ಗುಂಡಿಬೈಲು: ಒಳಚರಂಡಿ ಅವ್ಯವಸ್ಥೆ
ಕೊಳಚೆ ನೀರು ಸೋರಿಕೆ, ಸ್ಥಳವೆಲ್ಲ ಗಬ್ಬುನಾತ, ಕ್ರಿಮಿಕೀಟಗಳ ಹಾವಳಿ
Team Udayavani, May 29, 2020, 5:07 AM IST
ಉಡುಪಿ: ಗುಂಡಿಬೈಲು ವ್ಯಾಪ್ತಿ ವಿಜಯತಾರ ಹೊಟೇಲ್ ಹಿಂಭಾಗ ಕಲ್ಕೂರ ಕೃಷ್ಣ ಅಪಾರ್ಟ್ಮೆಂಟ್ ಎದುರಿನ ರಸ್ತೆಯಲ್ಲಿ ಚರಂಡಿ ಪಿಟ್ನಿಂದ ಕೊಳಚೆ ನೀರು ಹರಿದು ಸ್ಥಳವೆಲ್ಲ ಗಬ್ಬುನಾತ ಬೀರುತ್ತಿದೆ.
ಈ ಪರಿಸರದಲ್ಲಿನ ವಸತಿ ಸಮುಚ್ಚಯ ಗಳಲ್ಲಿ ಹಲವಾರು ಕುಟುಂಬಗಳು ವಾಸ ಮಾಡುತ್ತಿದ್ದು, ಅನಾರೋಗ್ಯ ಭೀತಿ ಕಾಡು ತ್ತಿದೆ. ರಸ್ತೆ ಮೇಲೆ, ಆಸುಪಾಸಿನ ಸ್ಥಳಗಳಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿದೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆ ಯಾಗುತ್ತಿದ್ದು, ದುರ್ವಾಸನೆ, ಕ್ರಿಮಿ ಕೀಟಗಳ ಹಾವಳಿಯಿಂದ ರೋಗಭೀತಿ ಕಾಡುತ್ತಿದೆ. ಪರಿಸರದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ಸ್ಥಳೀಯರು.
ಶಾಶ್ವತ ಪರಿಹಾರ ಕಲ್ಪಿಸಿ
ಈ ಹಿಂದೆಯೂ ಹಲವು ಬಾರಿ ಇಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಪರಿಸರ ದಲ್ಲಿ ನಡೆದಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದೀಗ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.
ದುರಸ್ತಿಗೆ ಕ್ರಮ
ನಗರದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಗುಂಡಿಬೈಲು ಬಳಿಯ ಒಳಚರಂಡಿ ಸಮಸ್ಯೆ ಬಗ್ಗೆ ಪರಿಶೀಲಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
-ಮೋಹನ್ರಾಜ್,
ಎಇಇ, ಉಡುಪಿ ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ