ಪಾಕ್ ಸೇನೆಯ 7 ಶಿಬಿರಗಳು ಧ್ವಂಸ
Team Udayavani, Apr 3, 2019, 6:30 AM IST
ಜಮ್ಮು: ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಮುಂಚೂಣಿ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿರಿಸಿಕೊಂಡು ನಿರಂತರವಾಗಿ ಅಪ್ರಚೋದಿತ ದಾಳಿ ನಡೆಸುತ್ತಿದ್ದ ಪಾಕಿಸ್ಥಾನಕ್ಕೆ ಮಂಗಳವಾರ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್ ಸೇನೆಗೆ ಸೇರಿದ 7 ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ. ಕನಿಷ್ಠ ಮೂವರು ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಲ್ವಾಮಾ ದಾಳಿ ಬಳಿಕದ ಬೆಳವಣಿಗೆಗಳ ಅನಂತರ ಪಾಕಿಸ್ಥಾನವು ನಿರಂತರವಾಗಿ ಶೆಲ್ ದಾಳಿ ನಡೆಸುತ್ತಾ ಬಂದಿತ್ತು. ಸೋಮವಾರ ಪಾಕ್ ದಾಳಿಯಿಂದ ಬಿಎಸ್ಎಫ್ ಇನ್ಸ್ಪೆಕ್ಟರ್ ಮತ್ತು 5 ವರ್ಷದ ಬಾಲಕಿ ಮೃತ ಪಟ್ಟಿದ್ದರು. ಮಂಗಳವಾರವೂ ರಜೌರಿ ಹಾಗೂ ಪೂಂಛ… ವ್ಯಾಪ್ತಿ ಪ್ರದೇಶಗಳ ಮೇಲೆ ಪಾಕ್ ಶೆಲ್ ದಾಳಿ ಮುಂದುವರಿಸಿತ್ತು. ಇದಕ್ಕೆ ಪ್ರತಿದಾಳಿ ನಡೆಸಿದ ಬಿಎಸ್ಎಫ್, ಪಿಒಕೆಯಲ್ಲಿನ ರಾಖ್ಚಿಕ್ರಿ ಮತ್ತು ರಾವಲ್ಕೋಟ್ ಮುಂಚೂಣಿ ನೆಲೆಯಲ್ಲಿರುವ 7 ಸೇನಾ ಶಿಬಿರಗಳನ್ನು ಸಂಪೂರ್ಣ ಧ್ವಂಸಗೊಳಿಸಿತು.
ಮೂವರು ಸೈನಿಕರ ಸಾವು
ಭಾರತ ನಡೆಸಿದ ದಾಳಿಯಿಂದ ನಮ್ಮ ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ಥಾನ ಸೇನೆ ಹೇಳಿ ಕೊಂಡಿದೆ. ಜತೆಗೆ ಭಾರತವೇ ಅಪ್ರಚೋದಿತ ದಾಳಿ ನಡೆ ಸಿದೆ ಎಂದು ಹಳೇ ರಾಗ ಹಾಡಿದೆ. ಇದೇ ವೇಳೆ ಪಾಕ್ನ ಗಡಿಯಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯ ವನ್ನೂ ಆರಂಭಿಸಿದೆ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಶಾಲೆಗಳಿಗೆ ರಜೆ; ವ್ಯಾಪಾರ ನಿರ್ಬಂಧ
ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೂಂಛ… ಮತ್ತು ರಜೌರಿ ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಇನ್ನೊಂದೆಡೆ, ಪೂಂಛ…ನ ಚಕನ್-ದಾ- ಬಾಗ್ ಮೂಲಕ ಎಲ್ಒಸಿ ನಡುವೆ ನಡೆ ಯುತ್ತಿದ್ದ ವ್ಯಾಪಾರ ವಹಿವಾಟುಗಳಿಗೆ ಮಂಗಳವಾರ ನಿರ್ಬಂಧ ಹೇರಲಾಗಿತ್ತು.
ಎಲ್ಲದಕ್ಕೂ ಸನ್ನದ್ಧ :ಬಿಎಸ್ಎಫ್ ಡಿಜಿ
ಪಾಕಿಸ್ಥಾನವು ನಿರಂತರವಾಗಿ ಕದನ ವಿರಾಮ ಉಲ್ಲಂ ಸುತ್ತಿದ್ದು, ಅತ್ತ ಕಡೆಯಿಂದ ಬರುವ ಯಾವುದೇ ಸವಾಲನ್ನೂ ಎದುರಿಸಲು ನಮ್ಮ ಸೇನೆ ಸಿದ್ಧವಾಗಿದೆ ಎಂದು ಬಿಎಸ್ಎಫ್ ಡಿಜಿ ರಜನಿಕಾಂತ್ ಮಿಶ್ರಾ ಮಂಗಳವಾರ ಹೇಳಿದರು. ಪಾಕ್ ದಾಳಿಗೆ ನಮ್ಮ ಯೋಧರು ತಕ್ಕ ಪ್ರತ್ಯು ತ್ತರ ನೀಡುತ್ತಿದ್ದಾರೆ. ಪಾಕಿಸ್ಥಾನವು ನಮ್ಮ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ದುರದೃಷ್ಟಕರ ಎಂದೂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ
MUST WATCH
ಹೊಸ ಸೇರ್ಪಡೆ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ