ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ


Team Udayavani, Apr 30, 2024, 6:23 PM IST

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

■ ಉದಯವಾಣಿ ಸಮಾಚಾರ
ಭಟ್ಕಳ: ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಿದ್ದು ತಾಲೂಕಿನ ಹಲವೆಡೆ ಜೀವ ಜಲ ಪಾತಾಳಕ್ಕಿಳಿಯುತ್ತಿದ್ದು ಕೆಲವೇ ದಿನಗಳಲ್ಲಿ ನೀರಿಗೆ ಬರ ಬಂದರೂ ಆಶ್ಚರ್ಯವಿಲ್ಲ ಎನ್ನುವಂತಾಗಿದೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಲೇ ಇದ್ದು ಕಳೆದ ಸುಮಾರು ಒಂದು ವಾರದಿಂದ 28 ಡಿಗ್ರಿಯಿಂದ 36-38 ಡಿಗ್ರಿಯ ತನಕ ತಾಪಮಾನ ದಾಖಲಾಗುತ್ತಿದೆ. ಕೆಲ ದಿನಗಳ ಹಿಂದೆ ಎರಡು ಮಳೆ ಬಂದಾಗ ಮಾತ್ರ ಕೊಂಚ ತಾಪಮಾನ ಕಡಿಮೆಯಾಗಿದ್ದು ಬಿಟ್ಟರೆ ಮತ್ತೆ ಬಿಸಿಲ ಪ್ರಖರತೆ ಹೆಚ್ಚುತ್ತಲೇ ಇದ್ದು ಸೆಖೆ ತಡೆಯಲಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಭಟ್ಕಳ ತಾಲೂಕಿನಾದ್ಯಂತ ಬಿರು ಬೇಸಿಗೆ ಹಾಗೂ ನೀರಿನ ಕೊರತೆ ಜನರನ್ನು ಹೈರಾಣಾಗಿಸಿದೆ. ಇನ್ನು ಕೆಲ ದಿನಗಳ ಕಾಲ ಮಳೆ ಬಾರದಿದ್ದರೆ ಹನಿ ನೀರಿಗೂ ಕಷ್ಟಪಡುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಹಿಂದೆ ನದಿ, ಹೊಳೆ-ಹಳ್ಳಗಳಿಗೆ ಕಟ್ಟು (ಒಡ್ಡು) ಹಾಕಿ ಕೃಷಿ ಚಟುವಟಿಕೆಗೆ ನೀರು ನಿಲ್ಲಿಸುವುದರಿಂದ ಅಕ್ಕಪಕ್ಕದ ಕಿ.ಮೀ. ಗಟ್ಟಲೆ ಪ್ರದೇಶದಲ್ಲಿ ತಂಪು ಗಾಳಿಯಾದರೂ ಬೀಸುತ್ತಿತ್ತು. ಬಾವಿ, ಕೆರೆಗಳಲ್ಲಿ ನೀರಿನ ಸೆಲೆ ಉಳಿದುಕೊಂಡು ಕುಡಿಯುವ ನೀರಿಗೆ ಬರ ಎನ್ನುವುದು ಇರಲಿಲ್ಲ. ಆದರೆ ಇಂದು ಕೃಷಿಯೇ ನಾಸ್ತಿಯಾಗಿದೆ. ಮಳೆಗಾಲದಲ್ಲೂ ಕೂಡಾ ಕೆಲವೊಂದು ಗದ್ದೆಗಳನ್ನು ಪಾಳು ಬಿಡುತ್ತಿರುವ ಇಂದಿನ ಕಾಲದಲ್ಲಿ ಬೇಸಿಗೆ ಕೃಷಿಯಂತು ದೂರದ ಮಾತಾಗಿದೆ.

ಬತ್ತಿದ ನದಿ-ಬಾವಿ: ತಾಲೂಕಿನಲ್ಲಿ ನೂರಾರು ನದಿ, ಹಳ್ಳ-ಕೊಳ್ಳಗಳಿದ್ದು ಇವುಗಳಲ್ಲಿ ಅರ್ಧದಷ್ಟು ನವೆಂಬರ್‌-ಡಿಸೆಂಬರ್‌ ಕೊನೆ ವಾರವೇ ಒಣಗಿ ಹೋದರೆ ಮತ್ತೆ ಸುಮಾರು ಶೇ.25 ರಷ್ಟು ಮಾರ್ಚ್‌ ವೇಳೆಗೆ ಬತ್ತಿ ಬರಡಾಗಿವೆ. ಇನ್ನು ಕೆಲವೇ ಕೆಲವು ನದಿ, ಹಳ್ಳ-ತೊರೆಗಳು ಏಪ್ರಿಲ್‌, ಮೇ ತನಕ ಇರುತ್ತಿದ್ದು, ಅವು ಜೀವ ಸೆಲೆಗಳಾಗಿ ಇಲ್ಲಿನ ಬಾವಿ, ಕೆರೆಗಳಿಗೆ ನೀರುಣಿಸುವ ಜಲಮೂಲವಾಗಿವೆ. ಆದರೆ ಕಳೆದ ಎರಡು ದಶಕಗಳಿಂದ ಇವು ಕೂಡಾ ಬತ್ತಿ ಹೋಗುತ್ತಿದ್ದು ನೀರನ್ನು ಕಟ್ಟುಕಟ್ಟಿ ಹಿಡಿದಿರುವ ಸಂಪ್ರದಾಯವೂ ಮಾಯವಾಗಿದ್ದರಿಂದ ನೀರಿನ ಸೆಲೆಯೇ ಇಲ್ಲದಂತಾಗಿದೆ.

ಟ್ಯಾಂಕರ್‌ ನೀರೇ ಗತಿ: ಏಪ್ರಿಲ್‌ ತಿಂಗಳಿನಲ್ಲಿಯೇ ತಾಲೂಕಿನಲ್ಲಿ ಕುಡಿಯುವ ನೀರಿನ ಬರ ಉಂಟಾಗಿದ್ದು. ತಾಲೂಕಿನಲ್ಲಿ ವರ್ಷ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆ ಹೆಚ್ಚುತ್ತಿದೆ. ಆದರೆ ಬೇಸಿಗೆ ಮಧ್ಯದಲ್ಲಿ ಒಂದೆರಡು ಉತ್ತಮ ಮಳೆ ಸುರಿದು ದಾಹ ತೀರಿಸುವಲ್ಲಿ ಸಫಲವಾಗುತ್ತಿತ್ತು. ಈ ಬಾರಿಯ ಮಳೆ ಕೇವಲ ಒಂದೆರಡು ತಾಸು ಬಂದು ಹೋಗಿದ್ದು, ಇರುವ ನೀರನ್ನು ಒಣಗಸಿದೆ ಎನ್ನುವುದು ಹಿರಿಯರ ಮಾತು. ಕೆಲವು ಪ್ರದೇಶದಲ್ಲಿ ಬಾವಿಗಳು ಸಂಪೂರ್ಣ ಬತ್ತಿ ಹೋಗಿ ಆ ಭಾಗದ ಜನ ಪಂಚಾಯತ್‌ ನೀಡುವ ಟ್ಯಾಂಕರ್‌ ನೀರು ಅಥವಾ ಹತ್ತಿರದಲ್ಲಿನ ಇರುವ ಯಾವುದಾದರೂ ಒಂದು ಬಾವಿಯನ್ನು ಆಶ್ರಯಿಸುವ ಸ್ಥಿತಿ ಎದುರಾಗಿದೆ.

ಹೆಚ್ಚಿದ ಆತಂಕ: ಆದರೆ ಈ ಬಾರಿ ಈಗಾಗಲೇ ಬಾವಿಗಳು ಒಣಗಿದ್ದರಿಂದ ಜನ ಹಾಗೂ ತಾಲೂಕಾಡಳಿತವನ್ನು ಆತಂಕಕ್ಕೆ ಈಡು ಮಾಡಿದೆ. ಎಲ್ಲರ ಬಾವಿಗಳೂ ಬತ್ತಿ ಹೋಗುತ್ತಾ ಬಂದಿದ್ದು ಜನರಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಇಲ್ಲಿನ ಕಡವಿನ ಕಟ್ಟೆ ಡ್ಯಾಂ ಕೂಡಾ ಇನ್ನೇನು ಕೆಲವೇ ದಿನಗಳಲ್ಲಿ ಬತ್ತಿ ಹೋಗುವ ಸಾಧ್ಯತೆ ಇದ್ದು ನಗರಕ್ಕೆ, ಶಿರಾಲಿ, ಜಾಲಿ ಹಾಗೂ ಮಾವಿನಕುರ್ವೆ ನೀರು ಸರಬರಾಜು ವ್ಯತ್ಯಯವಾಗಲಿದೆ. ಇನ್ನಾದರೂ ಉತ್ತಮ ಮಳೆ ಬಂದು ಬಾವಿ, ಹಳ್ಳ, ನದಿ-ತೊರೆಗಳಲ್ಲಿ ನೀರು ತುಂಬಿಕೊಂಡರೆ ಮಾತ್ರ ಕುಡಿಯುವ ನೀರು ದೊರೆಯಬಹದು. ಇಲ್ಲವಾದಲ್ಲಿ ನೀರಿನ ಬವಣೆ ತಪ್ಪಿದ್ದಲ್ಲ.

ಟಾಪ್ ನ್ಯೂಸ್

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-qwew-eqw-wq

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

Ankola: ಅಪ್ರಾಪ್ತ ಬಾಲಕಿಯ ಮೇಲೆ ವಯೋವೃದ್ಧನಿಂದ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು

Ankola: ಅಪ್ರಾಪ್ತ ಬಾಲಕಿಯ ಮೇಲೆ ವಯೋವೃದ್ಧನಿಂದ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು

5-sirsi

Sirsi: ಕರ್ನಾಟಕ ಜಾನಪದ ಪರಿಷತ್‌ನ ನೂತನ ಜಿಲ್ಲಾಧ್ಯಕ್ಷರಾಗಿ ಡಾ. ವೆಂಕಟೇಶ ನಾಯ್ಕ ಆಯ್ಕೆ

Uttara Kannada ಗೋಕರ್ಣದಲ್ಲಿ ಪೂಜೆಗೆ ತಡೆ: 11 ಜನರ ವಿರುದ್ಧ ದೂರು ದಾಖಲು

Uttara Kannada ಗೋಕರ್ಣದಲ್ಲಿ ಪೂಜೆಗೆ ತಡೆ: 11 ಜನರ ವಿರುದ್ಧ ದೂರು ದಾಖಲು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.