Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ
Team Udayavani, Feb 24, 2024, 1:13 AM IST
ಮಡಿಕೇರಿ: ಹೋದವಾಡ ಗ್ರಾಮದ ಕೇಮಾಟ್ ಕಾಳಪ್ಪ ಮಾಡು ಎಂಬಲ್ಲಿ ಹುಲಿದಾಳಿಯಿಂದ ಹಸು ಚಿಂತಾಜನಕಗೊಂಡಿದ್ದು, ನಾಲ್ಕು ಹಸುಗಳು ನಾಪತ್ತೆಯಾಗಿವೆ. 2 ಹಸುಗಳ ಕಳೇಬರ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಗ್ರಾಮದ ಯೂಸುಫ್ ಹಾಜಿ ಪಶು ಸಂಗೋಪನೆ ಮಾಡುತ್ತಿದ್ದು, ಮೇಯಲು ಬಿಟ್ಟ ಹಸು ಹುಲಿ ದಾಳಿಯಿಂದ ತೀವ್ರವಾಗಿ ಗಾಯ ಗೊಂಡಿದೆ. ಮೈಮೇಲೆ ಅಲ್ಲಲ್ಲಿ ಹುಲಿಯ ಪಂಜದಿಂದ ಆಗಿರುವ ಗಾಯ ಗುರುತು ಕಂಡುಬಂದಿದ್ದು, ಹಸು ತೀವ್ರ ಅಸ್ವಸ್ಥಗೊಂಡಿದೆ. ಕಳೆದ ಒಂದು ವಾರದಲ್ಲಿ 4 ಹಸುಗಳು ನಾಪತ್ತೆಯಾಗಿದ್ದು, ಹುಡುಕಲು ತೆರಳಿದ ಯೂಸುಫ್ ಅವರಿಗೆ ಹುಲಿಯ ಹೆಜ್ಜೆ ಗುರುತು ಕಾವೇರಿ ನದಿ ದಡದಲ್ಲಿ ಕಂಡಿದೆ. ಮಾತ್ರವಲ್ಲ ಒಂದು ಹಸುವಿನ ಕಳೇಬರ ಸಿಕ್ಕಿದೆ.
ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಶು ಇಲಾಖೆ ಸಿಬಂದಿ ಹಸುವಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದಾರೆ.
ಕೇಮಾಟ್ ನಿವಾಸಿ ಅರುಣ್ ಕುಮಾರ್ ಅವರ ಅಡಿಕೆ ತೋಟದಲ್ಲಿ ಯೂಸುಫ್ ಅವರ ಇನ್ನೊಂದು ಕರುವಿನ ಕಳೇಬರ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ