Blind Chess: ರಾಷ್ಟ್ರೀಯ ಅಂಧರ ಚೆಸ್ ಕಿಶನ್ ಗಂಗೊಳ್ಳಿಗೆ 8ನೇ ಪ್ರಶಸ್ತಿ
Team Udayavani, Dec 26, 2023, 11:31 PM IST
ಕುಂದಾಪುರ: ಅಖೀಲ ಭಾರತೀಯ ಅಂಧರ ಚೆಸ್ ಫೆಡರೇಶನ್ (ಎಐಸಿಎಫ್ಬಿ) ವತಿಯಿಂದ ಬೆಂಗಳೂರಿನಲ್ಲಿ ನಡೆದ 17ನೇ ರಾಷ್ಟ್ರೀಯ ಅಂಧರ ಚೆಸ್ ಚಾಂಪಿಯನ್ಶಿಪ್ನಲ್ಲಿ ಕುಂದಾಪುರ ಮೂಲದ ಕಿಶನ್ ಗಂಗೊಳ್ಳಿ ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಬೆಂಗಳೂರಿನ ಆರ್ಯನ್ ಫೌಂಡೇಶನ್ನಲ್ಲಿ ನಡೆದ ಈ ಚಾಂಪಿಯನ್ಶಿಪ್ನಲ್ಲಿ ದೇಶದ 40 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಹಾಲಿ ಚಾಂಪಿಯನ್ ಕಿಶನ್ ಗಂಗೊಳ್ಳಿ 2,032 ಅಂಕ ಪಡೆಯುವ ಮೂಲಕ ಮತ್ತೆ ಅಗ್ರಸ್ಥಾನಿಯಾಗಿ ಮೂಡಿಬಂದರು. ತಮಿಳುನಾಡಿನ ಸಾಯಿಕೃಷ್ಣ ಎನ್.ಟಿ. 1,734 ಅಂಕ ಹಾಗೂ ಒಡಿಶಾದ ಪಾತ್ರ ಸುಬೆಂದು ಕುಮಾರ್ 1,732 ಅಂಕ ಪಡೆದು 2ನೇ ಹಾಗೂ 3ನೇ ಸ್ಥಾನಿಯಾದರು.
ಇದು ಅಂತಾರಾಷ್ಟ್ರೀಯ ಅಂಧರ ಚೆಸ್ ಟೂರ್ನಿಗಳಿಗೆ ಭಾರತೀಯರ ಆಯ್ಕೆಗೆ ಇರುವ ಪ್ರಮುಖ ಪಂದ್ಯಾವಳಿಯಾಗಿದೆ. ಇಲ್ಲಿ ಉತ್ತಮ ಆಟವಾಡಿದ ಕಿಶನ್ ಗಂಗೊಳ್ಳಿ ಸೇರಿದಂತೆ 12 ಮಂದಿ ಕ್ರೀಡಾಳುಗಳು ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ಅಂಧರ ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ರಾಜ್ಯ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಡಿ.ಪಿ. ಅನಂತ, ಆರ್ಯನ್ ಕೇರ್ ಫೌಂಡೇಶನ್ನ ಟ್ರಸ್ಟಿ ರಾಜಶೇಖರ್ ಎಂ.ಪಿ., ಪತ್ರಕರ್ತೆ ವಸಂತಿ ಹರಿಪ್ರಕಾಶ್, ಉದ್ಯಮಿ ಜಯರಾಮ್, ವಿಶ್ವ ಬಾಕ್ಸಿಂಗ್ ಚೆಸ್ ಚಾಂಪಿಯನ್ ಆರ್ಯನ್ ಸೂರ್ಯ, ಎಐಸಿಎಫ್ಬಿಯ ಕಾರ್ಯದರ್ಶಿ ಮನೀಷ್ ಟಿ. ಬಹುಮಾನ ವಿತರಣಾ ಸಮಾರಂಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Thomas Cup: ಬ್ಯಾಡ್ಮಿಂಟನ್; ಭಾರತದ ಆಟಕ್ಕೆ ತೆರೆ
Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ
T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್ ಅಗರ್ಕರ್
MUST WATCH
ಹೊಸ ಸೇರ್ಪಡೆ
Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು
Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ
Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’