ಉಡುಪಿ: ಇಂದು ನರ್ಮ್, ಗ್ರಾಮಾಂತರ ಬಸ್ ಓಡಾಟ ಅನುಮಾನ
Team Udayavani, Jun 1, 2020, 10:06 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕೋವಿಡ್-19 ಹಿನ್ನೆಲೆಯಲ್ಲಿ 5.0 ಹಂತದ ಮಾರ್ಗಸೂಚಿಯಂತೆ ಲಾಕ್ಡೌನ್ ಸಡಿಲಿಕೆಗೊಂಡಿದ್ದರೂ ಜೂ. 1ರಂದು ಉಡುಪಿ ವಿಭಾಗದ ಸಾರಿಗೆ ಸಂಸ್ಥೆಗೆ ಸೇರಿದ ಗ್ರಾಮಾಂತರ ಹಾಗೂ ನರ್ಮ್ ಬಸ್ಗಳು ಓಡಾಟ ನಡೆಸುವುದು ಅನುಮಾನ. ಬೇಡಿಕೆ ಆಧಾರಿಸಿ ಗ್ರಾಮೀಣ ಬಸ್ಗಳನ್ನು ಓಡಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಾರಿಗೆ ಸಂಸ್ಥೆಯ ಉಡುಪಿ ಡಿಪೋ ಮ್ಯಾನೇಜರ್ ಉದಯಕುಮಾರ್ ಶೆಟ್ಟಿ, ನರ್ಮ್ ಬಸ್ಗಳನ್ನು ತತ್ಕ್ಷಣದಿಂದ ಆರಂಭಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಬೇಡಿಕೆ ಆಧಾರಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಗ್ರಾಮಾಂತರದಲ್ಲೂ ಯಾವ ಮಾರ್ಗಗಳಲ್ಲಿ ಅಗತ್ಯವಿದೆಯೋ ಅವುಗಳನ್ನು ಗಮನಿಸಿ ಹಂತಹಂತವಾಗಿ ಬಸ್ ಓಡಿಸುವ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಹುತೇಕ ಬಸ್ಗಳ ಚಾಲಕ, ನಿರ್ವಾಹಕ ಸಿಬಂದಿ ಹೊರ ಜಿಲ್ಲೆಗಳವರು. ಲಾಕ್ಡೌನ್ ಅವಧಿಯಲ್ಲಿ ಅವರೆಲ್ಲ ತಮ್ಮ ಊರುಗಳಿಗೆ ಹೋಗಿದ್ದಾರೆ, ಅವರು ಕರ್ತವ್ಯಕ್ಕೆ ವಾಪಸ್ ಆಗಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಸದ್ಯ ಹೊರ ಜಿಲ್ಲೆಗಳಿಗೆ ಈಗ ಬಸ್ ಓಡಾಟ ನಡೆಸುತ್ತಿವೆ. ಸಂಸ್ಥೆ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಈ ಹಂತದಲ್ಲಿ ಪ್ರಯಾಣಿಕರಿಲ್ಲದ ಮಾರ್ಗದಲ್ಲಿ ನಷ್ಟದಲ್ಲಿ ಬಸ್ ಓಡಿಸುವುದುಇನ್ನೊಂದು ನಷ್ಟ ಎಂದವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ