ಸ್ವಾಮಿ ಪ್ರಸಾದ್ ಮೌರ್ಯ ಒಬ್ಬ ಅವಕಾಶವಾದಿ: ಕಿಡಿ ಕಾರಿದ ಬೇಬಿ ರಾಣಿ ಮೌರ್ಯ
ದಲಿತ ಸಮುದಾಯದ ನನ್ನನ್ನು ಮೇಯರ್, ರಾಜ್ಯಪಾಲೆ , ಸಚಿವೆ ಮಾಡಿದ್ದು ಬಿಜೆಪಿ
Team Udayavani, Mar 27, 2022, 4:53 PM IST
ಹೊಸದಿಲ್ಲಿ: ದಲಿತರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಯೋಗಿ ಆದಿತ್ಯನಾಥ್ ಅವರ 2.0 ಸಂಪುಟದ ಹಿರಿಯ ಸಚಿವೆ ಬೇಬಿ ರಾಣಿ ಮೌರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಎನ್ಐ ಜೊತೆ ಮಾತನಾಡಿ, ”ಸ್ವಾಮಿ ಪ್ರಸಾದ್ ಮೌರ್ಯ ಒಬ್ಬ ಅವಕಾಶವಾದಿ. ಅವಕಾಶಗಳನ್ನು ಹುಡುಕಿಕೊಂಡು ಬಂದಿದ್ದರು. ಅವರು ಮಾಡಬೇಕಾದುದನ್ನು ಮಾಡಿದ ನಂತರ ಅವರು ಹೋದರು ಮತ್ತು ಇಂದು ಅವರ ಸ್ಥಿತಿ ಏನಾಗಿದೆ ಎಂಬುದನ್ನು ನೀವೇ ನೋಡಿ, ”ಎಂದು ಉತ್ತರಾಖಂಡ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ ಬಿಜೆಪಿ ನಾಯಕಿ ಕಿಡಿಕಾರಿದ್ದಾರೆ.
ತಾನು ಉತ್ತರ ಪ್ರದೇಶದ ದಲಿತ ಭಾಗವಾದ ಜಾತವ್ ಸಮುದಾಯಕ್ಕೆ ಸೇರಿದ್ದೇನೆ ಮತ್ತು ಸಮುದಾಯವು ನನ್ನ ಮೇಲೆ ಹೆಚ್ಚಿನ ಭರವಸೆಯಿಂದ ಎದುರು ನೋಡುತ್ತಿದೆ ಎಂದರು. ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ವೇದಿಕೆ ಕಲ್ಪಿಸಿಕೊಟ್ಟ ಬಿಜೆಪಿಯನ್ನು ಶ್ಲಾಘಿಸಿದ ಅವರು, ಬಿಜೆಪಿಯವರು ನನ್ನನ್ನು ‘ಮೇಯರ್ನಿಂದ ರಾಜ್ಯಪಾಲೆಯನ್ನಾಗಿ ಮಾಡಿ ನಂತರ ಸಂಪುಟ ಸಚಿವೆಯನ್ನಾಗಿ ಮಾಡಿದರು, ನಾನು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿದ್ದೇನೆ ಎಂದರು.
ವಿಧಾನಸಭೆ ಚುನಾವಣೆಗೆ ತಿಂಗಳ ಮೊದಲು ಸ್ವಾಮಿ ಪ್ರಸಾದ್ ಮೌರ್ಯ ಅವರು ಕಾರ್ಮಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್ಪಿ ಸೇರಿದ್ದರು. ಆದರೆ, ಅವರು ಫಾಜಿಲ್ನಗರ ಕ್ಷೇತ್ರದಿಂದ ಬಿಜೆಪಿಯ ಸುರೇಂದ್ರ ಕುಮಾರ್ ಕುಶ್ವಾಹ ವಿರುದ್ಧ 45,000 ಮತಗಳಿಂದ ಸೋತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ
MUST WATCH
ಹೊಸ ಸೇರ್ಪಡೆ
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ
Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ
Raichur; ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್ ವಂಚನೆ: ನಾರಾಯಣಸ್ವಾಮಿ
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ