ಹಾಲಿನ ಪಾತ್ರೆಗೆ ಕೊಳಚೆ ನೀರು: ದೂರು
Team Udayavani, Jul 18, 2019, 9:15 AM IST
ಉಡುಪಿ: ರೈಲಿನಲ್ಲಿ ಚಹಾ ಮಾರಾಟ ಮಾಡಿಕೊಂಡು ಬಂದಿದ್ದ ರೈಲ್ವೇ ಕ್ಯಾಟರಿಂಗ್ನ ಯುವಕನ ಬಳಿ ಇದ್ದ ಹಾಲಿನ ಪಾತ್ರೆಗೆ (ಕಿಟಲಿ) ಕೊಳಚೆ ನೀರು ಸೇರಿದ ಘಟನೆ ಬುಧವಾರ ಸಂಭವಿಸಿದ್ದು ಈ ಬಗ್ಗೆ ಪ್ರಯಾಣಿಕರೋರ್ವರು ರೈಲ್ವೇ ಇಲಾಖೆಗೆ ದೂರು ನೀಡಿದ್ದಾರೆ.
ಮುಂಬಯಿಯಂದ ಬಂದಿದ್ದ ಮತ್ಸಗಂಧಾ ರೈಲಿನಲ್ಲಿದ್ದ ಚಾಯ್ವಾಲಾ ಮಂಗಳೂರು-ಮಡ್ಗಾಂವ್ ಇಂಟರ್ಸಿಟಿ ರೈಲಿನಲ್ಲಿ ವಾಪಸ್ ಕುಮಟಾಕ್ಕೆ ತೆರಳುವುದಕ್ಕಾಗಿ ಮೂಲ್ಕಿ ರೈಲು ನಿಲ್ದಾಣದಲ್ಲಿ ಇಳಿದ. ಆಗ ಆತನ ಕೈಯಲ್ಲಿದ್ದ ಹಾಲಿನ ಪಾತ್ರೆ ಕೆಳಕ್ಕೆ ಬಿದ್ದು ಅದರಲ್ಲಿ ಕೊಳಚೆ ನೀರು ಸೇರಿಕೊಂಡಿತು. ಆತ ಅದನ್ನೇ ಹಿಡಿದುಕೊಂಡು ಇಂಟರ್ಸಿಟಿ ರೈಲು ಹತ್ತಿದ. ಇದನ್ನು ಗಮನಿಸಿದ ಪ್ರಯಾಣಿಕರೋರ್ವರು ಅದರ ಫೋಟೋ ತೆಗೆದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಾಯ್ವಾಲಾ ಗಲಾಟೆ ಮಾಡಲಾರಂಭಿಸಿ ಏರುದನಿಯಲ್ಲಿ ಪ್ರಯಾಣಿಕರನ್ನೇ ಗದರಿದ. ಪ್ರಯಾಣಿಕರು ರೈಲ್ವೇ ಇಲಾಖೆಗೆ ದೂರು ನೀಡಿದರು.
ಕಾರ್ಯಪ್ರವೃತ್ತರಾದ ರೈಲ್ವೇ ರಕ್ಷಣಾ ದಳದ ಪೊಲೀಸರು ರೈಲು ಉಡುಪಿಯಲ್ಲಿ ಇಳಿಯುತ್ತಿದ್ದಂತೆ ಚಾಯ್ವಾಲಾನನ್ನು ವಶಕ್ಕೆ ಪಡೆದು ರೈಲ್ವೇ ವಾಣಿಜ್ಯ ವಿಭಾಗದ ಅಧಿಕಾರಿಗಳಿಗೆ ಒಪ್ಪಿಸಿದರು. ಆತನಿಂದ ಮುಚ್ಚಳಿಕೆ ಬರೆಸಿ ದಂಡ ವಿಧಿಸಲಾಗಿದೆ.
ಮಾರಾಟಕ್ಕಲ್ಲ?
“ಈ ಚಾಯ್ವಾಲಾನದ್ದು ಕುಮಟಾ ಕೇಂದ್ರ. ಆತ ಅಲ್ಲಿಂದ ಮಂಗಳೂರು ಕಡೆಗೆ ಬರುವ ರೈಲಿನಲ್ಲಿ ಮಾತ್ರ ಚಹಾ ಮಾರಾಟ ಮಾಡಲು ಮಾನ್ಯತೆ ಹೊ0ದಿರುತ್ತಾನೆ. ವಾಪಸ್ ಹೋಗುವಾಗ ಆತ ಚಹಾ ಮಾರುವಂತಿಲ್ಲ. ಅದಕ್ಕೆ ಬೇರೆ ಚಾಯ್ವಾಲಾಗಳು ಇರುತ್ತಾರೆ. ಹಾಗಾಗಿ ಕೊಳಚೆ ನೀರಿನ ಚಹಾದ ಅಪಾಯ ಇರಲಿಲ್ಲ. ಈತ ಮೂಲ್ಕಿಯಲ್ಲಿ ಅವಸರದಿಂದ ಇಳಿಯುವಾಗ ಈ ಘಟನೆ ನಡೆದಿದೆ. ಆದರೆ ಆತ ಪ್ರಯಾಣಿಕರೊಂದಿಗೆ ಉದ್ಧಟತನದಿಂದ ವರ್ತಿಸಿದ್ದಾನೆ. ಆತನಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ
Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್ಪಾರ್ಕ್ ಸುರಕ್ಷಿತ
Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ
Udupi; ಬ್ಯಾಂಕ್ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ
Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್ ಆಗುವ ಭೀತಿ
MUST WATCH
ಹೊಸ ಸೇರ್ಪಡೆ
ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ
Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್ ಮಾಡಿದ್ರಾ ಸಮಂತಾ?: ಟ್ರೆಂಡ್ ಆದ ಸ್ಯಾಮ್
Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!