ಭಾಷೆಯ ಹೆಸರಲ್ಲಿ ಎಲ್ಲರೂ ಒಗ್ಗೂಡಬೇಕಿದೆ
Team Udayavani, Nov 2, 2018, 4:01 PM IST
ಕುಮಟಾ: ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಮಣಕಿ ಮೈದಾನದಲ್ಲಿ ನುಡಿಹಬ್ಬ ಕಾರ್ಯಕ್ರಮ ವೈವಿಧ್ಯಮಯವಾಗಿ ಮೂಡಿಬಂತು. ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಭಾಷೆಯ ಹೆಸರಿನ ನೆರಳಿನಲ್ಲಿ ಎಲ್ಲರೂ ಒಗ್ಗೂಡಬೇಕು. ಕನ್ನಡ ಮನಸ್ಸುಗಳು ಐಕ್ಯತೆಯನ್ನು ಸಾಧಿಸಿ ನಾಡು, ನುಡಿಯ ಅಭಿವೃದ್ಧಿಗೆ ಅಡಿಗಂಬವಾಗಬೇಕು ಎಂಬ ಉದ್ದೇಶದೊಂದಿಗೆ ನುಡಿಹಬ್ಬವನ್ನು ವೈವಿಧ್ಯಮಯವಾಗಿ ಕಳೆದ 8 ವರ್ಷಗಳಿಂದ ಆಯೋಜಿಸಿಕೊಂಡು ಬಂದಿದ್ದೇವೆ ಎಂದು ಸಮಿತಿ ಗೌರವಾಧ್ಯಕ್ಷ ಎಂ.ಜಿ. ಭಟ್ಟ ಹೇಳಿದರು.
ಕನ್ನಡ ನಾಡು ನುಡಿಗೆ ಸಂಬಂಧಪಟ್ಟಂತೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ ಅಭಿಮಾನದ ನುಡಿಗಳನ್ನಾಡಿದರು. ಸಂಘಟನೆಯ ಹರೀಶ ಶೇಟ್, ಕಸಾಪ ತಾಲೂಕಾಧ್ಯಕ್ಷ ಶ್ರೀಧರ ಗೌಡ, ಕರವೇಯ ಭಾಸ್ಕರ ಪಟಗಾರ ಮತ್ತಿತರರು ಮಾತನಾಡಿದರು. ಅಂಗವಿಕಲ ವೀಲ್ಚೇರ್ ರೇಸಿನಲ್ಲಿ ರಾಷ್ಟ್ರಕ್ಕೆ ತೃತೀಯ ಸ್ಥಾನ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡಿದ ಪ್ರಕಾಶ ನಾಯ್ಕ, ಯಕ್ಷಗಾನ ಕಲಾವಿದ ಹಾಗೂ ಅನೇಕ ವಿದ್ಯಾರ್ಥಿಗಳನ್ನು ಕಲಾವಿದರುಗಳಾಗಿ ತಯಾರು ಮಾಡಿರುವ ಉಮೇಶ ಭಟ್ಟ ಬಾಡ, ದೇಹದಾಡ್ಯ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ವಿಜೇತ ಹಾಗೂ ಇನ್ನಿತರ ಹಲವು ಪುರಸ್ಕಾರಗಳನ್ನು ಪಡೆದ ರಾಜೇಶ ಮಡಿವಾಳರಿಗೆ ಸನ್ಮಾನಿಸಲಾಯಿತು. ಅತೀ ತೊಂದರೆಯಲ್ಲಿರುವ ಮೂವರಿಗೆ ಸಮಿತಿ ವತಿಯಿಂದ ನಗದು ನೆರವು ನೀಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಂತಿಕಾಂಬ ಡಾನ್ಸ್ ಗ್ರೂಪ್ ತಂಡದಿಂದ ನಾಡು ನುಡಿಯ ಕುರಿತಾದ ವಿಶೇಷ ನೃತ್ಯ ಪ್ರದರ್ಶನ, ಸ್ನೇಹಾ ಹೆಗಡೆ ತಂಡದಿಂದ ವಿಶೇಷ ನೃತ್ಯರೂಪಕ, ಶಾಜ್ ಮ್ಯೂಸಿಕ ಮಂಗಳೂರು ಇವರಿಂದ ಕನ್ನಡ ನಾಡು ನುಡಿಗೆ ಸಂಬಂಧಪಟ್ಟ ಕನ್ನಡ ಸಿನೆಮಾ ಗೀತೆಗಳು ಹಾಗೂ ವಿಶ್ವೇಶ್ವರ ಪಟಗಾರ ಮತ್ತು ಗಣಪತಿ ಮುಕ್ರಿ ಇವರಿಂದ ಚಿತ್ರಕಲಾ ಪ್ರದರ್ಶನ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮಕ್ಕೆ ಮುನ್ನ ಸಂಜೆ ಮಣಕಿ ಮೈದಾನದಿಂದ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ