ಪುತ್ತೂರು: ಸಂತೆ ಇಲ್ಲದಿದ್ದರೂ ಜನ ಸಂಚಾರ ಅಧಿಕ
Team Udayavani, May 26, 2020, 5:53 AM IST
ಪುತ್ತೂರು: ಐತಿಹಾಸಿಕ ಹಿನ್ನೆಲೆ ಹೊಂದಿರುವ ಪುತ್ತೂರು ಕಿಲ್ಲೆ ಮೈದಾನದ ಸೋಮವಾರ ಸಂತೆ ಲಾಕ್ಡೌನ್ ಬಳಿಕ ಸ್ಥಗಿತಗೊಂಡಿದ್ದರೂ ಸಂತೆ ನಡೆಯುವ ದಿನದಂದು ಜನರ ಸಂಚಾರ ಮಾತ್ರ ಕಡಿಮೆಯಾಗಿಲ್ಲ.
ಜನಸಂದಣಿ
ಸಂತೆ ಇಲ್ಲದಿದ್ದರೂ ಪುತ್ತೂರು ನಗರದಲ್ಲಿ ಸೋಮವಾರ ಜನರ ಓಡಾಟ ಹೆಚ್ಚಿದೆ. ಲಾಕ್ಡೌನ್ನ ಪ್ರಥಮ ಹಂತ ಹೊರತು ಪಡಿಸಿದರೆ ಉಳಿದ ಎರಡೂ ಲಾಕ್ಡೌನ್ಗಳ ಅವಧಿಯಲ್ಲಿಯೂ ನಗರದಲ್ಲಿ ಜನಸಂದಣಿ ಹೆಚ್ಚಿತ್ತು. ಗ್ರಾಮೀಣ ಜನರು ವಾರಕ್ಕೊಮ್ಮೆ ಪೇಟೆಗೆ ಬರುವ ರೂಢಿಯಿದ್ದು ಹೆಚ್ಚಾಗಿ ಸೋಮವಾರವೇ ಬರುತ್ತಾರೆ. ಇದರಿಂದ ಬಸ್ ಓಡಾಟ ಇಲ್ಲದಿದ್ದರೂ ಖಾಸಗಿ, ಬಾಡಿಗೆ ವಾಹನಗಳ ಓಡಾಟ ಅಧಿಕವಾಗಿತ್ತು.
ತರಕಾರಿ ಅಂಗಡಿಗೆ ಮಾರಾಟ
ಸಂತೆಗೆ ತಂದು ಕೃಷಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಗ್ರಾಮೀಣರು ಈಗ ಸಂತೆಯಿಲ್ಲದ್ದರಿಂದ ಅಂಗಡಿಗೆ ಕೊಡಬೇಕಾಗಿದೆ. ತರಕಾರಿ ಕೃಷಿ ನಡೆಸುವ ಕೃಷಿಕರಿಗೂ ಸಂತೆ ಹೆಚ್ಚು ಲಾಭದಾಯಕವಾಗಿತ್ತು. ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು ಬರುವುದರಿಂದ ಗ್ರಾಹಕರಿಗೂ ಕಡಿಮೆ ದರದಲ್ಲಿ ತರಕಾರಿ ಮತ್ತಿತರ ವಸ್ತುಗಳನ್ನು ಖರೀದಿಸಲು ಅನುಕೂಲವಾಗುತ್ತಿತ್ತು.
ಎಪಿಎಂಸಿ ಸಂತೆ ಸಫಲವಾಗಿಲ್ಲ
ಸಂತೆಗೆ ಪರ್ಯಾಯವಾಗಿ ಎಪಿಎಂಸಿ ಪ್ರಾಂಗಣದಲ್ಲಿ ರೈತ ಸಂತೆಗೆ ಪ್ರಯತ್ನ ನಡೆಸ ಲಾಯಿತಾದರೂ ರೈತರ ಸ್ಪಂದನೆ ಸಿಕ್ಕಿಲ್ಲ. ನಗರದಿಂದ ತುಸು ದೂರವಿರುವ ಎಪಿಎಂಸಿ ಪ್ರಾಂಗಣಕ್ಕೆ ಬರುವುದಕ್ಕೆ ರೈತರಿಗೆ ಸಮಸ್ಯೆಯಾದ ಕಾರಣ ವಿಫಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ