Tiger; ಪೀಲೀಭಿತ್ ಕ್ಷೇತ್ರದಲ್ಲಿ ಹುಲಿ ಸಮಸ್ಯೆಯೇ ಚುನಾವಣ ವಿಚಾರ!
Team Udayavani, Apr 16, 2024, 6:25 AM IST
ಪಿಲೀಭೀತ್: ಉ.ಪ್ರ.ದ ಪೀಲೀಭೀತ್ನಲ್ಲಿ ಹಾಲಿ ಸಂಸದ ವರುಣ್ ಗಾಂಧಿ ಸ್ಪರ್ಧಿಸಲಿದ್ದಾರೆಯೇ ಎಂಬ ವಿಚಾರಕ್ಕೆ ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಈಗ ಆ ಕ್ಷೇತ್ರದ 300 ಗ್ರಾಮಗಳಲ್ಲಿ ಹುಲಿ ದಾಳಿಯ ವಿಚಾರವೇ ಚುನಾವಣ ವಿಚಾರವಾಗಿ ಮಾರ್ಪಾ ಡಾಗಿದೆ. ಇಲ್ಲಿನ ಸಂರಕ್ಷಿತ ಪ್ರದೇಶದ ಸಮೀಪವಿರುವ 300 ಗ್ರಾಮಗಳು ಪದೇ ಪದೆ ಹುಲಿಗಳ ದಾಳಿಯಿಂದ ಸುದ್ದಿಯಾಗುತ್ತವೆ.
2019ರ ನವೆಂಬರ್ನಿಂದ ಇಲ್ಲಿಯವರೆಗೆ 22 ಗ್ರಾಮಸ್ಥರು ಹುಲಿಗೆ ಬಲಿಯಾಗಿದ್ದಾರೆ. ಹೀಗಾಗಿ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಸ್ಥಳೀಯರು ಬಿಜೆಪಿ, ಕಾಂಗ್ರೆಸ್, ಎಸ್ಪಿ ನಾಯಕರಿಗೆ ಆಗ್ರಹ ಮಾಡಿದ್ದಾರೆ. ಗ್ರಾಮಸ್ಥರ ಒತ್ತಡ ಹಿನ್ನೆಲೆಯಲ್ಲಿ ಕ್ಷೇತ್ರದ ವಿವಿಧ ಸ್ಥಳಗಳಿಗೆ ಸಮಾಜವಾದಿ ಪಕ್ಷದ ನಾಯಕ ಭಾಗವತ್ ಶರಣ್ ಗಂಗ್ವಾರ್ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ.
ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಜಿತಿನ್ ಪ್ರಸಾದ ಮತ್ತು ಎಸ್ಪಿಯಿಂದ ಮಾಜಿ ಸಚಿವ ಭಗವತ್ ಸರಣ್ ಗಂಗ್ವಾರ್ ಸ್ಪರ್ಧಿಸಿದ್ದಾರೆ. ಎ.19ರಂದು ಮೊದಲ ಹಂತದಲ್ಲಿ ಅಲ್ಲಿ ಮತದಾನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್ ನಕಾರ
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್