Vandse : ಅಸೌಖ್ಯದಿಂದ ಮಹಿಳೆ ಸಾವು
Team Udayavani, Feb 1, 2024, 1:33 AM IST
ಕುಂದಾಪುರ: ವಂಡ್ಸೆ ಗ್ರಾಮದ ರೂಪಾ (34) ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ರೂಪಾ ಅವರಿಗೆ ವಿಪರೀತ ತಲೆ ನೋವು ಬಂದ ಕಾರಣ ಮನೆಯವರೆಲ್ಲ ಸೇರಿ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿದ್ದರು.
ಆದರೆ ಮನೆಯವರಿಗೆ ಆಸ್ಪತ್ರೆ ವೆಚ್ಚ ಭರಿಸಲು ಆಗದೇ ಇದ್ದ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ಸರಕಾರದ ಉಚಿತ ಆರೋಗ್ಯ ಚಿಕಿತ್ಸೆ ಸೌಲಭ್ಯವಿರುವುದರಿಂದ ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮಣಿಪಾಲ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಅದಾಗಲೇ ರೂಪಾ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಮೃತರ ತಂಗಿ ಗುಲಾಬಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ರಿಕ್ಷಾ ಢಿಕ್ಕಿ: ಪಾದಚಾರಿಗೆ ಗಾಯ
ಕುಂದಾಪುರ: ಕೋಟೇಶ್ವರ ಗ್ರಾಮದ ಹಳವಳ್ಳಿ ಕೋಟಿ ಚೆನ್ನಯ್ಯ ಬಸ್ ನಿಲ್ದಾಣದ ಎದುರಿನ ಕೋಟೇಶ್ವರ- ಕೋಡಿ ಕಿನಾರಾ ಬೀಚ್ ರಸ್ತೆಯಲ್ಲಿ ಅಬೂಬಕ್ಕರ್ ಸಾದಿಕ್ ಹಮೀದ್ ಸಾಬ್ ಚಲಾಯಿಸುತ್ತಿದ್ದ ರಿಕ್ಷಾ, ಪಾದಚಾರಿ ಬೀಜಾಡಿ ಗ್ರಾಮದ ಲಕ್ಷ್ಮಣ (63) ಅವರಿಗೆ ಢಿಕ್ಕಿಯಾಗಿದೆ. ಗಾಯಾಳು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.