ಜಮ್ಮು ಕಾಶ್ಮೀರ : ಭದ್ರತಾ ಪಡೆಗಳ ಗುಂಡಿಗೆ ಮೂವರು ಪೌರರ ಸಾವು
Team Udayavani, Jul 7, 2018, 4:11 PM IST
ಕುಲಗಾಂವ್ : ಜಮ್ಮು ಕಾಶ್ಮೀರದ ಕುಲಗಾಂವ್ ಜಿಲ್ಲೆಯಲ್ಲಿಂದು ಶನಿವಾರ ಭದ್ರತಾ ಪಡೆಗಳು ಹಾರಿಸಿದ್ದೆನ್ನಲಾದ ಗುಂಡಿಗೆ ಮೂವರು ಪೌರರು ಹತರಾಗಿದ್ದಾರೆ.
ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದಾಗ ಹವೂರಾ ಗ್ರಾಮದಲ್ಲಿ ಉದ್ರಿಕ್ತ ಜನರ ಗುಂಪು ಸೈನಿಕರ ಮೇಲೆ ಕಲ್ಲೆಸೆತದಲ್ಲಿ ತೊಡಗಿಕೊಂಡಿತು. ಪರಿಣಾಮವಾಗಿ ನಡೆದ ಗುಂಡು ಹಾರಾಟದಲ್ಲಿ ಮೂವರು ಪೌರರು ಮೃತಪಟ್ಟರು.
ಗಾಯಾಳುಗಳನ್ನು ಒಡನೆಯೇ ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಯಿತು.
ಘಟನೆಯನ್ನು ಅನುಸರಿಸಿ ದಕ್ಷಿಣ ಕಾಶ್ಮೀರ ಜಿಲ್ಲೆಗಳಾದ ಕುಲಗಾಂವ್, ಶೋಪಿಯಾನ್, ಅನಂತನಾಗ್ ಮತ್ತು ಪುಲ್ವಾಮದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಯನ್ನು ಅಮಾನತುಗೊಳಿಸಲಾಯಿತು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಹುರಿಯತ್ ನಾಯಕ ಮೀರ್ವೆಜ್ ಉಮರ್ ಫಾರೂಕ್ ಅವರು “ಇದೊಂದು ನರಮೇಧ’ ಎಂದು ಖಂಡಿಸಿದರು.
ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಪೌರರನ್ನು ಶಕೀರ್ ಅಹ್ಮದ್ ಖಂದಾಯ್ 22, ಇರ್ಷಾದ್ ಮಜೀದ್ 20 ಮತ್ತು ಹದಿಹರೆಯದ ಹುಡುಗಿ ಅಂದ್ಲೀಬ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಡಜನ್ಗಟ್ಟಲೆ ಜನರಲ್ಲಿ ಹಲವರ ಸ್ಥಿತಿ ಗಂಭೀರವಿದೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು