![Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/06/snake-1-415x234.jpg)
Udupi Gang war; ಬೀಟ್ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?
ಇನ್ನಾದರೂ ಪೊಲೀಸ್ ಗಸ್ತು ಹೆಚ್ಚಲಿ
Team Udayavani, May 26, 2024, 8:00 AM IST
![Udupi Gang war; Did the failure of the beat system lead to the incident?](https://www.udayavani.com/wp-content/uploads/2024/05/police-14-620x342.jpg)
ಉಡುಪಿ: ಜಿಲ್ಲೆಯ ನಗರ, ಗ್ರಾಮಾಂತರ ಭಾಗದಲ್ಲಿ ಪೊಲೀಸ್ ವಾಹನಗಳ ಗಸ್ತು ತಿರುಗುವುದು ಇತ್ತೀಚೆಗೆ ಕಡಿಮೆ. ಇದರಿಂದ ರಾತ್ರಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಗ್ಯಾಂಗ್ವಾರ್ ಇನ್ನಷ್ಟು ಭಯ ಹುಟ್ಟಿಸಿದೆ.
ಹಿಂದೆ ಪೊಲೀಸ್ ಬೀಟ್ ಅಚ್ಚುಕಟ್ಟಾಗಿ ನಡೆಯುತ್ತಿತ್ತು.ನಗರ, ಗ್ರಾಮೀಣ ಭಾಗದ ಕೆಲವು ಪ್ರದೇಶಗಳನ್ನು ಪೊಲೀಸರಲ್ಲಿ ಗುಂಪುಗಳನ್ನು ಮಾಡಿ ಪಾಳಿವಾರು ಹಂಚಿಕೆ ಮಾಡಲಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ತಮ್ಮ ವ್ಯಾಪ್ತಿಯಲ್ಲಿ ಗಸ್ತು ಹೋದ ಸಂದರ್ಭದಲ್ಲಿ ಆಯಾ ಪ್ರದೇಶದ ಹೊಟೇಲ್, ಅಂಗಡಿ ಅತ್ಯಾದಿ ನಿರ್ದಿಷ್ಟ ತಾಣಗಳಲ್ಲಿ ಪುಸ್ತಕಕ್ಕೆ ಸಹಿಹಾಕಿ ಬರುವ ವ್ಯವಸ್ಥೆ ಇತ್ತು. ಇದರಿಂದ ಪೊಲೀಸರೂ ತಪ್ಪದೇ ಗಸ್ತು ಹೋಗುತ್ತಿದ್ದರು. ಸ್ಥಳೀಯವಾಗಿ ಯೂ ಒಂದಿಷ್ಟು ಅಲರ್ಟ್ ಆಗು ತ್ತಿತ್ತು. ಆದರೆ ಈಗ ಆ ವ್ಯವಸ್ಥೆ ಕಡಿಮೆಯಾಗಿದೆ. ಆದ್ದರಿಂದ ಇಂಥಹ ಘಟನೆ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಈಗ ಬೀಟ್ಗೆ ಹೋಗುವ ಪೊಲೀಸರು ಆ್ಯಪ್ ಮೂಲಕ ಅಪ್ಡೇಟ್ ಮಾಡಬೇಕು. ಅನೇಕ ಕಡೆ ವಾಹನದೊಳಗೆ ಕುಳಿತು ಅಥವಾ ಕೆಲವರು ಸ್ಥಳಕ್ಕೆ ಭೇಟಿ ನೀಡದೆಯೂ ಅಪ್ಡೇಟ್ ಮಾಡುತ್ತಾರೆ ಎನ್ನುವ ಆರೋಪವೂ ಇದೆ. ಗಸ್ತು ವಾಹನ ಸುತ್ತಾಟವೂ ಬಹಳ ಕಡಿಮೆಯಾಗಿದೆ. ಸಿಸಿಟಿವಿ ಅಳವಡಿಕೆ ಕೆಲವಡೆ ಇದ್ದರೂ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಹಿಂದೆಲ್ಲ ಪೊಲೀಸ್ ಇಲಾಖೆಗೆ ಸ್ಥಳೀಯವಾಗಿ ಒಂದಿಷ್ಟು ಮಾಹಿತಿ ದಾರರು ಇರುತ್ತಿದ್ದರು. ಈಗ ಈ ವ್ಯವಸ್ಥೆ ಸಂಪೂರ್ಣ ಇಲ್ಲದಾಗಿದೆ. ಹೀಗಾಗಿ ಏನೇ ಘಟನೆ ನಡೆದರೂ ಸ್ಥಳೀಯರು ಮಾಹಿತಿ ನೀಡಿದ ಅನಂತರವೇ ಪೊಲೀಸರು ಬರುತ್ತಾರೆ. ಇಂತಹದ್ದೇ ಘಟನೆ ಸಂಭವಿಸಬಹುದು. ಜತೆಗೆ ಎಂಬ ಮಾಹಿತಿ ನೀಡುವವರ ತಂಡ, ವ್ಯವಸ್ಥೆ ಮೊದಲಿನಷ್ಟು ಬಲಿಷ್ಠವಾಗಿಲ್ಲ.
ವಾಹನ ಮಾತ್ರ ನಿಂತಿರುತ್ತದೆ
ನಗರದ ಅನೇಕ ಕಡೆಗಳಲ್ಲಿ ರಾತ್ರಿ 7ರಿಂದ 10 ಗಂಟೆಯ ಒಳಗೆ ಪೊಲೀಸ್ ಗಸ್ತು ಪೂರ್ಣಗೊಳ್ಳುತ್ತದೆ. ತಡರಾತ್ರಿಯಲ್ಲಿ ಗಸ್ತು ಪರಿ ಣಾಮಕಾರಿಯಾಗಿ ಇರದು. ಅಲ್ಲಲ್ಲಿ ಪೊಲೀಸ್ ವಾಹನ ಮಾತ್ರ ನಿಂತಿರುತ್ತದೆ. ವಾಹನದ ಒಳಗೆ ಪೊಲೀಸರು ಇದ್ದರೂ ಕೆಳಗೆ ಇಳಿಯರು. ಅಷ್ಟು ಮಾತ್ರವಲ್ಲದೆ, ವಾಹನದ ಸಮೀಪದಲ್ಲೆ ಕೆಲವು ಅಕ್ರಮ ಕೂಟ ನಡೆಯುತ್ತಿದ್ದರೂ ತಡೆಯು ವುದಿಲ್ಲ ಎಂಬ ಆರೋಪವೂ ಇದೆ.
ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲೇ ಹಲವು ಅಕ್ರಮ ಚಟುವಟಿ ಕೆಗಳು ನಡೆಯುತ್ತಿರುತ್ತವೆ. ಗಾಂಜಾ ಸೇರಿ ಮಾದಕ ವಸ್ತುಗಳ ಸೇವನೆ, ರ್ಯಾಶ್ ರೈಡಿಂಗ್, ವೀಲ್ಹಿಂಗ್ ಇತ್ಯಾದಿ ಸಾಮಾನ್ಯ. ಉಡುಪಿ-ಮಣಿಪಾಲ-ಪರ್ಕಳ ರಸ್ತೆಯಲ್ಲೂ ಈ ರೀತಿಯ ಕೃತ್ಯಗಳು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ರಸ್ತೆ ಮಧ್ಯದಲ್ಲೇ ಮಾದಕ ವ್ಯಸನಿಗಳು ಗುಂಪು ಕಟ್ಟಿಕೊಂಡಿರುತ್ತಾರೆ. ಸವಾರ ರಿಗೂ ಕಿರಿಕಿರಿ. ಪೊಲೀಸ್ ವ್ಯವಸ್ಥೆ ಗಸ್ತು ಇನ್ನಷ್ಟು ಗಟ್ಟಿಯಾದರೆ ಇಂತಹ ಎಲ್ಲ ಚಟು ವಟಿಕೆಗಳಿಗೂ ಕಡಿವಾಣ ಹಾಕಬ ಹುದು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಜನಾಗ್ರಹ.
ಟಾಪ್ ನ್ಯೂಸ್
![Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/06/snake-1-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ](https://www.udayavani.com/wp-content/uploads/2024/06/banuprakash-150x84.jpg)
Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ
![ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ](https://www.udayavani.com/wp-content/uploads/2024/06/timmapura-150x84.jpg)
ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ
![b-c-patil](https://www.udayavani.com/wp-content/uploads/2024/06/b-c-patil-150x84.jpg)
Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ
![Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು](https://www.udayavani.com/wp-content/uploads/2024/06/upendra-1-150x83.jpg)
Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು
![Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ](https://www.udayavani.com/wp-content/uploads/2024/06/dandeli-3-150x95.jpg)
Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ
MUST WATCH
ಹೊಸ ಸೇರ್ಪಡೆ
![Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/06/snake-1-150x84.jpg)
Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು
![Kaup; ಮೂಳೂರಿನಲ್ಲಿ ಹೊಡೆದಾಟ: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು](https://www.udayavani.com/wp-content/uploads/2024/06/mulur-150x83.jpg)
Kaup; ಮೂಳೂರಿನಲ್ಲಿ ಹೊಡೆದಾಟ: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು
![UK: ಡಿಲೀಟ್ ಆದ ಮೇಸೆಜ್ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!](https://www.udayavani.com/wp-content/uploads/2024/06/England-150x85.jpg)
UK: ಡಿಲೀಟ್ ಆದ ಮೇಸೆಜ್ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!
![Dendoor Katte: 2 cows, 1 calf found illegally transported in separate cases](https://www.udayavani.com/wp-content/uploads/2024/06/dendur-150x83.jpg)
Dendoor Katte: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಹಸು, 1 ಕರು ಪತ್ತೆ
![Cyber Frauds: ಸೈಬರ್ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!](https://www.udayavani.com/wp-content/uploads/2024/06/Cyber-1-150x91.jpg)
Cyber Frauds: ಸೈಬರ್ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.