TN: ಯಾರಪ್ಪನ ಆಸ್ತೀನೂ ಕೇಳ್ತಿಲ್ಲ- ಉದಯನಿಧಿ ನಾಲಗೆ ಹಿಡಿತದಲ್ಲಿರಲಿ: ಸಚಿವೆ ನಿರ್ಮಲಾ
ತ.ನಾಡು ಪ್ರವಾಹ ಪರಿಹಾರದ ವಿಚಾರದಲ್ಲಿ ವಾಕ್ಸಮರ
Team Udayavani, Dec 24, 2023, 12:50 AM IST
ಹೊಸದಿಲ್ಲಿ: ತಮಿಳುನಾಡು ಪ್ರವಾಹ ಪರಿಹಾರ ವಿಚಾರ ಕ್ಕೆ ಸಂಬಂಧಿಸಿದಂತೆ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಡುವಿನ ವಾಗ್ವಾದ ತಾರಕಕ್ಕೇರಿದೆ. “ಯಾರಪ್ಪನ ಆಸ್ತಿಯನ್ನೂ ಕೇಳುತ್ತಿಲ್ಲ” ಎಂದು ಉದಯನಿಧಿ ಹೇಳಿದರೆ, ಇತ್ತ “ನಿಮ್ಮಪ್ಪನ್ನ ಆಸ್ತಿಯಲ್ಲಿ ಅಧಿಕಾರಕ್ಕೆ ಬಂದಿರುವಿರೇ” ಎಂದು ಸಚಿವೆ ನಿರ್ಮಲಾ ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯಕ್ಕೆ ಕೇಂದ್ರ ಸರಕಾರ ಪ್ರವಾಹ ಪರಿಹಾರದ ರೂಪದಲ್ಲಿ ಹಣ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿ ಉದಯನಿಧಿ ಆಕ್ರೋಶ ವ್ಯಕ್ತಪಡಿಸಿದ್ದರು. “ನಾನು ನಮ್ಮ ರಾಜ್ಯದ ಜನರು ತೆರಿಗೆ ಕಟ್ಟಿರುವ ಹಣವನ್ನು ಕೇಳುತ್ತಿದ್ದೇನೆಯೇ ವಿನಾ ಯಾರಪ್ಪನ ಆಸ್ತಿಯನ್ನೂ ಕೇಳುತ್ತಿಲ್ಲ” ಎಂದಿದ್ದರು.
ಈ ಬಗ್ಗೆ ಸಚಿವೆ ನಿರ್ಮಲಾ ಪ್ರತಿಕ್ರಿಯಿಸಿ, ಸಾರ್ವಜನಿಕ ಪ್ರತಿನಿಧಿಯಾದವರಿಗೆ ನಾಲಗೆ ಹಿಡಿತದಲ್ಲಿರಬೇಕು. ನಾವೂ ಅವರನ್ನು ನಿಮ್ಮಪ್ಪನ ಆಸ್ತಿಯಲ್ಲಿ ಅಧಿಕಾರಕ್ಕೆ ಬಂದಿರುವಿರೇ ಎಂದು ಪ್ರಶ್ನಿಸಬಹುದಲ್ಲವೇ? ಆದರೆ ಜನಪ್ರತಿನಿಧಿಗಳಿಗೆ, ನಮ್ಮ ಸ್ಥಾನಕ್ಕೆ ಅಂಥ ಮಾತುಗಳು ಸೂಕ್ತವಲ್ಲ. ರಾಜಕೀಯಕ್ಕೆ ಯಾರ ಅಪ್ಪನನ್ನೂ, ಅಮ್ಮ ನನ್ನು ಎಳೆದು ತರುವ ಅಗತ್ಯವಿಲ್ಲ. ತ.ನಾಡಿಗೆ ಕೇಂದ್ರ 900 ಕೋಟಿ ರೂ. ಬಿಡುಗಡೆ ಮಾಡಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ
Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್ ಆದೇಶದಲ್ಲೇನಿದೆ?
MUST WATCH
ಹೊಸ ಸೇರ್ಪಡೆ
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ
UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ
B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು
ಬಿಜೆಪಿ ಶಾಸಕ ಯತ್ನಾಳ ಶುಗರ್ ಫ್ಯಾಕ್ಟ್ರಿ ಹೆಂಗ್ ಕಟ್ಟಿದ್ರು: ಶಿವಾನಂದ ಪಾಟೀಲ