ನಿರ್ಲಕ್ಷ್ಯಕ್ಕೊಳಗಾದ ಶಿಲಾಶಾಸನ
Team Udayavani, May 12, 2019, 5:09 PM IST
ಯಲ್ಲಾಪುರ: ತಾಲೂಕಿನ ಚಂದ್ಗುಳಿ ಸಮೀಪದ ಮಳಲಗಾಂವ್ ರಸ್ತೆ ಬದಿ ಪುರಾತನ ಶಾಸನದ ಕುಸುರಿ ಕೆತ್ತನೆ ಇರುವ ಕಲ್ಲುಗಳು ಅನಾಥವಾಗಿ ಬಿದ್ದಿವೆ. ಹಿಂದಿನ ಕಾಲದ ವೈಭವ ಸಾರುವ ಕುರುಹುಗಳಾದ ಶಿಲಾಶಾಸನಗಳು ಇಂದು ಆಡಳಿತ, ಜನರ ಉಪೇಕ್ಷೆಗೆ ಒಳಗಾಗಿ ಹಾಳು ಸುರಿಯುತ್ತಿವೆ. ಸವಕಳಿ ಕಾಣುತ್ತಿದೆ. ಉತVನನದಂತಹ ಚಟುವಟಿಕೆ ನಡೆಯುತ್ತಿದೆ.
ಇದು ಶಾಸನವೋ, ವೀರಗಲ್ಲೋ ಅಥವಾ ರಣಕಲ್ಲೋ ಎಂಬುದು ಸ್ಥಳಿಯರಲ್ಲಿ ಸ್ಪಷ್ಟನೆ ಇಲ್ಲ. ಆದರೆ ಯಾವುದೋ ಐತಿಹ್ಯ ಸಾರುವ ಶಿಲಾ ಶಾಸನ ಎಂಬುದಂತೂ ಸತ್ಯ. ರಸ್ತೆಯ ಸಮೀಪ ನಿರ್ಲಕ್ಷಿತ ಸ್ಥಿತಿಯಲ್ಲಿವೆ. ಇವುಗಳ ಸುತ್ತಮುತ್ತ ಈ ಹಿಂದೆ ಅಗೆದ ಕುರುಹುಗಳಿದ್ದು, ಇಲ್ಲಿ ನಿಧಿ ಇತ್ಯಾದಿ ಇದೆ ಎಂಬ ಕಾರಣಕ್ಕೋ ಕೀಳುವ ಪ್ರಯತ್ನ ನೆಡೆಸಿರಬಹುದೆಂದು ಸ್ಥಳಿಯರು ಹೇಳುತ್ತಾರೆ.
ಪುರಾತನ ಕಾಲದ ಶಿವಲಿಂಗ ಇತ್ಯಾದಿ ಚಿತ್ರ ಬರಹಳನ್ನು ಇಂತಹ ಕಲ್ಲುಹಗಳ ಮೇಲೆ ಕೆತ್ತಲಾಗಿದೆ. ಇವುಗಳ ಮಹತ್ವ ತಿಳಿಯದೇ ಮಳೆ ಗಾಳಿಗೆ ನೆನೆಯುತ್ತ, ಬಿರಿಯುತ್ತ, ಆಗೀಗ ದುಷ್ಕರ್ಮಿಗಳ ದಾಳಿಗೆ ನಲುಗುತ್ತ ಶಿಲಾಶಾಸನ ನಿರ್ಲಕ್ಷಕ್ಕೆ ಒಳಗಾಗಿದೆ. ಇಂತಹ ಶಾಸನವನ್ನು ಸಂರಕ್ಷಿಸುವ, ಈ ಬಗ್ಗೆ ಅಧ್ಯಯನ ನಡೆಸಿ ಹಿಂದಿನ ಕಾಲದ ಕಥೆಗಳನ್ನು ತಿಳಿಸುವ ಪ್ರಯತ್ನ ಸಂಬಂಧಟ್ಟವರಿಂದ ಆಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?
Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ
Shiruru hill collapse; 10 ದಿನದಿಂದ ಇಲ್ಲೇ ಇದ್ದೇನೆ : ಟೀಕೆಗಳಿಗೆ ಶಾಸಕ ಸೈಲ್ ಬೇಸರ
Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು
Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್ ನಂಬಿಯಾರ್
MUST WATCH
ಹೊಸ ಸೇರ್ಪಡೆ
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.