Rameswaram Cafe Case; ಕುಲಕರ್ಣಿ, ಪಟೇಲ್ ಹೆಸರಲ್ಲಿ ಕೆಫೆ ಬಾಂಬರ್ಗಳ ಸುತ್ತಾಟ !
ಗುರುತು ಮರೆಮಾಚಲು ಹಿಂದೂ ಹೆಸರುಗಳ ಬಳಕೆ; ಮಹಾರಾಷ್ಟ್ರ , ಕರ್ನಾಟಕದ ಪ್ರವಾಸಿಗರು ಎಂದು ಹೇಳಿಕೆ
Team Udayavani, Apr 14, 2024, 6:55 AM IST
ಹೊಸದಿಲ್ಲಿ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ನಡೆಸಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರು ತಮ್ಮ ಗುರುತು ಮರೆಮಾಚಲು ಕುಲಕರ್ಣಿ, ಪಟೇಲ್ ಮತ್ತಿತರ ಹಿಂದೂ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ತಿಳಿದು ಬಂದಿದೆ.
ದಿಘಾ ಪಟ್ಟಣದಲ್ಲಿ ಎನ್ಐಎ ಶಂಕಿತ ಉಗ್ರ ರಾದ ಮುಸಾವಿರ್ ಮತ್ತು ತಾಹಾನನ್ನು ಶುಕ್ರವಾರ ಬಂಧಿಸಿತ್ತು. ಮಾ. 25ರಂದು ಅವರಿಬ್ಬರು, “ನಾವು ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಸಿಗರು’ ಎಂದು ಹೇಳಿ ನ್ಯೂ ದಿಘಾದ ಗೆಸ್ಟ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದರು.
ಸೂತ್ರಧಾರಿ ತಾಹಾನು ವಿಘ್ನೇಶ್ ಬಿ.ಡಿ., ಅನ್ಮೋಲ್ ಕುಲಕರ್ಣಿ ಹೆಸರಿನಲ್ಲಿ ಮತ್ತು ಶಾಜೀಬ್ ಮಹಾರಾಷ್ಟ್ರದ ಪಾಲ್ಗಾರ್ನ ಯುಶಾ ಶಹನ್ವಾಜ್ ಪಟೇಲ್ ಹೆಸರಿನಲ್ಲಿ ಕೋಲ್ಕೊತಾದ ವಿವಿಧ ಲಾಡ್ಜ್ಗಳಲ್ಲಿ ವಾಸ್ತವ್ಯ ಹೂಡಿದ್ದರು. ಇನ್ನು ಕೆಲವು ಕಡೆ ಅವರು ಝಾರ್ಖಂಡ್ ಮತ್ತು ತ್ರಿಪುರಾದ ಸಂಜಯ್ ಅಗರ್ವಾಲ್ ಮತ್ತು ಉದಯ್ ದಾಸ್ ಹೆಸರಿನಲ್ಲಿ ತಂಗಿದ್ದರು ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಸಿಸಿಟಿವಿ ವೀಡಿಯೋ ಬಹಿರಂಗ: ಇನ್ನೊಂದೆಡೆ ಶಂಕಿತ ಉಗ್ರ ರಾದ ಶಾಜೀಬ್ ಮತ್ತು ತಾಹಾ ಇಬ್ಬರೂ ಕೋಲ್ಕತಾದ ಇಕ್ಬಾಲ್ಪುರ್ ಗೆಸ್ಟ್ ಹೌಸ್ನಲ್ಲಿ ಪ್ರವೇಶ ಪಡೆದ ಸಿಸಿಟಿವಿ ದೃಶ್ಯಾವಳಿಗಳು ಕೂಡ ಈಗ ಬಯಲಾಗಿವೆ. ಮುಸಾವಿರ್ ಹುಸೇನ್ ಶಾಜೀಬ್ ರಾಮೇಶ್ವರ್ ಕೆಫೆಯಲ್ಲಿ ಬಾಂಬ್ ಇಟ್ಟ ವ್ಯಕ್ತಿಯಾದರೆ ಮತೀನ್ ಇಡೀ ಬಾಂಬ್ ಸ್ಫೋಟದ ಹಿಂದಿನ ಮುಖ್ಯ ಸಂಚುಕೋರನಾಗಿದ್ದಾನೆ ಎಂದು ಎನ್ಐಎ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ