ದೇವರ ದರ್ಶನಕ್ಕೆ ತೆರಳುತ್ತಿದ್ದವರ ಮೇಲೆ ಹರಿದ ಟ್ರಕ್: 11 ಮಂದಿ ಸ್ಥಳದಲ್ಲೇ ದುರ್ಮರಣ
Team Udayavani, May 26, 2024, 10:57 AM IST
ಲಕ್ನೋ: ನಿಲ್ಲಿಸಿದ್ದ ಬಸ್ ಗೆ ಟ್ರಕ್ ವೊಂದು ಢಿಕ್ಕಿ ಹೊಡೆದ ಪರಿಣಾಮ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಶನಿವಾರ(ಮೇ.25 ರಂದು) ರಾತ್ರಿ ನಡೆದಿದೆ.
ಬಸ್ನಲ್ಲಿದ್ದ ಜನ ಸೀತಾಪುರದಿಂದ ಪೂರ್ಣಗಿರಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಬಸ್ ಶಹಜಾನ್ಪುರದ ಡಾಬಾದ ಬಳಿ ನಿಂತಿತ್ತು. ಇದೇ ದಾರಿಯಲ್ಲಿ ಬರುತ್ತಿದ್ದ ಕಲ್ಲು ತುಂಬಿದ್ದ ಟ್ರಕ್ ನಿಂತಿದ್ದ ಬಸ್ ಗೆ ಢಿಕ್ಕಿ ಹೊಡೆದು, ಬಸ್ಸಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ 11 ಮಂದಿ ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಹಿಳೆಯರು ಮಕ್ಕಳು ಸೇರಿದಂತೆ ಒಟ್ಟು 11 ಮಂದಿ ಮೃಪಟ್ಟಿದ್ದು, 10 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಟ್ರಕ್ ಅಡಿಯಲ್ಲಿದ್ದ ದೇಹಗಳನ್ನು ಹೊರತೆಗೆಯಲಾಯಿತು.
ರಾತ್ರಿ 11.30 ರ ಸುಮಾರಿಗೆ ಗೋಲಾ ಬೈಪಾಸ್ ರಸ್ತೆಯಲ್ಲಿ ಕಲ್ಲು ತುಂಬಿದ ಟ್ರಕ್ ಢಾಬಾ ಬಳಿ ನಿಂತಿದ್ದ ಬಸ್ಗೆ ಡಿಕ್ಕಿ ಹೊಡೆದು ಅದರ ಮೇಲೆ ಪಲ್ಟಿಯಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ಕೆಲವರು ಢಾಬಾದಲ್ಲಿ ಊಟ ಮಾಡುತ್ತಿದ್ದರು ಮತ್ತು ಇತರರು ಬಸ್ನೊಳಗೆ ಕುಳಿತಿದ್ದರು. 11 ಮಂದಿ ಮೃತಪಟ್ಟಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ನಾವು ಎಲ್ಲಾ ದೇಹಗಳನ್ನು ಹೊರತೆಗೆದು ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಶಹಜಹಾನ್ಪುರ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ʼಇಂಡಿಯಾ ಟುಡೇʼಗೆ ತಿಳಿಸಿದ್ದಾರೆ.
ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NITI Aayog ಸಭೆಯಲ್ಲಿ ಯಾರು ಭಾಗವಹಿಸಲಿಲ್ಲವೋ ಅವರಿಗೇ ನಷ್ಟ: ಬಿ.ವಿ.ಆರ್.ಸುಬ್ರಹ್ಮಣ್ಯಂ
Science ಸೀಟ್ ಸಿಗದ ಕೊರಗಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ!
NITI Aayog ಸಭೆ; ಎಲ್ಲಾ ರಾಜ್ಯಗಳ ಪ್ರಯತ್ನದಿಂದ ವಿಕಸಿತ ಭಾರತ್ ಗುರಿ: ಪ್ರಧಾನಿ
Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು
Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ
MUST WATCH
ಹೊಸ ಸೇರ್ಪಡೆ
MUDA Site: ಸಚಿವ ಬೈರತಿ ವಿರುದ್ಧ ಕಾನೂನು ಹೋರಾಟ: ಶಾಸಕ ಜಿಟಿಡಿ ಎಚ್ಚರಿಕೆ
34 years old case: ಹೊಳೆಹೊನ್ನೂರು ನಿವಾಸಿ ಅರೆಸ್ಟ್!
K.N. Rajanna: ಮುಡಾ ನಿವೇಶನ ವಾಪಸ್ ನೀಡಿ ಆರೋಪ ಮಾಡಲಿ; ರಾಜಣ್ಣ
Satish Jarakiholi: ಬಿಜೆಪಿಯವರು ಪ್ರತಿಭಟಿಸಲಿ, ನಾವು ಉತ್ತರ ನೀಡ್ತೇವೆ; ಸತೀಶ್
Priyank Kharge: ಸಿದ್ದು-ಡಿಕೆಶಿ ಬಂಧನಕ್ಕೆ ಬಿಜೆಪಿ ನಾಯಕರ ಹುನ್ನಾರ; ಪ್ರಿಯಾಂಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.