Udupi: ಶ್ರೀರಾಘವಾನಂದಗಿರಿ ಸ್ವಾಮಿ ಇನ್ನಿಲ್ಲ


Team Udayavani, Feb 2, 2024, 12:34 AM IST

ramanand
ಉಡುಪಿ: ಉಡುಪಿ ತೆಂಕಪೇಟೆ ನಿವಾಸಿ ಬಿ. ರಮಾನಂದ ಪೈ ಯಾನೆ ಶ್ರೀರಾಘವಾನಂದಗಿರಿ ಸ್ವಾಮಿ (85) ಅವರು ಜ. 30ರಂದು ಪ್ರಯಾಗದಲ್ಲಿ ನಿರ್ಯಾಣ ಹೊಂದಿದರು. ಬುಧವಾರ ಪ್ರಯಾಗದ ಕ್ರಮದಂತೆ ಜಲಸಮಾಧಿ ನೆರವೇರಿಸಲಾಯಿತು.
ಬಗ್ಗರಬೆಟ್ಟು ವಾಸುದೇವ ಪೈ ಮತ್ತು ಕಲ್ಯಾಣಿ ಪೈ ದಂಪತಿಯ ಕಿರಿಯ ಪುತ್ರರಾಗಿದ್ದ ಅವರು ಅವಿವಾಹಿತರಾಗಿದ್ದರು. ಕೆನರಾ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ತಮ್ಮ 51ನೆಯ ವಯಸ್ಸಿನಲ್ಲಿ 1988ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಆಗ ಅವರು ಸ್ಪೆಶಲ್‌ ಅಸಿಸ್ಟೆಂಟ್‌ ಆಗಿದ್ದರು. ಕೆನರಾ ಬ್ಯಾಂಕ್‌ನೊಂದಿಗೆ ಪಾಂಗಾಳ ನಾಯಕ್‌ ಬ್ಯಾಂಕ್‌ ವಿಲೀನಗೊಳ್ಳುವ ಮೊದಲು ಪೈಯವರು ಉಡುಪಿಯಲ್ಲಿ, ಬಳಿಕ ಕಲ್ಯಾಣಪುರ, ಶಂಕರಪುರ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಆರಂಭದಿಂದಲೂ ಇವರು ಆಧ್ಯಾತ್ಮದ ಬಗ್ಗೆ ಅಪಾರ ಒಲವು ಹೊಂದಿದ್ದರು. 1980ರಲ್ಲಿ ಮಾನಸ ಸರೋವರ ಮತ್ತು ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದರು. ತಾಯಿಯ ಒತ್ತಾಸೆಗೆ ಕಟ್ಟುಬಿದ್ದು, ಸನ್ಯಾಸ ದೀಕ್ಷೆ ತೊಡುವ ತಮ್ಮ ಆಸೆಯನ್ನು ಅದುಮಿಟ್ಟು ತಾಯಿ ನಿಧನರಾಗುವವರೆಗೂ ಬ್ರಹ್ಮಚಾರಿಯಾಗಿ ಜೀವನ ಸಾಗಿಸಿದರು. ಬುಲೆಟ್‌ ಬೈಕನ್ನು ಉಡುಪಿಗೆ ಪ್ರಥಮ ಬಾರಿಗೆ ಪರಿಚಯಿಸಿದ್ದು ಇವರೆ. ಸುರುಳಿ ಮೀಸೆ ಹೊಂದಿದ ಇವರಿಗೆ ಮೀಸೆ ರಮಾನಂದು ಎಂಬ ಉಪನಾಮವಿತ್ತು.
-ನುರಿತ ಈಜುಪಟುವಾಗಿ ಹಲವು ಈಜುಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಇವರು ಮೈಸೂರು ದಸರಾ ಚಾಂಪಿಯನ್‌ ಆಗಿ ಹಲವು ಬಾರಿ ಪ್ರಶಸ್ತಿ ಪಡೆದಿದ್ದರು. ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಕೆರೆಯಲ್ಲಿ ಸುಮಾರು 28 ವರ್ಷಗಳ ಕಾಲ (1960 ರಿಂದ 1988) ಕಿರಿಯರಿಂದ ಹಿರಿಯರಾದಿಯವರೆಗೆ ಎಲ್ಲರಿಗೂ ಈಜುವ ವಿದ್ಯೆ ಕಲಿಸಿದ್ದರು.
-ಮಲ್ಪೆಯ ಸಮುದ್ರ ಕಿನಾರೆಯಿಂದ ಬಾದ್ರಗಡ ಮತ್ತು ಸೈಂಟ್‌ ಮೇರಿಸ್‌ ದ್ವೀಪಕ್ಕೆ ಈಜುತ್ತಾ ತಲುಪುವುದು, ಸಮುದ್ರದ ನೀರಿನಲ್ಲಿ, ಕೆರೆಯಲ್ಲಿ ಪದ್ಮಾಸನಗೈದು ಗಂಟೆಗಟ್ಟಲೆ ತೇಲುವುದು, ಇಂದ್ರಾಳಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಧ್ಯಾನಾಸಕ್ತರಾಗುವುದು ಅಲ್ಲದೆ ಮಣಿಪಾಲದ ಮಂಚಿಕೆರೆ ಪ್ರದೇಶದಲ್ಲಿ ಹರಿವ ನೀರಿನ ಸಣ್ಣ ಜಲಪಾತದ ಅಡಿಯಲ್ಲಿ ಗುಹೆಯೊಂದನ್ನು ನಿರ್ಮಾಣ ಮಾಡಿ ಇದರಲ್ಲಿ ತಪೋನಿರತರಾಗಿ ಆಧ್ಯಾತ್ಮಿಕ ಚಿಂತನೆಗೈಯುತ್ತಿದ್ದರು.
-ಹನುಮಂತನನ್ನು ಸದಾ ಆರಾಧಿಸುತ್ತಿದ್ದ ಇವರು ವ್ಯಾಯಾಮ ಮುಖೇನ ಆರೋಗ್ಯವನ್ನು ಕಾಪಾಡಿಕೊಳ್ಳುವ ಧ್ಯೇಯದೊಂದಿಗೆ 1960ರಲ್ಲಿ ಭಜರಂಗಬಲಿ ವ್ಯಾಯಾಮ ಶಾಲೆಯನ್ನು ಐಡಿಯಲ್‌ ಜಂಕ್ಷನ್‌ನಲ್ಲಿ ಸ್ಥಾಪನೆಗೈದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ವ್ಯಾಯಾಮ ಕಲಿಯಲು ಪ್ರೇರೇಪಿಸಿದರು. ಸ್ವತಃ ಕಠಿನ ಪರಿಶ್ರಮದಿಂದ ದೇಹದಾಡ್ಯ ಪಟುವಾಗಿ ಅಸಂಖ್ಯ ಸ್ಪರ್ಧಾ ವಿಜೇತರಾಗಿ, ಮೈಸೂರು ದಸರಾ ಚಾಂಪಿಯನ್‌ ಆಗಿದ್ದು, ಸಹಸ್ರಾರು ಶಿಷ್ಯಂದಿರನ್ನು ತಯಾರು ಮಾಡಿದ್ದರು.
-ಅಶಕ್ತರಿಗೆ ಸಂದರ್ಭೋಚಿತ ವೈದ್ಯಕೀಯ ಮತ್ತು ವಿದ್ಯಾರ್ಜನೆಯ ಸಹಾಯ ಒದಗಿಸಿದ ಇವರು ಪ್ರಾಣಿಪ್ರಿಯರಾಗಿದ್ದರು. ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಜಿ.ಎಸ್‌.ಬಿ. ಯುವಕ ಮಂಡಳಿಯಲ್ಲಿ ಸಕ್ರಿಯ ಸದಸ್ಯರಾಗಿ, ಭಜನ ಮಂಡಳಿಯೊಂದಿಗೆ ಊರು ಪರವೂರಿನಲ್ಲೆಲ್ಲಾ ಭಜನ ಪಾಳಿಯೊಂದಿಗೆ ಕೊಳಲು ವಾದಕರಾಗಿ ಸೇವೆ ಸಲ್ಲಿಸಿದ್ದರು.
-ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಹೊಂದಿ ಕಾಶಿಯಲ್ಲಿರುವ ಶ್ರೀ ಕಾಶೀಮಠ ಸಂಸ್ಥಾನದ ಶಾಖಾ ಮಠದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ್ದರು. ಹೃಷಿಕೇಶ, ಗಂಗೋತ್ರಿ ಮುಂತಾದ ಪುಣ್ಯಕ್ಷೇತ್ರಗಳಲ್ಲಿ ಸಾಧು ಸಂತರೊಡನೆ ಧಾರ್ಮಿಕ ಚಿಂತನೆಯಲ್ಲಿ ಸಾಗಿ ಕಾಲಾನಂತರದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದರು. ಶ್ರೀರಾಘವಾನಂದ ಗಿರಿ ಸ್ವಾಮಿ ನಾಮಧೇಯದೊಂದಿಗೆ ಪ್ರಯಾಗದ ಓಮಾನಂದ ಆಶ್ರಮದಲ್ಲಿ ಸಾಧಕರಾಗಿದ್ದರು.

ಟಾಪ್ ನ್ಯೂಸ್

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!

Madikeri ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.