Gangolli: ಯುವಕ ಆತ್ಮಹತ್ಯೆ
Team Udayavani, Feb 22, 2024, 8:56 PM IST
ಗಂಗೊಳ್ಳಿ: ಗ್ರಾಮದ ಕಿರಣ್ (32) ಅವರು ಮೀನುಗಾರಿಕೆ ಬಗ್ಗೆ ಬ್ಯಾಂಕ್ನಲ್ಲಿ ಸಾಲ ಮಾಡಿ ದೋಣಿ ಖರೀದಿಸಿದ್ದು, ಇತ್ತೀಚೆಗೆ ದೋಣಿಗೆ ಸರಿಯಾಗಿ ಮೀನುಗಾರಿಕೆ ಆಗದೆ ಇದ್ದುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿರಣ್ ಕೈ ಸಾಲ ಕೂಡ ಮಾಡಿದ್ದು ಸಾಲ ಪಾವತಿಸಲಾಗದೆ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದರು. ಅವರನ್ನು ನೇಣಿನಿಂದ ಬಿಡಿಸಿ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕಿರಣ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು. ಪ್ರಕರಣ ದಾಖಲಾಗಿದೆ.