Sullia: ಕುಸಿದು ಬಿದ್ದು ನಾಗಸ್ವರ ವಾದಕ ನಿಧನ
Team Udayavani, Mar 30, 2024, 9:34 PM IST
ಸುಳ್ಯ: ನಾಗಸ್ವರ ವಾದಕ ಜಾಲ್ಸೂರು ಗ್ರಾಮದ ಕುಂದ್ರಕೋಡಿಯ ಕೃಷ್ಣಪ್ಪ ಮೇಸ್ತ್ರಿ (56) ಮಾ. 29ರ ರಾತ್ರಿ ಪುತ್ತೂರಿನಲ್ಲಿ
ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕೃಷ್ಣಪ್ಪ ಅವರು ಹಲವಾರು ವರ್ಷಗಳಿಂದ ದೈವದ ನೇಮಕ್ಕೆ ನಾಗಸ್ವರ ವಾದಕರಾಗಿ (ವಾದ್ಯ ಊದುವ) ವೃತ್ತಿ ನಿರ್ವಹಿಸುತ್ತಿದ್ದು, ಮಾ. 29ರಂದು ಪುತ್ತೂರಿನ ಶೇಖಮಲೆಯಲ್ಲಿ ನೇಮದಲ್ಲಿ ನಾಗಸ್ವರ ನುಡಿಸುತ್ತಿದ್ದ ಸಂದರ್ಭ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.