ಪಲಿಮಾರು ಶ್ರೀಗಳು ಕೊಕ್ಕಡಕ್ಕೆ ಭೇಟಿ
Team Udayavani, Dec 23, 2017, 5:02 PM IST
ಕೊಕ್ಕಡ : ಉಡುಪಿಯ ಅಷ್ಟಮಠಗಳಲ್ಲೊಂದಾದ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳು ಉಡುಪಿಯ ಶ್ರೀಕೃಷ್ಣ ಮಠದ ಭಾವೀ ಪರ್ಯಾಯ ಪೀಠವೇರಲಿದ್ದು ಪರ್ಯಾಯ ಪೂರ್ವ ಸಂಚಾರದ ನಿಮಿತ್ತ ಗುರುವಾರ ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ಶ್ರೀ ವಿಷ್ಣು ಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು.
ಕೊಕ್ಕಡ ಭೇಟಿ ಸಂದರ್ಭ ಕೌಕ್ರಾಡಿ ಶ್ರೀ ಯಜ್ಞನಾರಾಯಣ ಮೂರ್ತಿ ಮಠ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಉಪ್ಪಾರು, ಆಲಡ್ಕ, ಹಿರ್ತರ, ಕೊಕ್ಕಡ ಮುಂತಾದ ಕಡೆಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಕೊಕ್ಕಡ ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್, ವೇದಮೂರ್ತಿ ಬಾಲಕೃಷ್ಣ ಕೆದಿಲಾಯ, ಪವಿತ್ರಪಾಣಿ ರಾಧಾಕೃಷ್ಣ ಯಡಪ್ಪಾಡಿತ್ತಾಯ, ಆಲಡ್ಕ ಗುರುರಾಜ ಉಪ್ಪಾರ್ಣ , ಸುರೇಶ ಮುಚ್ಚಿಂತಾಯ ಉಪಸ್ಥಿತರಿದ್ದರು. ಶ್ರೀಗಳು ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು.