Rameswaram Cafe Case; ಕುಲಕರ್ಣಿ, ಪಟೇಲ್ ಹೆಸರಲ್ಲಿ ಕೆಫೆ ಬಾಂಬರ್ಗಳ ಸುತ್ತಾಟ !
ಗುರುತು ಮರೆಮಾಚಲು ಹಿಂದೂ ಹೆಸರುಗಳ ಬಳಕೆ; ಮಹಾರಾಷ್ಟ್ರ , ಕರ್ನಾಟಕದ ಪ್ರವಾಸಿಗರು ಎಂದು ಹೇಳಿಕೆ
Team Udayavani, Apr 14, 2024, 6:55 AM IST
ಹೊಸದಿಲ್ಲಿ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ನಡೆಸಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರು ತಮ್ಮ ಗುರುತು ಮರೆಮಾಚಲು ಕುಲಕರ್ಣಿ, ಪಟೇಲ್ ಮತ್ತಿತರ ಹಿಂದೂ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ತಿಳಿದು ಬಂದಿದೆ.
ದಿಘಾ ಪಟ್ಟಣದಲ್ಲಿ ಎನ್ಐಎ ಶಂಕಿತ ಉಗ್ರ ರಾದ ಮುಸಾವಿರ್ ಮತ್ತು ತಾಹಾನನ್ನು ಶುಕ್ರವಾರ ಬಂಧಿಸಿತ್ತು. ಮಾ. 25ರಂದು ಅವರಿಬ್ಬರು, “ನಾವು ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಸಿಗರು’ ಎಂದು ಹೇಳಿ ನ್ಯೂ ದಿಘಾದ ಗೆಸ್ಟ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದರು.
ಸೂತ್ರಧಾರಿ ತಾಹಾನು ವಿಘ್ನೇಶ್ ಬಿ.ಡಿ., ಅನ್ಮೋಲ್ ಕುಲಕರ್ಣಿ ಹೆಸರಿನಲ್ಲಿ ಮತ್ತು ಶಾಜೀಬ್ ಮಹಾರಾಷ್ಟ್ರದ ಪಾಲ್ಗಾರ್ನ ಯುಶಾ ಶಹನ್ವಾಜ್ ಪಟೇಲ್ ಹೆಸರಿನಲ್ಲಿ ಕೋಲ್ಕೊತಾದ ವಿವಿಧ ಲಾಡ್ಜ್ಗಳಲ್ಲಿ ವಾಸ್ತವ್ಯ ಹೂಡಿದ್ದರು. ಇನ್ನು ಕೆಲವು ಕಡೆ ಅವರು ಝಾರ್ಖಂಡ್ ಮತ್ತು ತ್ರಿಪುರಾದ ಸಂಜಯ್ ಅಗರ್ವಾಲ್ ಮತ್ತು ಉದಯ್ ದಾಸ್ ಹೆಸರಿನಲ್ಲಿ ತಂಗಿದ್ದರು ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಸಿಸಿಟಿವಿ ವೀಡಿಯೋ ಬಹಿರಂಗ: ಇನ್ನೊಂದೆಡೆ ಶಂಕಿತ ಉಗ್ರ ರಾದ ಶಾಜೀಬ್ ಮತ್ತು ತಾಹಾ ಇಬ್ಬರೂ ಕೋಲ್ಕತಾದ ಇಕ್ಬಾಲ್ಪುರ್ ಗೆಸ್ಟ್ ಹೌಸ್ನಲ್ಲಿ ಪ್ರವೇಶ ಪಡೆದ ಸಿಸಿಟಿವಿ ದೃಶ್ಯಾವಳಿಗಳು ಕೂಡ ಈಗ ಬಯಲಾಗಿವೆ. ಮುಸಾವಿರ್ ಹುಸೇನ್ ಶಾಜೀಬ್ ರಾಮೇಶ್ವರ್ ಕೆಫೆಯಲ್ಲಿ ಬಾಂಬ್ ಇಟ್ಟ ವ್ಯಕ್ತಿಯಾದರೆ ಮತೀನ್ ಇಡೀ ಬಾಂಬ್ ಸ್ಫೋಟದ ಹಿಂದಿನ ಮುಖ್ಯ ಸಂಚುಕೋರನಾಗಿದ್ದಾನೆ ಎಂದು ಎನ್ಐಎ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.