ಚಿತ್ರಗಳ ಮೂಲಕ ಪರಿಸರ ಕಾಳಜಿಯ ಪಾಠ


Team Udayavani, Aug 24, 2018, 1:45 AM IST

wall-art-23-8.jpg

ಕುಂದಾಪುರ: ಒಂದೆಡೆ ಪ್ರಕೃತಿಯ ಮೇಲಿನ ಮಾನವ ಹಸ್ತಕ್ಷೇಪದಿಂದ ಕುಸಿದು ಬೀಳುತ್ತಿರುವ ಪ್ರಕೃತಿ. ಅದನ್ನೇ ನಂಬಿದ್ದ ಮಾನವನ ಬದುಕು. ಇನ್ನೊಂದೆಡೆ ಅದೇ ಪ್ರಕೃತಿ ಉಳಿಸಿ ಅದು ನಮ್ಮನ್ನು ಉಳಿಸುತ್ತದೆ ಎಂದು ಸಂದೇಶ ಸಾರುವ ಪರಿಸರಪ್ರಿಯರು. ಇದೆಲ್ಲದರ ಮಧ್ಯೆ ಗಮನ ಸೆಳೆಯುತ್ತಿರುವುದು ವಂಡ್ಸೆಯ ಕಾಲೇಜಿಗೆ ಬಂದು ವಿದೇಶೀಯರು ಪ್ರಕೃತಿ ಉಳಿಸಿ ಎಂದು ಸಾರುತ್ತಿರುವ ಸಂದೇಶ.

ಮಾನವನ ಪರಿಸರ ಮಾರಕ ಚಟುವಟಿಕೆಗಳು ಸೃಷ್ಟಿಸುವ ದುರಂತಗಳಿಗೆ ಕೇರಳ ಮತ್ತು ಕೊಡಗಿನ ಪ್ರವಾಹ ಮತ್ತು ಭೂ ಕುಸಿತಗಳು ನಮ್ಮೆದುರಿಗಿವೆ. ನಿಸರ್ಗದ ನಿಯಮಗಳನ್ನು ಮೀರಿ ಪ್ರಕೃತಿಯ ವಿರುದ್ಧ ಯುದ್ಧ ಹೂಡುವ ಪ್ರವೃತ್ತಿಯನ್ನು ಮಾನವ ರೂಢಿಸಿಕೊಂಡಿದ್ದಾನೆ. ‘ಪ್ರಕೃತಿಯ ನಾಶ, ನಮ್ಮ ನಾಶ’ ಎಂಬ ಸಾಮಾನ್ಯ ಪ್ರಜ್ಞೆ ನಮಗಿಲ್ಲವೆಂದಲ್ಲ. ದುರಾಸೆ, ಲಾಭ ಬಡುಕತನ, ಅತಿ ಬುದ್ಧಿವಂತಿಕೆ ಇವೆಲ್ಲ ನಮ್ಮನ್ನು ನಮ್ಮೆದೆಯ ಒಳದನಿಗೆ ನಮ್ಮನ್ನು ಕಿವುಡಾಗಿಸಿವೆ. ಈಗಿನದು ಮಾನವ ಬುದ್ಧಿವಂತಿಕೆಯನ್ನು ಪ್ರಕೃತಿ ಅಣಕಿಸುತ್ತಿದೆಯೇನೋ ಎಂದು ಮನಸ್ಸು ಕಳವಳಗೊಂಡಿರುವ ಸಂದರ್ಭ. ಪ್ರಕೃತಿಯೆಡೆಗಿನ ಕಾಳಜಿಯ ಸೂಕ್ಷ್ಮ ಭಾವನೆಗಳಿಗೆ ನಮ್ಮ ಮನಸ್ಸು, ಹೃದಯ ತೆರೆದಿಟ್ಟುಕೊಳ್ಳುವ ಸಂದರ್ಭ.


ಈ ಭಾವನೆಗಳನ್ನೆಲ್ಲ ಸಾಂಕೇತಿಕವಾಗಿ ಚಿತ್ರಗಳ ಮೂಲಕ ಬಿಂಬಿಸುವ ಯತ್ನ ವಿದೇಶಿ ವಿದ್ಯಾರ್ಥಿಗಳು ಮಾಡಿದ್ದಾರೆ. ಸರಕಾರಿ  ಪ.ಪೂ. ಕಾಲೇಜು ವಂಡ್ಸೆಯಲ್ಲಿ ತರಗತಿ ಕೋಣೆಯ ಗೋಡೆಗಳನ್ನೇ ಕ್ಯಾನ್ವಾಸನ್ನಾಗಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಪಾಠ ಹೇಳಲು ಎಫ್‌.ಎಸ್‌.ಎಲ್‌. ಇಂಡಿಯಾದ ಕುಂದಾಪುರ ಶಾಖೆಯ ಸ್ವಯಂಸೇವಕರು ಪ್ರಯತ್ನಿಸಿದ್ದಾರೆ.

ಭಾರತಕ್ಕೆ ಅಧ್ಯಯನ ಪ್ರವಾಸಕ್ಕೆಂದು ಬಂದಿರುವ ಇಟಲಿಯ ಕಿಯಾರಾ, ಜರ್ಮನಿಯ ಅನ್ನಾ ಮತ್ತು ಫ್ಲೋರಿಯಾನಾ ತಮ್ಮ ಸಮಾಜ ಸೇವಾ ಕಾರ್ಯದ ಭಾಗವಾಗಿ ಇಲ್ಲಿ ಚಿತ್ರ ರಚನೆ ಮಾಡಿದ್ದಾರೆ. ಕೃಷಿ ಅಧ್ಯಯನ ವಿದ್ಯಾರ್ಥಿಗಳಾದ ಇವರು ಸಹಜವಾಗಿ ಪ್ರಕೃತಿ ಕಾಳಜಿಯುಳ್ಳವರು. ನಿರಂತರ ಮೂರು ದಿನಗಳ ಕಾಲ ಕಾಲೇಜಿನ ಗೋಡೆಗಳಲ್ಲಿ ಚಿತ್ರ ರಚಿಸಿರುವ ಈ ಮೂವರು ‘ಪ್ಲಾಸ್ಟಿಕ್‌ ತ್ಯಾಜ್ಯ ತೊಲಗಿಸಿ’ ಎಂಬ ಸಂದೇಶವಿರುವ ಸುಮಾರು ಎಂಟೂವರೆ ಅಡಿ ಎತ್ತರದ ಇನ್ನೊಂದು ಚಿತ್ರವನ್ನೂ ರಚಿಸಿದ್ದಾರೆ. ಮರ ಮತ್ತು ಮನುಷ್ಯನನ್ನು ಸಮ್ಮಿಳಿತಗೊಳಿಸಿದ ಹೃದ್ಯಚಿತ್ರಣವೊಂದನ್ನು ಬಿಡಿಸಿದ್ದಾರೆ. ಮರದ ಬುಡವೇ ಮನುಷ್ಯನಂತೆ. ಮನುಷ್ಯನ ಹೃದಯ ಮರದ ಆತ್ಮದಂತೆ ಬರೆದಿದ್ದಾರೆ. ಅಲ್ಲೇ ಸಮುದ್ರ, ಸೂರ್ಯೋದಯ ಹೀಗೆ ಅನೇಕ ಸಂದೇಶಗಳನ್ನು ಸಾರುವ ಚಿತ್ರ ಇದಾಗಿದೆ.

ಪ್ರಕೃತಿ ಕಾಳಜಿ ಚಿತ್ರಗಳಿಗಿದೆ
‘ಪ್ರತಿಯೊಬ್ಬರೂ ಪ್ರಕೃತಿಯ ಬಗ್ಗೆ ಕಾಳಜಿ, ಸೂಕ್ಷ್ಮತೆ ಹಾಗೂ ಬದ್ಧತೆ ಹೊಂದಿರಬೇಕು. ಪ್ರಕೃತಿಯೆಡೆಗೆ ತುಡಿಯುವ ಅರಿವಿನ ಗಿಡವೊಂದನ್ನು ತಮ್ಮ ಹೃದಯದಲ್ಲಿ ಸದಾ ಹಸಿರಾಗಿಡಬೇಕು. ಮುಖ್ಯವಾಗಿ ಯುವ ಮನಸ್ಸುಗಳಲ್ಲಿ ಪ್ರಕೃತಿ ಕಾಳಜಿಯನ್ನು, ಸೂಕ್ಷ್ಮ ಭಾವನೆಗಳನ್ನು ಎಚ್ಚರಿಸುವ ಆಶಯ ಈ ಚಿತ್ರಗಳಿಗಿದೆ’.
– ಕಿಯಾರಾ, ಇಟಲಿ

ಟಾಪ್ ನ್ಯೂಸ್

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura ಮೂರು ಕಡಲಾಮೆ ರಕ್ಷಣೆ

Kundapura ಮೂರು ಕಡಲಾಮೆ ರಕ್ಷಣೆ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.