ಕುಕ್ಕಾವು: ಮತ್ತೆ ನೆರೆ ಮುನ್ಸೂಚನೆ ನೀಡಿದ ನದಿ ಪಾತ್ರ  

ಆತಂಕ ಸೃಷ್ಟಿಸಿದ ಮೊದಲ ಮಳೆ, ಕೃಷಿ ಸಲಕರಣೆ ನೀರುಪಾಲು

Team Udayavani, Jun 3, 2020, 5:30 AM IST

ಕುಕ್ಕಾವು: ಮತ್ತೆ ನೆರೆ ಮುನ್ಸೂಚನೆ ನೀಡಿದ ನದಿ ಪಾತ್ರ  

ಮುಂಡಾಜೆ: ದಿಡುಪೆ ಕಡೆಯಿಂದ ಹರಿಯುವ ನೇತ್ರಾವತಿ ನದಿಯು ಮೊದಲ ಮಳೆಗೇ ಉಕ್ಕಿ ಹರಿದು ದಿಡುಪೆ, ಕೊಲ್ಲಿ, ಮಿತ್ತಬಾಗಿಲು, ಕುಕ್ಕಾವು, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ ಮೊದಲಾದ ಗ್ರಾಮಗಳ ಜನರನ್ನು ಭೀತಿಗೆ ತಳ್ಳಿದೆ.

ಕೇವಲ ಎರಡು ಗಂಟೆಯ ಮಳೆ
ರವಿವಾರ ಮಧ್ಯಾಹ್ನದ ಬಳಿಕ ದಿಡುಪೆ ಕುಕ್ಕಾವು ಮೊದಲಾದ ಭಾಗಗಳಲ್ಲಿ ಎರಡು ಗಂಟೆ ಕಾಲ ಭಾರೀ ಮಳೆ ಸುರಿದಿದ್ದು, ನೇತ್ರಾವತಿ ನದಿಗೆ ಭಾರೀ ನೀರು ಬಂದಿದೆ. ಈ ನದಿಯ ಜತೆ ಸೇರುವ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಹಳ್ಳವೂ ತುಂಬಿ ತುಳುಕಿದೆ. ಒಂದು ಮಳೆಯಲ್ಲೇ ಪರಿಸ್ಥಿತಿ ಈ ರೀತಿಯಾದರೆ ಮಳೆಗಾಲದಲ್ಲಿ ಹೇಗಿದ್ದೀತು ಎಂಬ ಆತಂಕ ಸ್ಥಳೀಯರದ್ದಾಗಿದೆ.

ನದಿಯ ಆಸುಪಾಸಿನ ಕೆಲವು ಕೃಷಿಕರ ತೋಟದ ಪಂಪು, ಪೈಪ್‌ ಹಾಗೂ ಇನ್ನಿತರ ಕೃಷಿ ಸಾಮಗ್ರಿಗಳು ಮೊದಲ ಮಳೆಗೇ ನದಿ ನೀರಲ್ಲಿ ಕೊಚ್ಚಿ ಹೋಗಿವೆ.

ಸೋಲಾರ್‌ ಅಡಿಕೆ ಗೂಡುಗಳು ನೆಲ ಕಚ್ಚಿವೆ. ಕಡಿರುದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಕ್ಕಾವು ಇಂದಬೆಟ್ಟು ಸಂಪರ್ಕದ ಕೊಪ್ಪದಗಂಡಿ ಸೇತುವೆ ಮೇಲೆ ಸಾಕಷ್ಟು ದೊಡ್ಡ ಗಾತ್ರದ ಕಸದ ರಾಶಿ ಬಿದ್ದಿದ್ದು, ಸಂಚಾರಕ್ಕೆ ತೊಡಕುಂಟಾಗಿತ್ತು.

ಕಾರಣವೇನು?
ಸ್ಥಳೀಯರ ಪ್ರಕಾರ ನದಿಯ ಉಗಮ ಸ್ಥಾನಗಳಲ್ಲಿ ಭಾರೀ ಮಳೆಯಾಗಿದೆ. ಕಳೆದ ಪ್ರವಾಹ ಹಾಗೂ ಮಳೆಯ ಸಂದರ್ಭ ಗುಡ್ಡ, ಮರಮಟ್ಟು ಕುಸಿದು ನೀರು ಸರಾಗವಾಗಿ ಹರಿದು ಬರುತ್ತಿದೆ.

ನದಿ ಹರಿಯುವ ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ನದಿ ಮತ್ತು ಭೂಪ್ರದೇಶ ಸಮಾನಾಗಿದೆ. ಮೇಲ್ಭಾಗದಲ್ಲಿ ಹರಿಯುವ ನೀರು ದಿಕ್ಕು ಬದಲಾಯಿಸುತ್ತಿದೆ.

ಸ್ಥಳೀಯರು ಹಾಗೂ ಮರಳು ಸಾಗಾಟದವರು ಕಟ್ಟಿರುವ ನೀರಿನ ಕಟ್ಟಗಳು ಬಿಚ್ಚಿರುವುದು ಹಾಗೂ ಇನ್ನಿತರ ಕೆಲವು ಪ್ರಾಕೃತಿಕ ಕಾರಣಗಳಿಂದ ಈ ರೀತಿ ನೀರು ಒಮ್ಮೆಲೇ ಹರಿದು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಕ್ಷಣಾ ತಂಡ ಸನ್ನದ್ಧವಾಗಿದೆ
ಪ್ರವಾಹ, ಭೂ ಕುಸಿತ ಉಂಟಾಗುವ ಪ್ರದೇಶಗಳಲ್ಲಿ ಈಗಾಗಲೇ ಹೆಚ್ಚಿನ ಜಾಗೃತಿ ವಹಿಸಲಾಗಿದೆ. ವಿಪತ್ತಿನ ಸಂದರ್ಭ ಸ್ಥಳೀಯ ಪಂಚಾಯತ್‌ ಗಳ ಸಹಯೋಗದೊಂದಿಗೆ ರಕ್ಷಣಾ ತಂಡ ಸನ್ನದ್ಧವಾಗಿರುತ್ತದೆ.
 - ಕೆ.ಇ.ಜಯರಾಮ್‌, ಪ್ರಾಕೃತಿಕ ವಿಕೋಪಗಳ ನೋಡಲ್‌ ಅಧಿಕಾರಿ, ಬೆಳ್ತಂಗಡಿ.

ಆತಂಕ ಮೂಡಿಸಿದೆ
ನಾನು ಕಳೆದ 50ಕ್ಕಿಂತ ಹೆಚ್ಚಿನ ವರ್ಷಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದು, ಮಳೆಗಾಲ ಆರಂಭದ ಮೊದಲು ಈ ರೀತಿ ನದಿಗೆ ನೀರು ಬಂದಿಲ್ಲ. ಈ ಬಾರಿ ಒಂದು ಮಳೆಗೇ ಪ್ರವಾಹದ ರೀತಿ ನೀರು ಹರಿದಿರುವುದು ಆತಂಕ ಮೂಡಿಸಿದೆ.
 - ಬಾಬು ಗೌಡ,ಕೃಷಿಕ

ಟಾಪ್ ನ್ಯೂಸ್

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

1-wqewqeqwe

Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Praveen Nettar Case; Arrest of main accused Mustafa Paychar of Sulya

Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.