331 ವಲಸೆ ಕಾರ್ಮಿಕರ ಗಂಟಲು ದ್ರವ ಸಂಗ್ರಹ
Team Udayavani, May 28, 2020, 11:05 AM IST
ಸಾಂದರ್ಭಿಕ ಚಿತ್ರ
ಸೈದಾಪುರ: ಪಟ್ಟಣದ ಮೂರು ಕ್ವಾರಂಟೈನ್ ಕೇಂದ್ರದಲ್ಲಿರುವ 331 ವಲಸೆ ಕಾರ್ಮಿಕರ ಮೂಗು ಮತ್ತು ಗಂಟಲು ದ್ರವದ ಮಾದರಿಯಲ್ಲಿ ಸಂಗ್ರಹಿಸಲಾಗಿದೆ. ಪಟ್ಟಣದ ಸ್ವಾಮಿ ವಿವೇಕಾನಂದ ವಸತಿ ಶಾಲೆಯಲ್ಲಿ 39, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ 37 ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ 255 ಕಾರ್ಮಿಕರ ಮಾದರಿ ಸಂಗ್ರಹಿಸಲಾಯಿತು.
ಯಾದಗಿರಿಯಿಂದ ಆಗಮಿಸಿದ ಮೊಬೈಲ್ ಸ್ವಾಬ್ ತಂಡ ಕ್ವಾರಂಟೈನ್ ನಲ್ಲಿರುವವರ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ ಕೋವಿಡ್ ವೈರಸ್ ಪರೀಕ್ಷೆಗಾಗಿ ಪ್ರಯೋಗಲಾಯಕ್ಕೆ ಕಳಿಹಿಸಿಕೊಟ್ಟಿದೆ. ಫಲಿತಾಂಶದ ವರದಿ ಅಧಿಕಾರಿಗಳ ಕೈ ಸೇರಲು ಇನ್ನು 3 ದಿನ ಬೇಕಾಗುತ್ತದೆ. ಆದರೆ ಫಲಿತಾಂಶದ ವರದಿಯೂ ಹೇಗೆ ಬರುತ್ತದೆ ಎಂಬ ಭಯ ಕ್ವಾರಂಟೈನ್ನಲ್ಲಿರುವ ಪ್ರತಿಯೊಬ್ಬ ವಲಸಿಗರನ್ನು ಕಾಡುತ್ತಿದೆ. ಇಲ್ಲಿಯವರೆಗೂ ಮೂರು ಕೇಂದ್ರಗಳಲ್ಲಿ ಒಂದು ಕೇಸ್ ಕೂಡ ಪಾಸಿಟಿವ್ ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಫಲಿತಾಂಶ ಪಾಸಿಟಿವ್ ಬಂದರೆ ಇಲ್ಲಿನ ಸ್ಥಿತಿ ಗತಿ ಹೇಗಿರುತ್ತದೆ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಕೇಂದ್ರಗಳಲ್ಲಿ ಜಿಲ್ಲಾಡಳಿತದ ಆದೇಶ ಗಾಳಿಗೆ ತೂರಿ ಸುರಕ್ಷಿತ ಅಂತರ ಮರೆತು ಸಾಮಾನ್ಯವಾಗಿ ಎಲ್ಲರೂ ಸಾಮೂಹಿಕವಾಗಿ ಇರುವುದರಿಂದ ತೆಲೆನೋವಾಗಿ ಪರಿಣಮಿಸಿದೆ.
ಡಾ| ರಾಮಣ್ಣಗೌಡ, ಡಾ| ಪ್ರಮೋದ, ಕಿರಿಯ ಆರೋಗ್ಯ ಸಹಾಯಕರಾದ ರಾಜೇಂದ್ರ, ಹಣಮಂತ, ತಾಯಪ್ಪ, ಚಂದ್ರನೀಲ ಬೆಳಗುಂದಿ, ಕವಿತಾ ವಿಭೂತಿ ಸೈದಾಪುರ, ಲ್ಯಾಬ್ ಟೆಕ್ನಿಷಿಯನ್ಸ್ ಸುಭಾಷ, ಮಂಜುನಾಥ, ರಿಚರ್ಡಸನ್, ಭಾಗಪ್ಪ, ವೆಂಕಟೇಶ, ನಾಗೇಂದ್ರಪ್ಪ ಮಾಧ್ವಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ