ದಿಲ್ಲಿ: ಪತ್ನಿಯ ಕೊಂದು ಶಿರಚ್ಛೇದ ಮಾಡಿ ಹಾಸಿಗೆಯಡಿ ಅಡಗಿಸಿಟ್ಟ ಪತಿ 


Team Udayavani, Feb 15, 2017, 11:05 AM IST

Murder-700.jpg

ಹೊಸದಿಲ್ಲಿ : 40ರ ಹರೆಯದ ವ್ಯಕ್ತಿಯೋರ್ವ ತನ್ನ ಮೊದಲ ಪತ್ನಿಯನ್ನು ಹೊಡೆದು ಕೊಂದು, ಆಕೆಯ ದೇಹವನ್ನು ಎರಡು ಭಾಗ ಮಾಡಿ ಶವದ ವಿಲೇವಾರಿ ಮಾಡಲು ಯತ್ನಿಸಿ ಪೊಲೀಸರಿಂದ ಬಂಧಿತನಾದ ಅತ್ಯಂತ ಅಮಾನುಷ ಹಾಗೂ ಆಘಾತಕಾರಿ ಘಟನೆ ವ್ಯಾಲೆಂಟೈನ್‌ ದಿನದಂದು ಬೆಳಕಿಗೆ ಬಂದಿದೆ.

ಮೊದಲ ಪತ್ನಿ 35ರ ಹರೆಯದ ಮನೀಷಾಳನ್ನು ಹೊಡೆದು ಕೊಂದು  ಶಿರಚ್ಛೇದ ಗೈದ ವ್ಯಕ್ತಿಯನ್ನು ಸುಬೋಧ್‌ ಎಂದ ಗುರುತಿಸಲಾಗಿದೆ. ಮನೀಷಾಗೆ ಅನೈತಿಕ ಸಂಬಂಧ ಇದೆ ಎಂಬ ಗುಮಾನಿಯಲ್ಲಿ ಆಕೆಯನ್ನು ಆತ ಫೆ.10 ಮತ್ತು 11ರ ನಡುವಿನ ರಾತ್ರಿಯಲ್ಲಿ ಹೊಡೆದು ಕೊಂದಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸುಬೋಧ್‌ ನಿಂದ ಮೊದಲ ಪತ್ನಿ ಮನೀಷಾಗೆ ಇಬ್ಬರು ಮಕ್ಕಳಿದ್ದಾರೆ. ಈಕೆ ತನ್ನಿಬ್ಬರು ಮಕ್ಕಳೊಂದಿಗೆ ಶಾಕೂರ್‌ಪುರದಲ್ಲಿ ವಾಸವಾಗಿದ್ದಾಳೆ. ಸುಬೋಧ್‌ ತನ್ನ ಎರಡನೇ ಪತ್ನಿ ಮುನಿಯಾ ಹಾಗೂ ಎರಡು ತಿಂಗಳ ಮಗುವಿನ ಜತೆಗೆ ಮಧು ವಿಹಾರದಲ್ಲಿ ವಾಸವಾಗಿದ್ದಾನೆ.

ಫೆ.10-11ರ ರಾತ್ರಿ ಸುಬೋಧ್‌ ತನ್ನ ಮೊದಲ ಪತ್ನಿ ಮನೀಷಾಳನ್ನು ಮಧು ವಿಹಾರದಲ್ಲಿನ ತನ್ನ ಮನೆಗೆ, ಮಾತನಾಡಲು ಬರುವಂತೆ, ಕರೆಸಿಕೊಂಡಿದ್ದಾನೆ. ಆಕೆಯೊಂದಿಗೆ ಆಕೆಯ ಇಬ್ಬರು ಮಕ್ಕಳು ಕೂಡ ಬಂದಿದ್ದಾರೆ. 

ಮೈಮೇಲೆ ಆವೇಶ ಬಂದವನಂತೆ ಪತಿ ಸುಬೋಧ್‌ ಪತ್ನಿ ಮನೀಷಾಳ ಮೇಲೆ ನಿರ್ದಯವಾಗಿ ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದಾನೆ. ಎರಡನೇ ಪತ್ನಿ ಮುನಿಯಾ, ಮತ್ತು ತನ್ನ ಇಬ್ಬರು ಮಕ್ಕಳು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸುಬೋಧ್‌, ಮೊದಲ ಪತ್ನಿ ಮನೀಷಾಳ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಲಿಲ್ಲ.

ಮಾರಣಾಂತಿಕ ಗಾಯಗಳಿಗೆ ಗುರಿಯಾದ ಮನೀಷಾ ಕೊನೆಗೂ ಸಾವಪ್ಪಿದ್ದಾಳೆ. ಆಗ ಆಕೆಯ ಶವದ ಶಿರಚ್ಛೇದ ಮಾಡಿ, ದೇಹವನ್ನು ತುಂಡರಿಸಿ, ಬ್ಯಾಗ್‌ನೊಳಗೆ ತುರುಕಿ ಅದನ್ನು ಬಾಕ್ಸ್‌-ಬೆಡ್‌ನ‌ ಒಳಗಡೆ ಇರಿಸಿದ್ದಾನೆ. 

ಮರುದಿನ ಸುಬೋಧ್‌ನ ಮನೆಯಿಂದ ಶವದ ದುರ್ನಾತ ಹೊರ ಬರಲು ಆರಂಭಿಸಿದಾಗ ಶಂಕೆಪಟ್ಟ ನೆರೆಕರೆಯವರು ಒಡನೆಯೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಧಾವಿಸಿ ಬಂದ ಪೊಲೀಸರು ಶವವನ್ನು ತುಂಡರಿಸಿ ಅಡಗಿಸಿಡಲಾಗಿದ್ದ  ಪೆಟ್ಟಿಗೆಯನ್ನು ಪತ್ತೆ ಹಚ್ಚಿ ಸುಬೋಧ್‌ನನ್ನು ಬಂಧಿಸಿದ್ದಾರೆ. 

ಪೊಲೀಸರು ಈ ಅತ್ಯಮಾನುಷ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.