ಚಿತ್ರಗಳ ಮೂಲಕ ಪರಿಸರ ಕಾಳಜಿಯ ಪಾಠ


Team Udayavani, Aug 24, 2018, 1:45 AM IST

wall-art-23-8.jpg

ಕುಂದಾಪುರ: ಒಂದೆಡೆ ಪ್ರಕೃತಿಯ ಮೇಲಿನ ಮಾನವ ಹಸ್ತಕ್ಷೇಪದಿಂದ ಕುಸಿದು ಬೀಳುತ್ತಿರುವ ಪ್ರಕೃತಿ. ಅದನ್ನೇ ನಂಬಿದ್ದ ಮಾನವನ ಬದುಕು. ಇನ್ನೊಂದೆಡೆ ಅದೇ ಪ್ರಕೃತಿ ಉಳಿಸಿ ಅದು ನಮ್ಮನ್ನು ಉಳಿಸುತ್ತದೆ ಎಂದು ಸಂದೇಶ ಸಾರುವ ಪರಿಸರಪ್ರಿಯರು. ಇದೆಲ್ಲದರ ಮಧ್ಯೆ ಗಮನ ಸೆಳೆಯುತ್ತಿರುವುದು ವಂಡ್ಸೆಯ ಕಾಲೇಜಿಗೆ ಬಂದು ವಿದೇಶೀಯರು ಪ್ರಕೃತಿ ಉಳಿಸಿ ಎಂದು ಸಾರುತ್ತಿರುವ ಸಂದೇಶ.

ಮಾನವನ ಪರಿಸರ ಮಾರಕ ಚಟುವಟಿಕೆಗಳು ಸೃಷ್ಟಿಸುವ ದುರಂತಗಳಿಗೆ ಕೇರಳ ಮತ್ತು ಕೊಡಗಿನ ಪ್ರವಾಹ ಮತ್ತು ಭೂ ಕುಸಿತಗಳು ನಮ್ಮೆದುರಿಗಿವೆ. ನಿಸರ್ಗದ ನಿಯಮಗಳನ್ನು ಮೀರಿ ಪ್ರಕೃತಿಯ ವಿರುದ್ಧ ಯುದ್ಧ ಹೂಡುವ ಪ್ರವೃತ್ತಿಯನ್ನು ಮಾನವ ರೂಢಿಸಿಕೊಂಡಿದ್ದಾನೆ. ‘ಪ್ರಕೃತಿಯ ನಾಶ, ನಮ್ಮ ನಾಶ’ ಎಂಬ ಸಾಮಾನ್ಯ ಪ್ರಜ್ಞೆ ನಮಗಿಲ್ಲವೆಂದಲ್ಲ. ದುರಾಸೆ, ಲಾಭ ಬಡುಕತನ, ಅತಿ ಬುದ್ಧಿವಂತಿಕೆ ಇವೆಲ್ಲ ನಮ್ಮನ್ನು ನಮ್ಮೆದೆಯ ಒಳದನಿಗೆ ನಮ್ಮನ್ನು ಕಿವುಡಾಗಿಸಿವೆ. ಈಗಿನದು ಮಾನವ ಬುದ್ಧಿವಂತಿಕೆಯನ್ನು ಪ್ರಕೃತಿ ಅಣಕಿಸುತ್ತಿದೆಯೇನೋ ಎಂದು ಮನಸ್ಸು ಕಳವಳಗೊಂಡಿರುವ ಸಂದರ್ಭ. ಪ್ರಕೃತಿಯೆಡೆಗಿನ ಕಾಳಜಿಯ ಸೂಕ್ಷ್ಮ ಭಾವನೆಗಳಿಗೆ ನಮ್ಮ ಮನಸ್ಸು, ಹೃದಯ ತೆರೆದಿಟ್ಟುಕೊಳ್ಳುವ ಸಂದರ್ಭ.


ಈ ಭಾವನೆಗಳನ್ನೆಲ್ಲ ಸಾಂಕೇತಿಕವಾಗಿ ಚಿತ್ರಗಳ ಮೂಲಕ ಬಿಂಬಿಸುವ ಯತ್ನ ವಿದೇಶಿ ವಿದ್ಯಾರ್ಥಿಗಳು ಮಾಡಿದ್ದಾರೆ. ಸರಕಾರಿ  ಪ.ಪೂ. ಕಾಲೇಜು ವಂಡ್ಸೆಯಲ್ಲಿ ತರಗತಿ ಕೋಣೆಯ ಗೋಡೆಗಳನ್ನೇ ಕ್ಯಾನ್ವಾಸನ್ನಾಗಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಪಾಠ ಹೇಳಲು ಎಫ್‌.ಎಸ್‌.ಎಲ್‌. ಇಂಡಿಯಾದ ಕುಂದಾಪುರ ಶಾಖೆಯ ಸ್ವಯಂಸೇವಕರು ಪ್ರಯತ್ನಿಸಿದ್ದಾರೆ.

ಭಾರತಕ್ಕೆ ಅಧ್ಯಯನ ಪ್ರವಾಸಕ್ಕೆಂದು ಬಂದಿರುವ ಇಟಲಿಯ ಕಿಯಾರಾ, ಜರ್ಮನಿಯ ಅನ್ನಾ ಮತ್ತು ಫ್ಲೋರಿಯಾನಾ ತಮ್ಮ ಸಮಾಜ ಸೇವಾ ಕಾರ್ಯದ ಭಾಗವಾಗಿ ಇಲ್ಲಿ ಚಿತ್ರ ರಚನೆ ಮಾಡಿದ್ದಾರೆ. ಕೃಷಿ ಅಧ್ಯಯನ ವಿದ್ಯಾರ್ಥಿಗಳಾದ ಇವರು ಸಹಜವಾಗಿ ಪ್ರಕೃತಿ ಕಾಳಜಿಯುಳ್ಳವರು. ನಿರಂತರ ಮೂರು ದಿನಗಳ ಕಾಲ ಕಾಲೇಜಿನ ಗೋಡೆಗಳಲ್ಲಿ ಚಿತ್ರ ರಚಿಸಿರುವ ಈ ಮೂವರು ‘ಪ್ಲಾಸ್ಟಿಕ್‌ ತ್ಯಾಜ್ಯ ತೊಲಗಿಸಿ’ ಎಂಬ ಸಂದೇಶವಿರುವ ಸುಮಾರು ಎಂಟೂವರೆ ಅಡಿ ಎತ್ತರದ ಇನ್ನೊಂದು ಚಿತ್ರವನ್ನೂ ರಚಿಸಿದ್ದಾರೆ. ಮರ ಮತ್ತು ಮನುಷ್ಯನನ್ನು ಸಮ್ಮಿಳಿತಗೊಳಿಸಿದ ಹೃದ್ಯಚಿತ್ರಣವೊಂದನ್ನು ಬಿಡಿಸಿದ್ದಾರೆ. ಮರದ ಬುಡವೇ ಮನುಷ್ಯನಂತೆ. ಮನುಷ್ಯನ ಹೃದಯ ಮರದ ಆತ್ಮದಂತೆ ಬರೆದಿದ್ದಾರೆ. ಅಲ್ಲೇ ಸಮುದ್ರ, ಸೂರ್ಯೋದಯ ಹೀಗೆ ಅನೇಕ ಸಂದೇಶಗಳನ್ನು ಸಾರುವ ಚಿತ್ರ ಇದಾಗಿದೆ.

ಪ್ರಕೃತಿ ಕಾಳಜಿ ಚಿತ್ರಗಳಿಗಿದೆ
‘ಪ್ರತಿಯೊಬ್ಬರೂ ಪ್ರಕೃತಿಯ ಬಗ್ಗೆ ಕಾಳಜಿ, ಸೂಕ್ಷ್ಮತೆ ಹಾಗೂ ಬದ್ಧತೆ ಹೊಂದಿರಬೇಕು. ಪ್ರಕೃತಿಯೆಡೆಗೆ ತುಡಿಯುವ ಅರಿವಿನ ಗಿಡವೊಂದನ್ನು ತಮ್ಮ ಹೃದಯದಲ್ಲಿ ಸದಾ ಹಸಿರಾಗಿಡಬೇಕು. ಮುಖ್ಯವಾಗಿ ಯುವ ಮನಸ್ಸುಗಳಲ್ಲಿ ಪ್ರಕೃತಿ ಕಾಳಜಿಯನ್ನು, ಸೂಕ್ಷ್ಮ ಭಾವನೆಗಳನ್ನು ಎಚ್ಚರಿಸುವ ಆಶಯ ಈ ಚಿತ್ರಗಳಿಗಿದೆ’.
– ಕಿಯಾರಾ, ಇಟಲಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.