ಶರಣಬಸವ ವಿವಿಯಲ್ಲಿ ಗಣತಂತ್ರ ಸಂಭ್ರಮ
ನಮ್ಮ ಸಂಸ್ಥಾನ ದಾಸೋಹ ಸೇವೆಯನ್ನು ಮುಂದುವರೆಸುವಲ್ಲಿ ಪೂಜ್ಯ ಅವ್ವಾಜಿಯವರ ಶ್ರಮದಾಯಕ ಪ್ರಯತ್ನಗಳಿಗೆ ಧನ್ಯವಾದ
Team Udayavani, Jan 27, 2021, 3:45 PM IST
ಕಲಬುರಗಿ: ಶರಣಬಸವೇಶ್ವರ ಸಂಸ್ಥಾನವು ದೇಶದ ಹಿತಕ್ಕಾಗಿ ಸತತ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ, ಜನರ ಯೋಗ ಕ್ಷೇಮವನ್ನು ಕಾಪಾಡುತ್ತಾ ಬಂದಿದೆ ಎಂದು ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿ ಪತಿ ಹಾಗೂ ಶರಣಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಮತ್ತು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪರಮ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶರಣಬಸವ ವಿಶ್ವವಿದ್ಯಾಲಯ ಆವರಣದಲ್ಲಿ ಮಂಗಳವಾರ 72ನೇ ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೊಡಗು ಹಾಗೂ ಉತ್ತರ ಕರ್ನಾಟಕ ವಿಪತ್ತಿಗೆ ಸಿಲುಕಿದಾಗ ರಾಜ್ಯದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 1 ಕೋಟಿ, ಕೋವಿಡ್ ಸಂದರ್ಭದಲ್ಲಿ ಹಗಲಿರುಳು
ಸೇವೆ ಮಾಡಿದ್ದ ಆಶಾ ಕಾರ್ಯಕರ್ತರಿಗೆ 2 ಲಕ್ಷ ಸಹಾಯಧನ, ಭೀಮಾ ನದಿ ಪ್ರವಾಹಕ್ಕೆ ಸಿಕ್ಕು ತತ್ತರಿಸಿದ ಜನರ ಜೀವನ ಸುಧಾರಿಸಲು 20 ಲಕ್ಷ ಹಾಗೂ ಇಡೀ ದೇಶದ ಅಸ್ಮಿತೆಯಾಗಿರುವ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ 25 ಲಕ್ಷ ರೂ. ಸಮರ್ಪಿಸಲಾಗಿದೆ. ಕೊವೀಡ್ ಸಂಕಷ್ಟದ ಕಾಲದಲ್ಲಿ ಮೊದಲಿನಿಂದಲೂ
ಮಾಡಿದ್ದ ಅನ್ನದಾಸೋಹವನ್ನು ಕೂಡ ಇನ್ನೂ ಮುಂದುವರೆಸಿದ್ದು, ನೀರು, ನೆರಳು ನೀಡಿ ಪಾಲಿಸಲಾಗುತ್ತಿದೆ ಎಂದರು.
ಲಾಕ್ಡೌನ್ ಕಾಲದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನಗಳ ಮೂಲಕ ಬೋಧಿ ಸಿ, ವಿದ್ಯಾರ್ಥಿಗಳನ್ನು ಮಾನಸಿಕ ಸಶಕ್ತರನ್ನಾಗಿಸುತ್ತ ಬಂದಿದೆ. ಪಠ್ಯ ಚಟುವಟಿಕೆಗಳಲ್ಲಿ ತಮ್ಮ ಛಾಪು ಮೂಡಿಸಲು ಕಾರ್ಯತತ್ಪರರಾಗಿದ್ದಾರೆ. ಈ ಸಂದರ್ಭದಲ್ಲಿ ಅನೇಕ ವಿಚಾರ ಸಂಕೀರಣ (ವೇಬ್ನಾರ್)ಗಳನ್ನು ಹಮ್ಮಿಕೊಂಡು
ಅಧ್ಯಾಪಕರು ತಾವು ಸಹ ಅಧ್ಯಯನಶೀಲರು ಎಂದು ಸಾಬೀತುಪಡಿಸಿದ ಶಿಕ್ಷಕ ವರ್ಗಕ್ಕೆ ಡಾ| ಅಪ್ಪ ಅಭಿನಂದನೆ ಸಲ್ಲಿಸಿದರು.
ಸಹೋದರಿ ಕೋಮಲ ಎಸ್ ಅಪ್ಪಾ ಮಾತನಾಡಿ, ದೇಶವಾಸಿಗಳಿಗೆ ಆರೋಗ್ಯ ಮತ್ತು ಸಮೃದ್ಧಿಯನ್ನು ಆಶೀರ್ವದಿಸಲಿ ಎಂದು ಶರಣಬಸವೇಶ್ವರರಲ್ಲಿ
ವಿನಮ್ರವಾಗಿ ಪ್ರಾರ್ಥಿಸಿದರಲ್ಲದೇ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಹ ನಮ್ಮ ಸಂಸ್ಥಾನ ದಾಸೋಹ ಸೇವೆಯನ್ನು ಮುಂದುವರೆಸುವಲ್ಲಿ ಪೂಜ್ಯ ಅವ್ವಾಜಿಯವರ ಶ್ರಮದಾಯಕ ಪ್ರಯತ್ನಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿ ಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಹಾಗೂ
ಬೋರ್ಡ್ ಆಫ್ ಗವರ್ನರ್ನ ಸದಸ್ಯರಾದ ಮಾತೋಶ್ರೀ ಪೂಜ್ಯ ಡಾ| ದಾಕ್ಷಾಯಿಣಿ ಅವ್ವಾಜಿ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಕುಲಪತಿ ಡಾ| ನಿರಂಜನ್ ವಿ. ನಿಷ್ಠಿ, ಸಮಕುಲಪತಿ ಡಾ| ವಿ.ಡಿ. ಮೈತ್ರಿ ಮತ್ತು ಎನ್.ಎಸ್.ದೇವರಕಲ್, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ, ಡೀನ್ ಡಾ| ಲಕ್ಷ್ಮೀ ಪಾಟೀಲ ಮಾಕಾ ಮತ್ತು ಡಾ| ಬಸವರಾಜ ಮಠಪತಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಡೀನ್ ಡಾ| ಲಕ್ಷ್ಮೀ ಪಾಟೀಲ ಮಾಕಾ, ಪ್ರಾಚಾರ್ಯರಾದ ಡಾ| ಸುರೇಶ ನಂದಗಾಂವ, ಡಾ| ಎಸ್.ಜಿ. ಡೊಳ್ಳೇಗೌಡರ್, ಡಾ| ಎನ್.
ಎಸ್. ಪಾಟೀಲ ಇತರರು ಇದ್ದರು. ಸಹೋದರಿ ಮಹೇಶ್ವರಿ ಎಸ್.ಅಪ್ಪಾ, ಕೋಮಲ ಎಸ್. ಅಪ್ಪಾ, ಶಿವಾನಿ ಎಸ್. ಅಪ್ಪಾ ಹಾಗೂ ಅಪೂರ್ವ ದೇಶಭಕ್ತಿಗೀತೆ ಹಾಡಿದರು. ಶಿಕ್ಷಕರಾದ ಶಂಕರಗೌಡ ಹೊಸಮನಿ ಮತ್ತು ಚಂದ್ರಕಾಂತ ಪಾಟೀಲ ನಿರೂಪಿಸಿದರು. ಈ ಸಂದರ್ಭದಲ್ಲಿ ಎನ್. ಎಸ್.ಎಸ್ ಅ ಧಿಕಾರಿ ಮತ್ತು ವಿದ್ಯಾರ್ಥಿಗಳಿಂದ ಪರೇಡ್ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ
Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್ ಮಾಡಿದ್ರಾ ಸಮಂತಾ?: ಟ್ರೆಂಡ್ ಆದ ಸ್ಯಾಮ್
Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!
MUST WATCH
ಹೊಸ ಸೇರ್ಪಡೆ
ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ
Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್ ಮಾಡಿದ್ರಾ ಸಮಂತಾ?: ಟ್ರೆಂಡ್ ಆದ ಸ್ಯಾಮ್
Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!