಾಮದಲ್ಲಿ ಶ್ರೀ ಗುರುನರಸಿಂಹ ಹಾಗೂ ಶ್ರೀ ಆಂಜನೇಯ ದೇವಾಲಯ ಮುಖಾಮುಖೀಯಾಗಿದೆ. ಆಂಜನೇಯ ಹಾಗೂ ಗುರುನರಸಿಂಹ ದೇವಾಲಯಗಳ ಮಧ್ಯೆ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಮಾರಿ ಓಡಿಸುವಂತಿಲ್ಲ. ಆದ್ದರಿಂದ ಇಲ್ಲಿ ಗೋಂದೋಲು ಆಚರಣೆ ಮಾತ್ರ ಇದೆ. 

ನೂರಾರು ವರ್ಷಗಳಿಂದ ಇದೆ
ಪಾರಂಪಳ್ಳಿಯ ಚಿತ್ರಪಾಡಿಯಿಂದ ಕಾರ್ಕಡವರೆಗೆ ಮಾರಿ ಓಡಿಸಬಾರದು ಎಂಬ ನಿಯಮ ಇರುವ ಕಾರಣ ಎರಡು ವರ್ಷಕ್ಕೊಮ್ಮೆ ಆಚರಿಸುವ ಈ ಗೋಂದೋಲು ಪೂಜೆ ಭಕ್ತಿ ಭಾವದ ಆಚರಣೆಯಾಗಿದೆ. ಆರೋಗ್ಯ, ಮಳೆ, ಬೆಳೆ, ಸಮೃದ್ಧಿ, ನೆಮ್ಮದಿಗಾಗಿ ನಾವು ಸಾಮೂಹಿಕವಾಗಿ ಇಲ್ಲಿ ಪ್ರಾರ್ಥಿಸುತ್ತೇವೆ.
– ಶೇಖರ್‌ ಪೂಜಾರಿ, ಗಿಳಿಯಾರು ಶಾಲಾ ಶಿಕ್ಷಕರು

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura ಮೂರು ಕಡಲಾಮೆ ರಕ್ಷಣೆ

Kundapura ಮೂರು ಕಡಲಾಮೆ ರಕ್ಷಣೆ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.