ಕರಡಿಯನ್ನು ಕಾಡಿದವರಿಗೆ ಛೀಮಾರಿ
Team Udayavani, May 12, 2019, 6:00 AM IST
ಕಾರ್ಗಿಲ್: ಬೆಟ್ಟದ ಕಲ್ಲು ಬಂಡೆಗಳ ಮೇಲೆ ಕುಳಿತಿದ್ದ ಕರಡಿಯೊಂದು ಪ್ರವಾಸಿಗರ ಕೀಟಲೆ ದುರ್ಬುದ್ಧಿಯಿಂದಾಗಿ, ಬೆಟ್ಟದಿಂದ ಜಾರಿ ಪ್ರಪಾತದಲ್ಲಿ ಹರಿಯುತ್ತಿದ್ದ ನದಿಗೆ ಬಿದ್ದಿರುವ ಮನಕಲಕುವ ಘಟನೆ ಕಾರ್ಗಿಲ್ನಲ್ಲಿ ನಡೆದಿದೆ. ಇದರ 8 ಸೆಕೆಂಡ್ಗಳ ವಿಡಿಯೋ ತುಣುಕನ್ನು ಕಾಶ್ಮೀರದ ಪ್ರವಾ ಸೋದ್ಯಮ ಇಲಾಖೆ ನಿರ್ದೇಶಕ ಮೊಹ ಮೂದ್ ಶಾ ಅವರು, ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕರಡಿಗಾದ ತೊಂದರೆಗೆ ಖೇದ ವ್ಯಕ್ತಪಡಿಸಿರುವ ಜನ, ಅದಕ್ಕೆ ಕಾಟ ಕೊಟ್ಟವರಿಗೆ ಹಿಡಿ ಶಾಪ ಹಾಕಿದ್ದಾರೆ.
ಆಗಿದ್ದೇನು?: ಕಾರ್ಗಿಲ್ನ ಲಡಾಖ್ ಪ್ರಾಂತ್ಯದ ಡಾಸ್ ಬೆಟ್ಟದಲ್ಲಿ ಅಡ್ಡಾಡಿ ಕೊಂಡಿದ್ದ ಈ ಕರಡಿ ಯನ್ನು ಸುತ್ತಲಿನ ಕೆಲ ಹಳ್ಳಿಗರು ಅಟ್ಟಿಸಿ ಕೊಂಡು ಹೋಗಿದ್ದಾರೆ. ಭಯದಿಂದಾಗಿ ಅದು ದುರ್ಗಮ ಬೆಟ್ಟ ಹತ್ತಲು ಯತ್ನಿಸಿದೆ. ಸುಮಾರು ಮುಕ್ಕಾಲು ಬೆಟ್ಟ ಹತ್ತಿದ್ದ ಆ ಕರಡಿಯ ಕಡೆಗೆ ಕೆಲವು ಹಳ್ಳಿಗರು ಕಲ್ಲೆಸೆದಿದ್ದಾರೆ. ಗಲಿ ಬಿಲಿಗೊಂಡ ಕರಡಿ ಬೆಟ್ಟ ಏರಲು ಹೊರಟಾಗ ಆಯತಪ್ಪಿ ಕೆಳಗೆ ಬೆಟ್ಟದ ತಪ್ಪಲಲ್ಲಿ ಹರಿಯುತ್ತಿದ್ದ ನದಿಗೆ ಬಿದ್ದಿದೆ. ಘಟನೆ ವಿಡಿಯೋ ವೈರಲ್ ಆಗುತ್ತಲೇ ಸ್ಥಳೀಯ ಪೊಲೀಸ್ ಠಾಣೆ ಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕರ ಡಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ತಪ್ಪಿ ತಸ್ಥರ ಪತ್ತೆಗೂ ಬಲೆ ಬೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ