ಚೇನಾಬ್ ನದಿಗೆ ವ್ಯಾನ್ ಉರುಳಿ 13 ಯಾತ್ರಿಕರ ಸಾವು
Team Udayavani, Aug 22, 2018, 9:30 AM IST
ಜಮ್ಮು: ಯಾತ್ರಿಕರನ್ನು ದೇವಸ್ಥಾನಕ್ಕೆ ಹೊತ್ತು ಸಾಗುತ್ತಿದ್ದ ವ್ಯಾನೊಂದು ಉರುಳಿ ಚೇನಾಬ್ ನದಿಗೆ ಬಿದ್ದ ಕಾರಣ, ಎಲ್ಲ 13 ಪ್ರಯಾಣಿಕರೂ ಮೃತಪಟ್ಟಿರುವ ಘಟನೆ ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಕಿಶ್ತ್ವಾರ್ನಲ್ಲಿ ನಡೆದಿದೆ.
ವ್ಯಾನ್ ಚಾಲಕ ಮತ್ತು ನಿರ್ವಾಹಕ ಹೊರತುಪಡಿಸಿ ಉಳಿದ 11 ಮಂದಿ ಇಲ್ಲಿಯ ಮಾತಾ ಮಚಲಿ ದೇವಸ್ಥಾನಕ್ಕೆ ತೆರಳುತ್ತಿದ್ದರು.
5 ವರ್ಷದ ಬಾಲಕಿಯೂ ಮೃತರ ಪೈಕಿ ಸೇರಿದ್ದು, ರಕ್ಷಣೆ ನಡೆಸಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಆಕೆ ಕೊನೆಯುಸಿರೆಳೆದಿದಾರೆ.
ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ಛಿದ್ರಗೊಂಡಿದೆ.