Watch SHOLY Real Ending: ಶೋಲೆ ಸಿನಿಮಾದ ರಿಯಲ್‌ ಕ್ಲೈಮ್ಯಾಕ್ಸ್‌ ಬದಲಾಯಿಸಿದ್ದೇಕೆ?

ಸಾಮಾಜಿಕ ಜಾಲತಾಣದಲ್ಲಿ ನಿಜವಾದ ಕ್ಲೈಮ್ಯಾಕ್ಸ್‌ ಬಗ್ಗೆ ಚರ್ಚೆ

Team Udayavani, May 23, 2024, 3:17 PM IST

Watch SHOLY Real Ending: ಶೋಲೆ ಸಿನಿಮಾದ ರಿಯಲ್‌ ಕ್ಲೈಮ್ಯಾಕ್ಸ್‌ ಬದಲಾಯಿಸಿದ್ದೇಕೆ?

ಮುಂಬೈ: ಭಾರತೀಯ ಸಿನಿಮಾರಂಗದ ಮಾಸ್ಟರ್‌ ಪೀಸ್‌ “ಶೋಲೆ” ಸಿನಿಮಾ ಬಿಡುಗಡೆಯಾಗಿದ್ದು 1975ರಲ್ಲಿ. ನಂತರ ಈ ಸಿನಿಮಾ ಸಾರ್ವಕಾಲಿಕ ದಾಖಲೆ ಬರೆದಿದ್ದು ಇಂದಿಗೂ ಇತಿಹಾಸವಾಗಿದೆ. ಬಾಲಿವುಡ್‌ ನ ಶೋಲೆ ಚಿತ್ರವನ್ನು ರಮೇಶ್‌ ಸಿಪ್ಪಿ ನಿರ್ದೇಶಿಸಿದ್ದು, ಅವರ ತಂದೆ ಜಿಪಿ ಸಿಪ್ಪಿ ಸಿನಿಮಾ ನಿರ್ಮಾಪಕರಾಗಿದ್ದರು. ಸಲೀಂ-ಜಾವೇದ್‌ ಚಿತ್ರಕಥೆ ಬರೆದಿದ್ದರು. ಸಿನಿಮಾ ಬಿಡುಗಡೆಯಾಗಿ 49 ವರ್ಷ ಕಳೆದಿದ್ದರೂ ಕೂಡಾ ಇಂದು ಸಾಮಾಜಿಕ ಜಾಲತಾಣದಲ್ಲಿ ನಿಜವಾದ ಕ್ಲೈಮ್ಯಾಕ್ಸ್‌ ಬಗ್ಗೆ ಚರ್ಚೆ ನಡೆಯುವ ಮೂಲಕ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:Iran; ರೈಸಿ ಅಂತ್ಯಕ್ರಿಯೆಯಲ್ಲಿ ಹಮಾಸ್, ಹೌತಿ, ತಾಲಿಬಾನ್ ನಾಯಕರು ಭಾಗಿ

49 ವರ್ಷಗಳ ಹಿಂದೆ ಬಿಡುಗಡೆಯಾಗಿ ದಾಖಲೆ ನಿರ್ಮಿಸಿದ್ದ ಶೋಲೆ ಸಿನಿಮಾದ ಕ್ಲೈಮ್ಯಾಕ್ಸ್‌ ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಠಾಕೂರ್‌ ಸಾಬ್…ಕ್ರಿಮಿನಲ್‌ ಗಬ್ಬರನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಸಿನಿಮಾ ಕೊನೆಗೊಳ್ಳುತ್ತದೆ. ಆದರೆ ನಿರ್ದೇಶಕ ಸಿಪ್ಪಿ ಅವರು ಗಬ್ಬರ್‌ ನನ್ನು ಠಾಕೂರ್‌ ಅವರು ಕೊಲ್ಲುವ ದೃಶ್ಯವನ್ನು ಕ್ಲೈಮ್ಯಾಕ್ಸ್‌ ನಲ್ಲಿ ಚಿತ್ರೀಕರಿಸಿದ್ದರು. ಕೊನೆಗೆ ಆ ದೃಶ್ಯವನ್ನು ಬದಲಾಯಿಸಿದ್ದು ಯಾಕೆ ಎಂಬುದು ತಿಳಿದಿದೆಯಾ?

ಶೋಲೆ ಸಿನಿಮಾದಲ್ಲಿನ ಒರಿಜಿನಲ್‌ ಕ್ಲೈಮ್ಯಾಕ್ಸ್‌ ಅನ್ನು ಬದಲಾಯಿಸಿದ್ದೇಕೆ?

2018ರಲ್ಲಿ ಪುಣೆಯ ಅಂತಾರಾಷ್ಟ್ರೀಯ ಸಿನಿಮಾ ಚಿತ್ರೋತ್ಸವ(PIFF)ದಲ್ಲಿ ಪಾಲ್ಗೊಂಡಿದ್ದ ನಿರ್ದೇಶಕ ರಮೇಶ್‌ ಸಿಪ್ಪಿ ಅವರು ಶೋಲೆ ಸಿನಿಮಾದಲ್ಲಿನ ಗಬ್ಬರ್‌  ಸಿಂಗ್‌ ಅಂತ್ಯ ಹೇಗಾಯಿತು ಎಂಬುದನ್ನು ಬಹಿರಂಗಪಡಿಸಿದ್ದರು. “ ನಾನು ಶೋಲೆ ಸಿನಿಮಾದ ಕ್ಲೈಮ್ಯಾಕ್ಸ್‌ ನಲ್ಲಿ ಗಬ್ಬರ್‌ ನನ್ನು ಠಾಕೂರ್‌ ಕೊಂದು ಬಿಡುವ ದೃಶ್ಯ ಚಿತ್ರೀಕರಿಸಿದ್ದೆ. ಆದರೆ ಸೆನ್ಸಾರ್‌ ಮಂಡಳಿ ಅಂದು ನಮಗೆ ಅದಕ್ಕೆ ಅನುಮತಿ ನೀಡಿರಲಿಲ್ಲ. ಎರಡೂ ಕೈಗಳಿಲ್ಲದ ಠಾಕೂರ್‌, ಕಾಲಿನಿಂದಲೇ ಒದ್ದು ಗಬ್ಬರ್‌ ನನ್ನು ಕೊಲ್ಲುವ ದೃಶ್ಯ ಸೆನ್ಸಾರ್‌ ಮಂಡಳಿಗೆ ಒಪ್ಪಿಗೆಯಾಗಿಲ್ಲವಾಗಿತ್ತು. ಆದರೂ ನಾನು ಠಾಕೂರ್‌ ಕೈಯಲ್ಲಿ ಗಬ್ಬರ್‌ ನನ್ನು ಕೊಲ್ಲಿಸುವುದು ಹೇಗೆ ಎಂಬ ಬಗ್ಗೆ ಚಿಂತಿಸಿದ್ದೆ. ಠಾಕೂರ್‌ ಕೈಗೆ ಗನ್‌ ಕೊಟ್ಟು ಸಾಯಿಸುವುದು ಅಸಾಧ್ಯವಾಗಿತ್ತು…ಯಾಕೆಂದರೆ ಠಾಕೂರ್‌ ಎರಡೂ ಕೈ ಕಳೆದುಕೊಂಡಿದ್ದರು. ಗನ್‌ ಬಳಸಿ ಹಿಂಸಾಚಾರಕ್ಕೆ ಒತ್ತು ಕೊಡುವ ಬಗ್ಗೆಯೂ ಸೆನ್ಸಾರ್‌ ಮಂಡಳಿ ಅಸಮಾಧಾನಗೊಂಡಿತ್ತು. ಕೊನೆಗೆ ಕ್ಲೈಮ್ಯಾಕ್ಸ್‌ ಬದಲಾಯಿಸುವಂತೆ ಸೆನ್ಸಾರ್‌ ಮಂಡಳಿ ಸೂಚಿಸಿತ್ತು. ಆ ಬಗ್ಗೆ ನಾನು ಖುಷಿಗೊಂಡಿರಲಿಲ್ಲ. ಅಂತೂ ಕ್ಲೈಮ್ಯಾಕ್ಸ್‌ ಬದಲಾಯಿಸಿದ್ದೆ ಎಂದು ತಿಳಿಸಿದ್ದರು. ಇದೀಗ ಶೋಲೆ ಸಿನಿಮಾದ ರಿಯಲ್‌ ಕ್ಲೈಮ್ಯಾಕ್ಸ್‌ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಆಗಿದೆ.

ಶೋಲೆ ಸಿನಿಮಾದಲ್ಲಿ ಧರ್ಮೇಂದ್ರ, ಅಮಿತಾಬ್‌ ಬಚ್ಚನ್‌, ಸಂಜೀವ್‌ ಕುಮಾರ್‌, ಅಮ್ಜದ್‌ ಖಾನ್‌, ಹೇಮಾ ಮಾಲಿನಿ ಹಾಗೂ ಜಯಾ ಬಚ್ಚನ್‌ ಸೇರಿದಂತೆ ಸ್ಟಾರ್‌ ನಟರು ನಟಿಸಿದ್ದರು.

ಟಾಪ್ ನ್ಯೂಸ್

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Bollywood: ʼಚಂದು ಚಾಂಪಿಯನ್‌ʼಗೆ ಪಾಸಿಟಿವ್‌ ರೆಸ್ಪಾನ್ಸ್:‌ ಮೊದಲ ದಿನ ಗಳಿಸಿದ್ದೆಷ್ಟು?

1-rt

ಗಲಾಟೆ ವಿವಾದ: ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ರವೀನಾ

Shilpa-Shetty

ನಟಿ ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ 90 ಲಕ್ಷ ರೂ. ವಂಚನೆ ಆರೋಪ?

1-wqewewq

Kerala ಕಾಲೇಜಿನಲ್ಲಿ ನಟಿ ಸನ್ನಿ ಲಿಯೋನ್‌ ನೃತ್ಯ ಪ್ರದರ್ಶನ ರದ್ದು: ಕಾರಣ?

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.